ಹ್ಯಾರಿ, ಮೆಘನ್‌ ಅದ್ಧೂರಿ ವಿವಾಹ


Team Udayavani, May 20, 2018, 6:00 AM IST

o-9.jpg

ವಿಂಡ್ಸರ್‌: ಬ್ರಿಟನ್‌ ರಾಜಕುಮಾರ- ಅಮೆರಿಕದ ನಟಿ ಮೆಘನ್‌ ಮರ್ಕೆಲ್‌ ಅವರ ವಿವಾಹ ಇಲ್ಲಿನ ವಿಂಡ್ಸರ್‌ ಕ್ಯಾಸಲ್‌ ಪ್ರಾಂತ್ಯದಲ್ಲಿನ ಸೇಂಟ್‌ ಜಾರ್ಜ್‌ ಚಾಪೆಲ್‌ ಚರ್ಚ್‌ನಲ್ಲಿ ವಿಜೃಂಭಣೆಯಿಂದ ನೆರವೇರಿತು. ಈ ವಿವಾಹಕ್ಕೆ ರಾಜ ಮನೆತನದವರಾದ ರಾಣಿ ಎಲಿಜಬೆತ್‌, ಪ್ರಿನ್ಸ್‌ ಫಿಲಿಪ್‌, ಪ್ರಿನ್ಸ್‌ ವಿಲಿಯಮ್ಸ್‌ ಹಾಗೂ ಅವರ ಪತ್ನಿ ಕೇಟ್‌, ವಿಲಿಯಮ್ಸ್‌ ಪುತ್ರ 4 ವರ್ಷದ ಜಾರ್ಜ್‌ ಹಾಗೂ 3 ವರ್ಷದ ಚಾರ್ಲೆಟ್‌ ಸೇರಿದಂತೆ ಹಲವಾರು ಗಣ್ಯಾತಿ ಗಣ್ಯರು ಹಾಜರಿದ್ದರು. 

ಕ್ರೈಸ್ತ ಸಂಪ್ರದಾಯದಂತೆ ಜರುಗಿದ ಈ ಮದುವೆಯಲ್ಲಿ, ಬ್ರಿಟನ್‌ನ ಹೆಸರಾಂತ ವಸ್ತ್ರ ವಿನ್ಯಾಸಕಿ ಕ್ಲೇರ್‌ ವೇಯ್‌ ಕೆಲ್ಲರ್‌ ಅವರು ವಿಶೇಷವಾಗಿ ಸಿದ್ಧಪಡಿಸಿದ್ದ ವಧುವಿನ ಉಡುಗೆಯಲ್ಲಿ ಮೆಘನ್‌ ಕಂಗೊಳಿಸುತ್ತಿದ್ದರು. ಕೆಲ ಸಾಂಪ್ರದಾಯಿಕ ವಿಧಿವಿಧಾನಗಳ ತರುವಾಯ ಬಿಷಪ್‌ ಮೈಕಲ್‌ ಬ್ರೂಸ್‌ ಕರಿ ಅವರು ಹ್ಯಾರಿ-ಮೆಘನ್‌ ಮದುವೆಯನ್ನು ಅಧಿಕೃತವಾಗಿ ಘೋಷಿಸಿದರು. ಘೋಷಣೆ ಹೊರಬೀಳುತ್ತಿದ್ದಂತೆ ಜೋಡಿಯು ತಡ ಮಾಡದೇ ಪರಸ್ಪರ ತುಟಿಗಳಿಗೆ ಮುತ್ತಿಕ್ಕಿದರು. ಸಭಾಂಗಣದಲ್ಲಿದ್ದ ಎಲ್ಲಾ ಗಣ್ಯರು ಚಪ್ಪಾಳೆ ತಟ್ಟುತ್ತಾ ಶುಭಾಶಯ ಸಲ್ಲಿಸಿದರು. ಅಲ್ಲಿಗೆ, ಹ್ಯಾರಿ, ಮೆಘನ್‌ ನಡು ವಿನ ಪ್ರೇಮಕ್ಕೆ ವಿವಾಹದ ಮುದ್ರೆ ಬಿತ್ತು. ನಂತರ, ಚರ್ಚ್‌ನಿಂದ ಹೊರ ಬಂದ ಜೋಡಿ, ಸಾಂಪ್ರದಾಯಿಕ ವಾಹನದಲ್ಲಿ ತೆರಳಿತು. ವಿವಾಹ ಮುಗಿದ ನಂತರ, ಮಹಾರಾಣಿ 2ನೇ ಎಲಿಜಬೆತ್‌, ತಮ್ಮ ಮೊಮ್ಮಗ ಪ್ರಿನ್ಸ್‌ ಹ್ಯಾರಿ ಮತ್ತು ಮೆಘ ನ್‌ಗೆ ಕ್ರಮವಾಗಿ “ಡ್ನೂಕ್‌ ಆಫ್ ಸಸ್ಸೆಕ್ಸ್‌’, “ದ ಡಚೆಸ್‌ ಆಫ್ ಸಸ್ಸೆಕ್ಸ್‌’ ಎಂಬ ಸಾಂಪ್ರದಾಯಿಕ ಬಿರುದುಗಳನ್ನು ನೀಡಿದ್ದಾರೆ. 

ಮದುವೆಯಲ್ಲಿ ಭಾರತೀಯರ ಪಾತ್ರ 
ಹ್ಯಾರಿ, ಮೆಘನ್‌ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ವಿಶ್ವದ ಸಿನಿ ತಾರಾ ಸಮೂಹದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಭಾಗವಹಿಸಿದ್ದರು. ಲಿಲ್ಯಾಕ್‌ ಮಾದರಿಯ ಉಡುಗೆಯಲ್ಲಿ ಪ್ರಿಯಾಂಕಾ ಕಂಗೊಳಿಸುತ್ತಿದ್ದರು.  ಸಮಾರಂಭದಲ್ಲಿ ಮುಂಬೈನ ಮೈನಾ ಮಹಿಳಾ ಫೌಂಡೇ ಷ ನ್‌ನ ಸಂಸ್ಥಾ ಪಕಿ ಸುಹಾನಿ ಜಲೋಟಾ ಮತ್ತು ಅವರ ಸಹಚರರಾದ ದೆಬೊರಾ ದಾಸ್‌, ಅರ್ಚನಾ ಆಂಬ್ರೆ ಮತ್ತು ಇಮೊಗನ್‌ ಮ್ಯಾನ್ಸ್‌ ಫೀಲ್ಡ್‌ , ರೇಷ್ಮೆ ಸೀರೆಯುಟ್ಟು ಓಡಾಡುತ್ತಾ ಎಲ್ಲರ ಗಮನ ಸೆಳೆದರು. ಇನ್ನು, ಯುಕೆಯಲ್ಲಿ ಬಾದಾಮಿ ಹಾಗೂ ಎಳ ನೀರಿನಿಂದ ವಿಶೇಷ ಬಿಸ್ಕತ್‌ ತಯಾರಿಸುವ ಪ್ರಸಿದ್ಧಿ ಪಡೆದಿರುವ ಭಾರತೀಯ ಶೆಫ್ ರೋಸಿಗಿಂಡೆ ಅವರೂ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇನ್ನು, ಭಾರತದಲ್ಲಿ ಸೇವೆ ಸಲ್ಲಿಸುತ್ತಿರುವ ಪೆಟಾ ಸಂಸ್ಥೆ, ಮಹಾರಾಷ್ಟ್ರದ ಪ್ರಾಣಿ ಸಂರಕ್ಷಣಾ ಧಾಮದಲ್ಲಿರುವ ಎತ್ತನ್ನು ಉಡುಗೊರೆಯಾಗಿ ಕೊಡಲು ತೀರ್ಮಾನಿಸಿದೆ. ಇದಕ್ಕೆ ಮೇರಿ ಎಂದು ಹೆಸರಿಡಲಾಗಿದ್ದು, ಇದು ಹ್ಯಾರಿ ಮತ್ತು ಮೆಘನ್‌ ಅವರ ಹೆಸರುಗಳ ಸಂಯುಕ್ತ ರೂಪ ಎಂದು ಪೆಟಾ ಹೇಳಿದೆ.

ಟಾಪ್ ನ್ಯೂಸ್

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.