ಕಾಲ್ನಡಿಗೆಯಲ್ಲಾದರೂ ಸರಿ, ತತ್ಕ್ಷಣ ಖಾರ್ಕಿವ್ನಿಂದ ಹೊರನಡೆಯಿರಿ
ಭಾರತೀಯ ವಿದ್ಯಾರ್ಥಿಗಳಿಗೆ ರಾಯಭಾರ ಕಚೇರಿ ಸೂಚನೆ;ಮೂರು ಸುರಕ್ಷಿತ ತಾಣಗಳ ಮಾಹಿತಿ ನೀಡಿದ ಅಧಿಕಾರಿಗಳು
Team Udayavani, Mar 3, 2022, 8:10 AM IST
ಹೊಸದಿಲ್ಲಿ: ಖಾರ್ಕಿವ್ನಲ್ಲಿ ಬುಧವಾರ ರಷ್ಯಾ ಪಡೆಯ ದಾಳಿ ತೀವ್ರಗೊಂಡ ಹಿನ್ನೆಲೆಯಲ್ಲಿ ಅಲ್ಲಿರುವ ಭಾರತೀಯರಿಗೆ ಹೊಸ ಸಂದೇಶ ರವಾನಿಸಿರುವ ಭಾರತೀಯ ರಾಯಭಾರ ಕಚೇರಿ, ಕೂಡಲೇ ನಗರ ಬಿಟ್ಟು ತೆರಳುವಂತೆ ಸೂಚಿಸಿದೆ. ಖಾರ್ಕಿವ್ನಿಂದ ಸುಮಾರು 16 ಕಿ.ಮೀ. ವ್ಯಾಪ್ತಿಯೊಳಗೆ ಬರುವ ಮೂರು ಸುರಕ್ಷಿತ ಪ್ರದೇಶಗಳ ಹೆಸರನ್ನೂ ಸೂಚಿಸಲಾಗಿದ್ದು, ಸಿಕ್ಕ ಸಿಕ್ಕ ವಾಹನಗಳಿಗೆ ಹತ್ತಿ ಅಲ್ಲಿಗೆ ತಲುಪುವಂತೆ ತಿಳಿಸಲಾಗಿದೆ. ಒಂದು ವೇಳೆ ವಾಹನಗಳು ಸಿಗದೇ ಇದ್ದರೆ, ಕಾಲ್ನಡಿಗೆಯಲ್ಲಾದರೂ ಸಾಗುವಂತೆ ರಾಯಭಾರ ಕಚೇರಿ ಸಲಹೆ ನೀಡಿದೆ.
ಖಾರ್ಕಿವ್ನಿಂದ 11 ಕಿ.ಮೀ. ದೂರದಲ್ಲಿ ರುವ ಪಿಸೋಚಿನ್, 12 ಕಿ.ಮೀ.ದೂರದ ಬಬಾಯಿ ಮತ್ತು 16 ಕಿ.ಮೀ. ದೂರದಲ್ಲಿನ ಬೆಜ್ಲಿ ದಿವ್ಕಾಗೆ ತೆರಳುವಂತೆ ಭಾರತೀಯ ವಿದ್ಯಾರ್ಥಿಗ ಳಿಗೆ ಸೂಚಿಸಲಾಗಿದೆ. ರಷ್ಯಾ ಕಡೆಯಿಂದ ಬಂದ ಇನ್ನಷ್ಟು ದಾಳಿಯ ಸಂದೇಶದ ಹಿನ್ನೆಲೆಯಲ್ಲಿ ಈ ಅಲರ್ಟ್ ನೀಡಲಾಗಿದೆ. ನಿಮ್ಮ ಸುರಕ್ಷತೆ ಮತ್ತು ಭದ್ರತೆಗಾಗಿ ನೀವು ಈ ಕೂಡಲೇ ಖಾರ್ಕಿವ್ ಬಿಟ್ಟು ಹೊರಡಬೇಕು. ಪರಿಸ್ಥಿತಿ ತೀರಾ ಹದಗೆಟ್ಟಿದೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಹೊರಡಿ ಎಂದು ಹೇಳಲಾಗಿದೆ.
ಇದೇ ವೇಳೆ, ನಮ್ಮ ದೇಶದ ನಾಗರಿಕರನ್ನು ಸುರಕ್ಷಿತವಾಗಿ ಕರೆತರುವ ವಿಚಾರ ಸಂಬಂಧ ರಷ್ಯಾದ ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಿದ್ದೇವೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗಿc ಹೇಳಿದ್ದಾರೆ.
ಆ್ಯಪಲ್, ಗೂಗಲ್, ನೈಕ್ ಸೇವೆ ಮೊಟಕು
ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾದಲ್ಲಿ ತಮ್ಮ ಸೇವೆಗಳನ್ನು ಮೊಟಕುಗೊಳಿಸಿದ ಖ್ಯಾತ ಗ್ಲೋಬಲ್ ಬ್ರಾಂಡ್ಗಳ ಪಟ್ಟಿಗೆ ಈಗ ಆ್ಯಪಲ್, ನೈಕ್ ಹಾಗೂ ಗೂಗಲ್ ಸಂಸ್ಥೆಗಳು ಸೇರಿವೆ. ಆ್ಯಪಲ್ ಪೇ ಹಾಗೂ ಆ್ಯಪಲ್ ಮ್ಯಾಪ್ ಆ್ಯಪ್ಲಿಕೇಷನ್ಗಳ ಸೇವೆಯನ್ನು ಸೀಮಿತಗೊಳಿಸಲಾಗಿದೆ. ನೈಕ್ ಕಂಪೆನಿ, ರಷ್ಯಾದಲ್ಲಿ ತನ್ನ ಉತ್ಪಾದನೆಗಳನ್ನು ಆನ್ಲೈನ್ ಮೂಲಕ ಬುಕ್ ಮಾಡುವ ಸೌಲಭ್ಯವನ್ನು ಮೊಟಕುಗೊಳಿಸಿದೆ. ಇನ್ನು, ಗೂಗಲ್ ಸಂಸ್ಥೆಯು ತನ್ನ ವೆಬ್ಪುಟಗಳಲ್ಲಿ ಬಿತ್ತರವಾಗುತ್ತಿದ್ದ ರಷ್ಯಾದ ಎಲ್ಲ ಕಂಪೆನಿಗಳ ಜಾಹೀರಾತು ಅಥವಾ ಫೀಚರ್ಗಳನ್ನು ತೆಗೆದುಹಾಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ
Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್
Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?
ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್
Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ