Ram; ಅಮೆರಿಕದ 48 ರಾಜ್ಯಗಳಲ್ಲಿ ಹಾದು ಹೋಗಲಿರುವ ‘ರಾಮಮಂದಿರ ರಥ ಯಾತ್ರೆ’

8,000 ಮೈಲುಗಳ ಪ್ರಯಾಣ, 851 ದೇವಾಲಯಗಳಿಗೆ ಭೇಟಿ...!!

Team Udayavani, Mar 22, 2024, 3:21 PM IST

1-wewwqe

ಚಿಕಾಗೋ: ಐತಿಹಾಸಿಕ ರಾಮಮಂದಿರ ರಥಯಾತ್ರೆಗೆ ಚಿಕಾಗೋದಿಂದ ಮಾರ್ಚ್ 25 ರಂದು (ಸೋಮವಾರ) ಚಾಲನೆ ನೀಡಲಾಗುತ್ತಿದ್ದು, ಅಮೆರಿಕದ 48 ರಾಜ್ಯಗಳ 851 ದೇವಾಲಯಗಳಿಗೆ ತೆರಳಲಿದ್ದು, ಮುಂದಿನ 60 ದಿನಗಳಲ್ಲಿ 8,000 ಮೈಲುಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸಲಿದೆ.

ಟೊಯೊಟಾ ಸಿಯೆನ್ನಾ ವ್ಯಾನ್‌ನ ಮೇಲೆ ನಿರ್ಮಿಸಲಾದ ಆಕರ್ಷಕ ರಥದಲ್ಲಿ ಯೋಧ್ಯೆಯ ರಾಮಮಂದಿರದಿಂದ ವಿಶೇಷ ಪ್ರಸಾದ ಮತ್ತು ಪ್ರಾಣ ಪ್ರತಿಷ್ಠಾ ಪೂಜಿತ ಅಕ್ಷತೆ ಮತ್ತು ಕಲಶದೊಂದಿಗೆ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತನ ಪ್ರತಿಮೆಗಳನ್ನು ಒಳಗೊಂಡಿದೆ.

ರಥಯಾತ್ರೆಯನ್ನು ಆಯೋಜಿಸುತ್ತಿರುವ ವಿಶ್ವ ಹಿಂದೂ ಪರಿಷತ್ ಆಫ್ ಅಮೆರಿಕ (VHPA) ನ ಪ್ರಧಾನ ಕಾರ್ಯದರ್ಶಿ ಅಮಿತಾಬ್ ಮಿತ್ತಲ್ ಪ್ರಕಾರ “ರಾಮ ಮಂದಿರ ಉದ್ಘಾಟನೆಯು ಪ್ರಪಂಚದಾದ್ಯಂತದ 1.5 ಶತಕೋಟಿ ಹಿಂದೂಗಳ ಹೃದಯವನ್ನು ಸಂತೋಷದಿಂದ ತುಂಬಿದೆ, ಹೊಸ ಶಕ್ತಿ ಮತ್ತು ನಂಬಿಕೆಗೆ ಕಾರಣವಾಗಿದೆ. ಅಮೆರಿಕ ರಾಷ್ಟ್ರವ್ಯಾಪಿ ರಥಯಾತ್ರೆ ಮಾರ್ಚ್ 25 ರಂದು ಅಮೆರಿಕಾದ ಚಿಕಾಗೋದಿಂದ ಪ್ರಾರಂಭವಾಗಲಿದೆ ಮತ್ತು 8000 ಮೈಲುಗಳಷ್ಟು ಪ್ರಯಾಣಿಸಲಿದೆ. ಇದು ಅಮೆರಿಕದ 851 ದೇವಾಲಯಗಳನ್ನು ಮತ್ತು ಕೆನಡಾದಲ್ಲಿ ಸುಮಾರು 150 ದೇವಾಲಯಗಳನ್ನು ಒಳಗೊಳ್ಳಲಿದೆ. ರಥ ಯಾತ್ರೆಯ ಕೆನಡಾ ವಿಭಾಗ ಪ್ರತ್ಯೇಕವಾಗಿದ್ದು, ಕೆನಡಾದ ವಿಶ್ವ ಹಿಂದೂ ಪರಿಷತ್ ಆಯೋಜಿಸುತ್ತಿದೆ ಎಂದು ತಿಳಿಸಿದ್ದಾರೆ.

” ರಥಯಾತ್ರೆಯ ಉದ್ದೇಶವು ಹಿಂದೂ ಧರ್ಮದ ಜಾಗೃತಿ, ಶಿಕ್ಷಣ ಮತ್ತು ಸಬಲೀಕರಣವಾಗಿದೆ. ಯಾತ್ರೆಯು ಎಲ್ಲಾ ಹಿಂದೂಗಳು ಒಗ್ಗೂಡಲು ಮತ್ತು ಭಾಗವಹಿಸಲು ಅವಕಾಶ ಒದಗಿಸುತ್ತದೆ, ಇದು ಹಿಂದೂ ನೀತಿ ಮತ್ತು ಧರ್ಮದ ಪುನರುಜ್ಜೀವನಕ್ಕೆ ಕಾರಣವಾಗುತ್ತದೆ” ಎಂದು ಯುನೈಟೆಡ್ ಸ್ಟೇಟ್ಸ್‌ನ ಎಲ್ಲಾ ದೇವಾಲಯಗಳ ಉನ್ನತ ಸಂಸ್ಥೆಯಾಗಿರುವ ಹಿಂದೂ ಮಂದಿರ ಎಂಪವರ್‌ಮೆಂಟ್ ಕೌನ್ಸಿಲ್ (HMEC) ನ ತೇಜಲ್ ಶಾ ಹೇಳಿದ್ದಾರೆ.

“ನಮಗೆ ಮತ್ತು ವಿಶೇಷವಾಗಿ ನಮ್ಮ ಭವಿಷ್ಯದ ಪೀಳಿಗೆಗೆ ಜಾಗೃತಿ ಮೂಡಿಸಲು ಮತ್ತು ಪ್ರಪಂಚದಾದ್ಯಂತ ಹಿಂದೂ ಧರ್ಮವನ್ನು ಹರಡಲು ಅಭಿಯಾನದಲ್ಲಿ ಒಗ್ಗಟ್ಟಾಗಿ ಮತ್ತು ಬಲವಾಗಿ ಉಳಿಯುವುದು ಬಹಳ ಮುಖ್ಯ” ಎಂದು ಶಾ ಹೇಳಿದ್ದಾರೆ.

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.