ಗಾಝಾದಲ್ಲಿ ಮತ್ತೆ ಯುದ್ಧ?
Team Udayavani, Nov 14, 2018, 9:49 AM IST
ಗಾಝಾ ಸಿಟಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಉಗ್ರರ ನಡುವೆ ಮತ್ತೆ ಘರ್ಷಣೆ ಶುರುವಾಗಿದೆ. ಮಂಗಳವಾರ ಹಮಾಸ್ ಉಗ್ರರು ಇಸ್ರೇಲ್ನತ್ತ 400 ರಾಕೆಟ್ಗಳನ್ನು ಹಾರಿಸಿದ್ದಾರೆ. ಅದರಿಂದ ಕ್ರುದ್ಧ ಗೊಂಡ ಇಸ್ರೇಲ್ ಗಡಿಗೆ ಹೆಚ್ಚುವರಿ ಸೇನೆ ರವಾನೆ ಮಾಡಿದೆಯಲ್ಲದೆ, ಪ್ರತಿ ದಾಳಿ ನಡೆಸಿದೆ. ಅದರಿಂದಾಗಿ ಆರು ಮಂದಿ ಪ್ಯಾಲೆಸ್ತೀನ್ ಉಗ್ರರು ಜೀವ ಕಳೆದು ಕೊಂಡಿದ್ದು, ಇತರ ಹಲವಾರು ಮಂದಿ ಗಾಯಗೊಂಡಿದ್ದಾರೆ. ರಾಕೆಟ್ ದಾಳಿಯಿಂದಾಗಿ ಗಡಿ ಪ್ರದೇಶದಲ್ಲಿದ್ದ ಕಟ್ಟಡಗಳು ಧ್ವಂಸಗೊಂಡಿವೆ. ಎಲ್ಲೆಡೆಯೂ ಹೊಗೆ, ಧೂಳು ತುಂಬಿ ಹೋಗಿದೆ. ಇದರಿಂದಾಗಿ 2014ರ ಬಳಿಕ ಅತ್ಯಂತ ಸಂಘರ್ಷಮಯ ವಾತಾವರಣ ಗಾಝಾದಲ್ಲಿ ಉಂಟಾಗಿದೆ. ಉಗ್ರರು ಹಾರಿಸಿದ ರಾಕೆಟ್ಗಳನ್ನು ಇಸ್ರೇಲ್ ಸೇನೆಯ ಛೇದಕಗಳು ತುಂಡರಿಸಿವೆ. ಅದು ಎಲ್ಲೆಂದರಲ್ಲಿ ಚದುರಿ ಬಿದ್ದಿದೆ. ಗಾಝಾ ಪಟ್ಟಿಯಲ್ಲಿರುವ ಶಾಲೆಗಳು ಮತ್ತು ಇತರ ಸಂಸ್ಥೆಗಳನ್ನು ಮುಚ್ಚ ಲಾಗಿದೆ. ಹಮಸ್ ಉಗ್ರ ಸಂಘಟನೆಯ ವಕ್ತಾರ ಪ್ರತಿಕ್ರಿಯೆ ನೀಡಿ ಇಸ್ರೇಲ್ನತ್ತ ಮತ್ತಷ್ಟು ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅದಕ್ಕೆ ಇಸ್ರೇಲ್ ಮಿಲಿಟರಿ ವಕ್ತಾರರೂ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಶ್ವಸಂಸ್ಥೆಯ ಮಧ್ಯಪ್ರಾಚ್ಯಕ್ಕಾಗಿನ ರಾಯಭಾರಿ ನಿಕೋಲೇ ಮ್ಲಡೆನೋವ್ ಕೂಡಲೇ ಇಸ್ರೇಲ್-ಹಮಸ್ ದಾಳಿ ನಿಲ್ಲಿಸಬೇಕು. ಶಾಂತಿ ಸ್ಥಾಪನೆಯತ್ತ ಮನಸ್ಸು ಮಾಡಬೇಕು ಎಂದು ಹೇಳಿದ್ದಾರೆ. ಇಂಥ ಪರಿಸ್ಥಿತಿ ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲೇಸರ್ ಸಂವಹನ: ಭೂಮಿಗೆ 14 ಕೋಟಿ ಮೈಲು ದೂರದಿಂದ ಸಂದೇಶ ರವಾನೆ
Boeing aircraft: ಬೋಯಿಂಗ್ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್ ಸಾವು
Joe Biden: ವಲಸಿಗರನ್ನು ಸ್ವೀಕರಿಸದ ಕಾರಣ ಭಾರತದ ಆರ್ಥಿಕ ಪ್ರಗತಿ ಕುಂಠಿತ: ಬೈಡೆನ್
China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು
Pleasure Squad: ತನ್ನ ಸುಖಕ್ಕಾಗಿ ಪ್ರತಿವರ್ಷ 25 ಹುಡುಗಿಯರನ್ನು ಆಯ್ಕೆಮಾಡುವ ಕಿಮ್ ಜಾಂಗ್!
MUST WATCH
ಹೊಸ ಸೇರ್ಪಡೆ
Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್
Hunsur: ಅಂಗನವಾಡಿ ಕೇಂದ್ರ ಅಸಮರ್ಪಕ ನಿರ್ವಹಣೆ, ಬೀಗ ಜಡಿದು ಗ್ರಾಮಸ್ಥರ ಆಕ್ರೋಶ
Rishi; ರುದ್ರ ಗರುಡ ಪುರಾಣ ಫಸ್ಟ್ ಲುಕ್ ಬಿಡುಗಡೆ
Smriti ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್ ಗೆ ಬಿಜೆಪಿ ತಿರುಗೇಟು
ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ