ಅನರ್ಹತೆ ತೀರ್ಪು ಮರು ವಿಮರ್ಶೆ ಕೋರಿದ ಷರೀಫ್ ಅರ್ಜಿ ವಜಾ
Team Udayavani, Sep 15, 2017, 3:05 PM IST
ಇಸ್ಲಾಮಾಬಾದ್ : ಪನಾಮಾ ಪೇಪರ್ ಹಗರಣದಲ್ಲಿ ತಮ್ಮನ್ನು ಅನರ್ಹಗೊಳಿಸಲಾದ ತೀರ್ಪನ್ನು ಪ್ರಶ್ನಿಸಿ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಅವರು ಕುಟುಂಬದವರು ಸಲ್ಲಿಸಿದ್ದ ಪುನರ್ ವಿಮರ್ಶೆ ಅರ್ಜಿಯನ್ನು ಪಾಕ್ ಸುಪ್ರೀಂ ಕೋರ್ಟ್ ಇಂದು ಶುಕ್ರವಾರ ವಜಾ ಮಾಡಿದ್ದು ಇದು ನವಾಜ್ ಷರೀಫ್ ಅವರಿಗೆ ಬಹುದೊಡ್ಡ ಪ್ರಹಾರವಾಗಿ ಒದಗಿದೆ.
ಪಾಕ್ ಸುಪ್ರೀಂ ಕೋರ್ಟ್ ಕಳೆದ ಜುಲೈ 28ರಂದು 67ರ ಹರೆಯದ ನವಾಜ್ ಷರೀಫ್ ಅವರು ಪಾಕ್ ಪ್ರಧಾನಿಯಾಗಿ ಹುದ್ದೆಯಲ್ಲಿ ಮುಂದುವರಿಯುವದನ್ನು ಅನರ್ಹಗೊಳಿಸಿದ ತೀರ್ಪಿನ ಮರು ವಿಮರ್ಶೆಯನ್ನು ಕೋರಿ ಷರೀಫ್ ಮಾತ್ರವಲ್ಲದೆ ಅವರ ಮಕ್ಕಳು ಮತ್ತು ಹಣಕಾಸು ಸಚಿವ ಇಷಾಕ್ ದಾರ್ ಅವರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದರು.
ಪಾಕ್ ಸುಪ್ರೀಂ ಕೋರ್ಟ್ ಜು.28ರ ತನ್ನ ಐತಿಹಾಸಿಕ ತೀರ್ಪಿನ ಮೂಲಕ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರನ್ನು ಮಾತ್ರವಲ್ಲದೆ ಅವರ ಮಕ್ಕಳಾದ ಹುಸೇನ್, ಹಸನ್ ಮತ್ತು ಮರ್ಯಾಮ್ ನವಾಜ್ ಹಾಗೂ ಅಳಿಯ ಮೊಹಮ್ಮದ್ ಸಫ್ದರ್ ಮತ್ತು ದರ್ ವಿರುದ್ಧ ಭ್ರಷ್ಟಾಚಾರದ ಕೇಸುಗಳನ್ನು ದಾಖಲಿಸುವುದಕ್ಕೆ ಆದೇಶ ನೀಡಿತ್ತು.
ತೀರ್ಪು ಪುನರ್ ವಿಮರ್ಶೆ ಕೋರಿಕೆಯ ಅರ್ಜಿಯನ್ನು ಜಸ್ಟಿಸ್ ಆಸಿಫ್ ಸಯೀದ್ ಖಾನ್ ಖೋಸಾ ನೇತೃತ್ವದ ಐದು ಸದಸ್ಯರ ಪೀಠ (ಹಿಂದೆ ಇದೇ ಪೀಠ ಷರೀಫ್ ಅವರನ್ನು ಅನರ್ಹಗೊಳಿಸಿ ತೀರ್ಪು ನೀಡಿತ್ತು) ಇಂದು ಶುಕ್ರವಾರ ವಜಾ ಮಾಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ
Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ
Bengaluru: ಸೈಕಲ್ ಕದಿಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಬಂಧನ
Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ