ಕನ್ಸಾಸ್ ರೆಸ್ಟೋರೆಂಟ್ನಲ್ಲಿ ಮತ್ತೊಬ್ಬ ಭಾರತೀಯನ ಹತ್ಯೆ
Team Udayavani, Jul 8, 2018, 2:44 PM IST
ಕನ್ಸಾಸ್ (ಅಮೆರಿಕ): ಕಳೆದ ವರ್ಷ, ಇಲ್ಲಿನ ರೆಸ್ಟೋರೆಂಟ್ನಲ್ಲಿ ಶ್ರೀನಿವಾಸ ಕುಚಿಭೋಟ್ಲಾ ಎಂಬ ಭಾರತೀಯ ಟೆಕ್ಕಿಯ ಹತ್ಯೆ ನಡೆದ ಮಾದರಿಯಲ್ಲೇ ಇದೇ ಪ್ರಾಂತ್ಯದ ಮತ್ತೊಂದು ರೆಸ್ಟೋರೆಂಟ್ನಲ್ಲಿ ಭಾರತ ಮೂಲದ ವಿದ್ಯಾರ್ಥಿಯೊಬ್ಬನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಮೃತಪಟ್ಟವರೂ ತೆಲುಗು ಮೂಲದವರಾಗಿದ್ದು, ತೆಲಂಗಾಣದ ವಾರಂಗಲ್ನ ಶರತ್ ಕೊಪ್ಪು (24) ಎಂದು ಗುರುತಿಸಲಾಗಿದೆ. ಉನ್ನತ ವ್ಯಾಸಂಗಕ್ಕಾಗಿ ಕನ್ಸಾಸ್ಗೆ ಆಗಮಿಸಿದ್ದ ಶರತ್, 5303 ಚಾರ್ಲೊಟೆ ಸ್ಟ್ರೀಟ್ನಲ್ಲಿನ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು.
ಸ್ಥಳೀಯ ಕಾಲಮಾನ ಶುಕ್ರವಾರ ಸಂಜೆ ಸುಮಾರು 7 ಗಂಟೆಗೆ ಕನ್ಸಾಸ್ನ “ಜೇಸ್ ಫಿಶ್ ಆ್ಯಂಡ್ ಚಿಕನ್’ ಎಂಬ ರೆಸ್ಟೋರೆಂಟ್ನಲ್ಲಿ ಉಪಾಹಾರ ಸೇವಿಸುತ್ತಿದ್ದಾಗ ಅಪರಿಚಿತನೊಬ್ಬ ರೆಸ್ಟೋರೆಂಟ್ ಒಳಗೆ ಬಂದು ಈತನಿಗೆ ಗುಂಡು ಹಾರಿಸಿ ಪರಾರಿಯಾದನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪರಿಚಿತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬಿಎಸ್ಎನ್ಎಲ್ನ ಮಾಜಿ ಉದ್ಯೋಗಿ ಕೆ. ರಾಮ್ ಮೋಹನ್ ಎಂಬುವರ ಪುತ್ರನಾಗಿದ್ದ ಶರತ್, ಹೈದರಾಬಾದ್ನ ವಾಸವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದ ಶರತ್, ಅಲ್ಲಿ ಅರೆಕಾಲಿಕ ಉದ್ಯೋಗಿಯಾಗಿ ಶಿಕ್ಷಣವನ್ನೂ ಮುಂದುವರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ