ನಾಗರಹೊಳೆ, ಬಂಡೀಪುರದಲ್ಲಿದೆ ಪ್ರಾಣಿಗಳ ಸಹಬಾಳ್ವೆ


Team Udayavani, Feb 18, 2017, 6:52 AM IST

17-STATE-3.jpg

ಲಂಡನ್‌: ಸಾಮಾನ್ಯವಾಗಿ ಕಾಡುಗಳಲ್ಲಿ ಹುಲಿ, ಸಿಂಹಗಳು ಒಂದು ಮತ್ತೂಂದರ ಪ್ರದೇಶಕ್ಕೆ ಹೋಗುವುದಿಲ್ಲ. ಅವುಗಳ ಬಾಂಧವ್ಯ ಅಷ್ಟಕ್ಕಷ್ಟೆ. ಆದರೆ, ಕರ್ನಾಟಕದ ಭದ್ರಾ, ನಾಗರಹೊಳೆ, ಬಿಳಿಗಿರಿ ರಂಗನಬೆಟ್ಟ ಪ್ರದೇಶ, ಬಂಡೀಪುರ ವ್ಯಾಪ್ತಿಯ ದಟ್ಟಡವಿಯಲ್ಲಿ ಈ ಅಂಶ ಅಪವಾದ. ಹುಲಿ, ಚಿರತೆ ಮತ್ತು ಸೀಳುನಾಯಿಗಳು ಕಾಡಿನಲ್ಲಿ ಒಂದೇ ಕಡೆ ವಾಸಿಸುತ್ತವೆ. ಇದು ಹೇಗೆ ಸಾಧ್ಯ ಎಂದು
ಆಶ್ಚರ್ಯ ಪಡುತ್ತಿದ್ದೀರಾ. ವನ್ಯಜೀವಿ ಸಂರಕ್ಷಣಾ ಸಂಸ್ಥೆ (ಡಬ್ಲೂಸಿಎಸ್‌) ಭಾರತದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಡೆಸಿದ ಸಂಶೋಧನೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ದೊಡ್ಡ ಬೆಕ್ಕುಗಳು ಮತ್ತು ಕಾಡು ನಾಯಿಗಳಿಗೆ ಬೇಟೆ ವಿಷಯವಾಗಿ ನೇರ ಸ್ಪರ್ಧೆ ಇರುತ್ತದೆ. ಆದರೂ, ಸ್ವಲ್ಪ ಮಟ್ಟಿನ ಸಂಘರ್ಷಗಳ ನಡುವೆ ಇವುಗಳು ಸಾಮರಸ್ಯದಿಂದ ಬದುಕುತ್ತವೆ. ಅವುಗಳು ಒಂದೇ ರೀತಿಯ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಆದರೆ, ಬೇಟೆಗೆ ತೆರಳುವ ಸಮಯವನ್ನು ಪ್ರಾಣಿಗಳೇ ನಿಗದಿಪಡಿಸಿಕೊಂಡಿವೆ. ಸೀಳುನಾಯಿಗಳು ಹಗಲಿನಲ್ಲಿ ಚಟುವಟಿಕೆಯಿಂದ ಇರುತ್ತವೆ. ಹಗಲಿನಲ್ಲೇ ಬೇಟೆಯಾಡುತ್ತವೆ. ರಾತ್ರಿ ವೇಳೆ ಹುಲಿ ಮತ್ತು ಚಿರತೆಗಳು ತಮ್ಮ ಬೇಟೆ ಹುಡುಕಿಕೊಂಡು ಹೋಗುತ್ತವೆ. ಭದ್ರಾ 
ಸಂರಕ್ಷಿತಾರಣ್ಯದಲ್ಲಿ ಬೇಟೆ ವಿರಳವಾಗಿರುತ್ತವೆ. ಆದರೂ, ಸೀಳುನಾಯಿಗಳು ದೊಡ್ಡ ಬೆಕ್ಕುಗಳು ಮುಖಾಮುಖೀಯಾಗುವುದನ್ನು ತಪ್ಪಿಸಿಕೊಳ್ಳುತ್ತವೆ. ನಾಗರಹೊಳೆಯಲ್ಲಿ ಚಿರತೆಗಳು ಹುಲಿಗಳ ಬಳಿ ಹೋಗುವುದನ್ನು ತಡೆಯುತ್ತವೆ. ಇವುಗಳು ಬೇಟೆಯಾಡುವ ಪ್ರಾಣಿಗಳಾದ ಹಂದಿ, ಜಿಂಕೆ ಮೊಲಗಳ ಸಂಖ್ಯೆ ವಿರಳವಾಗಿರುವುದೇ ಈ ಸಾಮರಸ್ಯಕ್ಕೆ ಕಾರಣ ಎನ್ನುತ್ತಾರೆ ಡಬ್ಲೂéಸಿಎಸ್‌ನ
ಏಷ್ಯಾ ವಲಯದ ನಿರ್ದೇಶಕ ಡಾ.ಉಲ್ಲಾಸ್‌ ಕಾರಂತ್‌. ಮಾಂಸಾಹಾರಿ ಪ್ರಾಣಿಗಳ ಜೀವನ ಅಭ್ಯಸಿಸುವ ಸಲುವಾಗಿ 12ಕ್ಕೂ ಹೆಚ್ಚು ಕ್ಯಾಮರಾಗಳನ್ನು ಇರಿಸಿ, 2,500 ಚಿತ್ರಗಳನ್ನು ತೆಗೆಯಲಾಗಿದೆ. ಈ ವೇಳೆ, ಮೃಗಗಳ ಬೇಟೆ ಮತ್ತು ಜೀವನ ಕ್ರಮಗಳ ಕುರಿತು ಹಲವಾರು ಮಾಹಿತಿಗಳು ಬಹಿರಂಗವಾಗಿವೆ. ಹೆಚ್ಚಾಗಿ ದೊಡ್ಡ ಬೆಕ್ಕುಗಳು ಮತ್ತು ಕಾಡು ನಾಯಿಗಳು ಬೇರೆ ಬೇರೆ ಸ್ಥಳಗಳಲ್ಲಿ 
ವಾಸಿಸುತ್ತವೆ. ಆದರೆ, ಪಶ್ಚಿಮ ಘಟ್ಟದಲ್ಲಿ ಒಂದೇ ಕಡೆ ವಾಸಿಸುತ್ತವೆ.

ಅಂತಾರಾಷ್ಟ್ರೀಯ ಪ್ರಾಕೃತಿಕ ಸಂಪತ್ತಿನ ರಕ್ಷಣೆಯ ಒಕ್ಕೂಟ (ಐಯುಸಿಎನ್‌) ಹುಲಿಗಳು ಮತ್ತು ಸೀಳುನಾಯಿಗಳನ್ನು ಅಳಿವಿನಂಚಿನಲ್ಲಿರುವ ಮತ್ತು ಚಿರತೆಗಳನ್ನು ಅತ್ಯಂತ ಸೂಕ್ಷ್ಮ ಪ್ರಾಣಿ ಎಂದು ಗುರುತಿಸಿದೆ. ಜನಸಂಖ್ಯೆಯನ್ನು ನಿಯಂತ್ರಿಸಿದಾಗ
ಹುಲಿಗಳು ಮತ್ತು ಇತರ ಪ್ರಾಣಿಗಳ ಸಂರಕ್ಷಣೆಯನ್ನೂ ನಡೆಸಿ ಜೀವ ವೈವಿಧ್ಯವನ್ನು ಕಾಪಾಡಿಕೊಳ್ಳಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ವೈಜ್ಞಾನಿಕ ಅಂಶಗಳಿರುವ ಲೇಖನ “ದ ರಾಯಲ್‌ ಸೊಸೈಟಿ  ಬಿ-ಬಯಲಾಜಿಕಲ್‌ ಸೈನ್ಸಸ್‌’ನಲ್ಲಿ ಪ್ರಕಟವಾಗಿದೆ.

ಈ ಅಧ್ಯಯನದ ಫ‌ಲಿತಾಂಶ ದಿಂದ ನಮಗೇ ಅಚ್ಚರಿಯಾಗಿದೆ. ಬೇರೆ ಬೇರೆ ಸಂದರ್ಭಗಳಲ್ಲಿ ಪ್ರಾಣಿಗಳು ತಮ್ಮ ಮೂಲ ಬೇಟೆಯನ್ನು ಬಿಟ್ಟು ಮತ್ತೂಂದನ್ನು ಅವಲಂಬಿಸುತ್ತವೆ. ಇಂಥ ವ್ಯವಸ್ಥೆ ಜೀವ ವೈವಿಧ್ಯ ಕಾಪಾಡಲು ನೆರವಾಗುತ್ತದೆ.
ಡಾ.ಉಲ್ಲಾಸ ಕಾರಂತ್‌, ಡಬ್ಲೂéಸಿಎಸ್‌ ಏಷ್ಯಾ ವಲಯದ ನಿರ್ದೇಶಕ

ಟಾಪ್ ನ್ಯೂಸ್

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

imran-khan

Oxford ವಿವಿ ಕುಲಪತಿ: ಇಮ್ರಾನ್‌ ಜೈಲಿಂದ ಸ್ಪರ್ಧೆ!

1-musk

Gender change ಬಗ್ಗೆ ವಿರೋಧ: ಮಸ್ಕ್ ಗೆ ಪುತ್ರಿ ತಿರುಗೇಟು!

1-obamma-aaa

US; ಅದ್ಭುತ ಅಧ್ಯಕ್ಷೆಯಾಗುತ್ತಾರೆ: ಕಮಲಾ ಹ್ಯಾರಿಸ್‌ಗೆ ಒಬಾಮಾ ಸಂಪೂರ್ಣ ಬೆಂಬಲ

kamala-haris

US; ಕಮಲಾ ಹ್ಯಾರಿಸ್‌ಗೆ ಕೊನೆಗೂ ಮಾಜಿ ಅಧ್ಯಕ್ಷ ಒಬಾಮಾ ಬೆಂಬಲ?

Bangladesh: ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲಿಸಿದ ಬಾಂಗ್ಲಾದೇಶ್ ಸರ್ಕಾರ!

Bangladesh: ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲಿಸಿದ ಬಾಂಗ್ಲಾದೇಶ್ ಸರ್ಕಾರ!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.