ಜರ್ಮನಿಯಲ್ಲಿ ಕುಂದಾಪುರ ಮೂಲದ ದಂಪತಿಗೆ ಇರಿತ ; ಪತಿ ಸಾವು
Team Udayavani, Mar 30, 2019, 8:35 PM IST
ಕುಂದಾಪುರ: ಜರ್ಮನಿಯ ಮ್ಯೂನಿಚ್ ನಗರದಲ್ಲಿ ನಡೆದ ಗಲಾಟೆಯೊಂದರಲ್ಲಿ ಆಫ್ರಿಕನ್ ಮೂಲದ ವಲಸಿಗನೊಬ್ಬ ಬಸ್ರೂರು ಮೂಲದ ದಂಪತಿಗೆ ಚೂರಿಯಿಂದ ಇರಿದಿದ್ದು, ಪರಿಣಾಮವಾಗಿ ಪ್ರಶಾಂತ್ ಬಸ್ರೂರು ಅವರು ಸಾವನ್ನಪ್ಪಿದ್ದು, ಪತ್ನಿ ಸ್ಮಿತಾ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಂಬರ್ಗ್ನಗರದಲ್ಲಿ ವಾಸಿಸುತ್ತಿದ್ದ 47 ರ ಹರೆಯದ ಪ್ರಶಾಂತ್ ಅವರು ಜರ್ಮನಿಯ ಪೌರತ್ವವನ್ನೂ ಪಡೆದಿದ್ದರು. ಸ್ಮಿತಾ ಅವರು ಸಿದ್ದಾಪುರದ ವೈದ್ಯರೊಬ್ಬರ ಪುತ್ರಿಯಾಗಿದ್ದು , ಇಬ್ಬರು ಮಕ್ಕಳಿದ್ದಾರೆ.
ಹೊಸನಗರ ಮೂಲದ ಪ್ರಶಾಂತ್ ಕುಂದಪುರದಲ್ಲಿ ಮನೆ ಮಾಡಿಕೊಂಡಿದ್ದರು. ಮುಂದಿನ ತಿಂಗಳು ಮನೆಗೆ ಬಂದು ತಾಯಿಯನ್ನು ಕರೆದುಕೊಂಡು ಹೋಗುವವರಿದ್ದರು ಎಂದು ತಿಳಿದು ಬಂದಿದೆ.
ನಡೆದಿದ್ದೇನು?
ಶಾಪಿಂಗ್ಗೆ ತೆರಳಿದ್ದ ವೇಳೆ ಆಫ್ರಿಕನ್ ಜೊತೆ ಗಲಾಟೆ ನಡೆದಿದ್ದು ಆತ ಇಬ್ಬರಿಗೂ ಇರಿದಿದ್ದಾನೆ. ಪರಿಣಾಮವಾಗಿ ಪ್ರಶಾಂತ್ ಸಾವನ್ನಪ್ಪಿದರೆ, ಸ್ಮಿತಾ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಕ್ಕಳಿಬ್ಬರನ್ನು ಚೈಲ್ಡ್ ಕೇರ್ನಲ್ಲಿ ಇರಿಸಲಾಗಿದ್ದು, ಸರಕಾರ ರಕ್ಷಣೆಯ ಹೊಣೆ ಹೊತ್ತಿದೆ.
ಈ ಬಗ್ಗೆ ವಿದೇಶಾಂಗ ಇಲಾಖೆ ತಕ್ಷಣ ಸ್ಪಂದಿಸಿದ್ದು, ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮಾಡಿ ಸುದ್ದಿ ಧೃಡ ಪಡಿಸಿದ್ದಾರೆ. ಪ್ರಶಾಂತ್ ಸಹೋದರ ಪ್ರಭಾತ್ ಅವರಿಗೆ ಜರ್ಮನಿಗೆ ತೆರಳಲು ವ್ಯವಸ್ಥೆ ಮಾಡಲಾಗಿದೆ.