ದ್ವೇಷದ ಕಿಚ್ಚು;ಅಮೆರಿಕದಲ್ಲಿ ಭಾರತೀಯನ ಮನೆಗೆ ನಾಯಿ ಮಲ,ಮೊಟ್ಟೆ ಎಸೆತ


Team Udayavani, Feb 28, 2017, 12:05 PM IST

Colorado-700.jpg

ಪೇಟನ್‌ : ಅಮೆರಿಕದಲ್ಲಿ ಮತ್ತೋರ್ವ ಭಾರತೀಯನ ಮೆಲೆ ದ್ವೇಷಾಪರಾಧ ನಡೆದಿರುವುದು ವರದಿಯಾಗಿದೆ. ದಕ್ಷಿಣ ಕೊಲರಾಡೋದಲ್ಲಿನ ಈ ಭಾರತೀಯನ ಮನೆಯ ಮೇಲೆ ನಾಯಿ ಹೇಲು, ಕೊಳೆತ ಮೊಟ್ಟೆ ಇತ್ಯಾದಿ ಅಸಹ್ಯ ತ್ಯಾಜ್ಯಗಳನ್ನು ಎಸೆಯಲಾಗಿದೆ ಮಾತ್ರವಲ್ಲ ಜನಾಂಗೀಯ ನಿಂದನೆ ಹಾಗೂ ಬೈಗುಳಗಳನ್ನು ಬರೆಯಲಾದ ಕಾಗದಗಳಲ್ಲಿ ಈ ತ್ಯಾಜ್ಯಗಳನ್ನು ತುಂಬಿಸಿ ಎಸೆಯಲಾಗಿರುವುದು ಕಂಡುಬಂದಿದೆ. 

ಕಳೆದ ಫೆ.6ರಂದು ಬೆಳಕಿಗೆ ಬಂದಿರುವ ಈ ದ್ವೇಷಾಪರಾಧ ಪ್ರಕರಣದ ತನಿಖೆಯನ್ನು ಎಫ್ ಬಿ ಐ ಇದೀಗ ಕೈಗೊಂಡಿರುವುದಾಗಿ ತಿಳಿದು ಬಂದಿದೆ. ಇದು ಪುಂಡ ಜನಸಮೂಹವೊಂದು ಎಸಗಿರುವ ದುಷ್ಕೃತ್ಯವೆಂದು ಅಧಿಕಾರಿಗಳು ತಿಳಿದಿದ್ದಾರೆ.  

“ನಮ್ಮ ಮನೆಯ ಬಾಗಿಲಿಗೆ, ಕಿಟಕಿಗಳಿಗೆ, ಕಾರಿಗೆ ಸುಮಾರು 50 ಪೇಪರ್‌ಗಳಲ್ಲಿ ಸುತ್ತಿದ ತ್ಯಾಜ್ಯಗಳನ್ನು ಎಸೆಯಲಾಗಿದೆ. ಕನಿಷ್ಠ 40 ಮೊಟ್ಟೆಗಳನ್ನು ನಮ್ಮ ಮನೆಯ ಗೋಡೆಯ ಮೇಲೆ, ಸೀಲಿಂಗ್‌ಗೆ ಮಾತ್ರವಲ್ಲದೆ ಹೊರಗೆ ಎಲ್ಲೆಂದರಲ್ಲಿ  ಎಸೆಯಲಾಗಿದೆ; ನೀವು ಕಂದು ಬಣ್ಣದ ಭಾರತೀಯರು ಇಲ್ಲಿ ಇರಕೂಡದು ಎಂಬ ನಿಂದನಾತ್ಮಕ ಬರಹವಿರುವ ಕಾಗದಗಳಲ್ಲಿ  ಅಸಹ್ಯ ತ್ಯಾಜ್ಯಗಳನ್ನು ಉಂಡೆಕಟ್ಟಿ ಎಸೆಯಲಾಗಿದೆ’ ಎಂದು ಮನೆ ಮಾಲಕನಾಗಿರುವ ಭಾರತೀಯ ವ್ಯಕ್ತಿ ಹೇಳಿರುವುದನ್ನು ಉಲ್ಲೇಖೀಸಿ ಸಿಬಿಎಸ್‌ ಡೆನ್ವರ್‌ ವರದಿ ಮಾಡಿದೆ.

“ಈ ದ್ವೇಷಾಪರಾಧ ಘಟಿಸಿದ ಬೆನ್ನಿಗೇ ನಮ್ಮ ನೆರೆಹೊರೆಯವರು ಒಗ್ಗೂಡಿ ಮುಂದೆ ಬಂದು, ನಮ್ಮ ಮೇಲೆ ಅನುಕಂಪ ತೋರಿ ನಮ್ಮ ನೆರವಿಗೆ ನಿಂತು, ನಮ್ಮ ಮನೆಯನ್ನು ಸ್ವತ್ಛಗೊಳಿಸಿದ್ದಾರೆ’ ಎಂದು ದ್ವೇಷಾಪರಾಧದ ಸಂತ್ರಸ್ತ ಭಾರತೀಯ ಹೇಳಿದ್ದಾರೆ. ಎಲ್ಲ ಅಮೆರಿಕನ್ನರು ಕೆಟ್ಟವರಲ್ಲ; ಎಷ್ಟೋ ಮಂದಿ ಒಳ್ಳೆಯ ಅಮೆರಿಕನ್ನರಿದ್ದಾರೆ ಎನ್ನುವುದಕ್ಕೆ ಇದು ಉದಾಹರಣೆಯಾಗಿರುವುದು ಸಮಾಧಾನದ ವಿಷಯವಾಗಿದೆ ಎಂದವರು ಹೇಳಿದ್ದಾರೆ. 

ಕಳೆದ ಬುಧವಾರ ರಾತ್ರಿ ಕನ್ಸಾಸ್‌ನ ಬಾರ್‌ ಒಂದರಲ್ಲಿ ಅಮೆರಿಕ ನೌಕಾಪಡೆಯ ಮಾಜಿ ಯೋಧ ಆ್ಯಡಮ್‌ ಡಬ್ಲ್ಯು ಪ್ಯುರಿಂಟಾನ್‌ ಎಂಬಾತ ಜನಾಂಗೀಯ ದ್ವೇಷದ ಪರಾಕಾಷ್ಠೆಯಲ್ಲಿ  “ನನ್ನ ದೇಶದಿಂದ ತೊಲಗಿ’ ಎಂದು ಬೊಬ್ಬಿಡುತ್ತಾ ಹೈದರಾಬಾದಿನ ಟೆಕ್ಕಿ ಶ್ರೀನಿವಾಸ ಕುಚಿಬೋಟ್ಲಾ ಎಂಬವರನ್ನು ಗುಂಡಿಕ್ಕಿ ಕೊಂದು ಇನ್ನೋರ್ವ ಟೆಕ್ಕಿ ಆಲೋಕ್‌ ಮದಸಾನಿ ಅವರನ್ನು ತೀವ್ರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ.

ಟಾಪ್ ನ್ಯೂಸ್

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.