ಮುಖ್ಯ ಪ್ರಾಸಿಕ್ಯೂಟರ್ ವಜಾ
Team Udayavani, Apr 30, 2018, 8:45 AM IST
ಲಾಹೋರ್ : ಮಹತ್ವದ ಬೆಳವಣಿಗೆಯಲ್ಲಿ ಮುಂಬಯಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಮುಖ್ಯ ಪ್ರಾಸಿಕ್ಯೂಟರ್ ಚೌಧರಿ ಅಜರ್ ಅವರನ್ನು ಪಾಕಿಸ್ಥಾನದ ಗೃಹ ಸಚಿವಾಲಯ ವಜಾಗೊಳಿಸಿದೆ. ಸರಕಾರದ ಹೇಳಿಕೆ ದಾಖಲಿಸಿಲ್ಲ ಎನ್ನುವ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ಹೇಳಿದೆ. ಇದರಿಂದಾಗಿ ಮುಂಬಯಿ ದಾಳಿಯ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಶ್ರಮಿಸುತ್ತಿರುವ ಭಾರತಕ್ಕೆ ಕೊಂಚ ಹಿನ್ನಡೆಯಾಗಿದೆ. 2008ರ ನವೆಂಬರ್ನಲ್ಲಿ ಕರಾಚಿಯಿಂದ ಆಗಮಿಸಿದ್ದ ಲಷ್ಕರ್ ಉಗ್ರರು ಮುಂಬಯಿಯಲ್ಲಿ ದಾಳಿ ನಡೆಸಿ 166 ಮಂದಿಯನ್ನು ಬಲಿ ಪಡೆದಿದ್ದರು.