ಲಂಕೆಯಲ್ಲಿ ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ
Team Udayavani, May 14, 2019, 6:00 AM IST
ಕೊಲಂಬೊ: ಫೇಸ್ಬುಕ್ ಪೋಸ್ಟ್ನಿಂದಾಗಿ ರವಿವಾರ ಉದ್ಭವಿಸಿದ ಕೋಮು ಗಲಭೆಯನ್ನು ನಿಯಂತ್ರಿಸಲು ಶ್ರೀಲಂಕಾದಲ್ಲಿ ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈಸ್ಟರ್ ಹಬ್ಬದಂದು ಕಳೆದ ತಿಂಗಳು ನಡೆದ ಬಾಂಬ್ ಸ್ಫೋಟದ ನಂತರ ಮತ್ತೆ ಕರ್ಫ್ಯೂವನ್ನೂ ವಿಧಿಸಲಾಗಿದೆ. ಫೇಸ್ಬುಕ್ ಪೋಸ್ಟ್ನಿಂದ ಸಿಟ್ಟಿಗೆದ್ದ ಶ್ರೀಲಂಕಾ ಮೂಲ ನಿವಾಸಿಗಳು ಮಸೀದಿ ಹಾಗೂ ಮುಸ್ಲಿಂ ಮಾಲಕತ್ವದ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿದ್ದಾರೆ. ‘ತುಂಬಾ ನಗಬೇಡಿ, ಒಂದು ದಿನ ನೀವು ಅಳಬೇಕಾಗುತ್ತದೆ’ ಎಂದು ಫೇಸ್ಬುಕ್ ಪೋಸ್ಟ್ ಅನ್ನು ಸ್ಥಳೀಯ ಕ್ರಿಶ್ಚಿಯನ್ನರು ಬೆದರಿಕೆ ಎಂದು ಭಾವಿಸಿ, ಮುಸ್ಲಿಂ ಮಾಲೀಕತ್ವದ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಲು ಆರಂಭಿಸಿದರು. ಅನಂತರ ಕುಲಿಯಪಿಟಿಯಾಗೂ ಹರಡಿತು. ಹೀಗಾಗಿ ಪೊಲೀಸರು ಕರ್ಫ್ಯೂ ವಿಧಿಸಿದ್ದರು. ಸೋಮವಾರ ಇಂಟ ರ್ನೆಟ್ಗೂ ನಿರ್ಬಂಧ ವಿಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು