ಚೀನಾದ ಬಿಆರ್‌ಐಗೆ ಭಾರತ ಮತ್ತೆ ತಿರಸ್ಕಾರ


Team Udayavani, Jun 11, 2018, 6:00 AM IST

ap6102018000017b.jpg

ಖೀಂಗಾxವೋ: ಐರೋಪ್ಯ ರಾಷ್ಟ್ರಗಳನ್ನು ಏಷ್ಯಾ ರಾಷ್ಟ್ರಗಳೊಂದಿಗೆ ಬೆಸೆಯುವ ಚೀನಾದ ಮಹತ್ವಾ ಕಾಂಕ್ಷಿ ಆರ್ಥಿಕ ಕಾರಿಡಾರ್‌ ಯೋಜನೆ ಯಾದ ಬೆಲ್ಟ್ ಆ್ಯಂಡ್‌ ರೋಡ್‌ (ಬಿಆರ್‌ಐ)ಅನ್ನು ಭಾರತ ಮತ್ತೂಮ್ಮೆ ತಿರಸ್ಕರಿಸಿದೆ.

ಈ ಯೋಜನೆಯಡಿ ಪಾಕ್‌ ಆಕ್ರಮಿತ ಕಾಶ್ಮೀರದ ಮೂಲಕ ರಸ್ತೆ ಹಾದು ಹೋಗುತ್ತದೆ ಎಂಬ ಕಾರಣಕ್ಕೆ ಭಾರತ ಆರಂಭದಿಂದಲೂ ಇದನ್ನು ವಿರೋಧಿಸುತ್ತಲೇ ಬಂದಿದೆ.

ಎಸ್‌ಸಿಒ ಶೃಂಗದಲ್ಲಿ ಭಾನುವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಬೃಹತ್‌ ಸಂಪರ್ಕ ಯೋಜನೆಗಳು ದೇಶದ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಎತ್ತಿಹಿಡಿಯಬೇಕು. ಈ ಅಂಶಗಳನ್ನು ಒಳಗೊಂಡಿರುವ ಯಾವುದೇ ಯೋಜನೆಗೆ ಭಾರತ ಬೆಂಬಲಿಸುತ್ತದೆ ಎಂದು ಚೀನಾಕ್ಕೆ ಟಾಂಗ್‌ ನೀಡಿದ್ದಾರೆ.

ಶಾಂಘೈ ಸಹಕಾರ ಸಂಘಟನೆಯ (ಎಸ್‌ ಸಿಒ) ಸಮ್ಮೇಳನದಲ್ಲಿ ಈ ಯೋಜನೆಯನ್ನು ಒಪ್ಪಿಕೊಳ್ಳದೇ ಇರುವ ದಿಟ್ಟ ನಿರ್ಧಾರ ಕೈಗೊಂಡಿದ್ದು ಭಾರತ ಮಾತ್ರ. ಸಮ್ಮೇಳನದ ಕೊನೆಯ ದಿನವಾದ ಭಾನುವಾರ ಕೈಗೊಂಡ ನಿಲುವಳಿಯಲ್ಲಿ ರಷ್ಯಾ, ಪಾಕ್‌ ಸಹಿತ ಹಲವು ದೇಶಗಳು ಬಿಆರ್‌ಐಗೆ ಬೆಂಬಲ ನೀಡುವುದಾಗಿ ಘೋಷಿಸಿವೆ. ಬೆಲ್ಟ್ ಆ್ಯಂಡ್‌ ರೋಡ್‌ ಯೋಜನೆಗೆ ಚೀನಾ ಒಟ್ಟು 80 ದೇಶ ಹಾಗೂ ಸಂಸ್ಥೆಗಳ ಜೊತೆಗೆ ಸಹಭಾಗಿತ್ವ ಸಾಧಿಸಿದೆ. ಈ ಯೋಜನೆಗೆ 32 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ.

ಭಯೋತ್ಪಾದನೆ ತಡೆಗಾಗಿ ಯುವಕರಿಗೆ ಶಿಕ್ಷಣ: ಭಯೋತ್ಪಾದನೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಯುವಕರಿಗೆ ಸಾಮಾನ್ಯ ಶಿಕ್ಷಣದ ಜೊತೆಗೆ ಧಾರ್ಮಿಕ ಹಾಗೂ ನೈತಿಕ ಶಿಕ್ಷಣವನ್ನು ಒದಗಿಸಲು ಕಾರ್ಯಕ್ರಮ ರೂಪಿಸಲು ಎಸ್‌ಸಿಒ ಸದಸ್ಯ ರಾಷ್ಟ್ರಗಳು ಸಮ್ಮತಿಸಿವೆ. ಈ ಸಂಬಂಧ ಖೀಂಗಾxವೋ ಘೋಷಣೆಗೆ ಸಹಿ ಹಾಕಿವೆ. ಈ ಪ್ರಸ್ತಾಪವನ್ನು 2017ರಲ್ಲಿ ಉಜ್ಬೆಕಿಸ್ತಾನದ ಅಧ್ಯಕ್ಷ ಶೌಕತ್‌ ಮಿರ್ಜಿಯೋಯೆವ್‌ ಮಂಡಿಸಿದ್ದರು.

3 ದೇಶಗಳ ಮುಖ್ಯಸ್ಥರ ಭೇಟಿ: ಎಸ್‌ಸಿಒ ಸಮ್ಮೇಳನದ ವೇಳೆ ಪ್ರಧಾನಿ ಮೋದಿ ಮೂರು ದೇಶಗಳ ಮುಖ್ಯಸ್ಥರನ್ನು ಭೇಟಿ ಮಾಡಿದ್ದಾರೆ. ಕಜಕಿಸ್ತಾನ, ಕಿರ್ಗಿಸ್ತಾನ ಮತ್ತು ಮಂಗೋಲಿಯಾದ ಅಧ್ಯಕ್ಷರನ್ನು ಭೇಟಿ ಮಾಡಿ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ.

ಶೃಂಗದ ನಿರ್ಣಯ
– ಉಗ್ರವಾದ, ಪ್ರತ್ಯೇಕತಾವಾದ, ತೀವ್ರವಾದದ ವಿರುದ್ಧ ಸಮರಕ್ಕೆ ವಿಶ್ವಸಂಸ್ಥೆ ಸಹಭಾಗಿತ್ವದಲ್ಲಿ ಏಕೀಕೃತ
ಜಾಗತಿಕ ಉಗ್ರ ನಿಗ್ರಹ ಸಂಸ್ಥೆ ಸ್ಥಾಪನೆ
– ಉಗ್ರ ಸಿದ್ಧಾಂತವು ಪಸರಿಸದಂತೆ ತಡೆಯಲು ಕ್ರಮ
– ಪ್ರತ್ಯೇಕವಾದದ ಸಿದ್ಧಾಂತದತ್ತ ಆಕರ್ಷಣೆಗೊಳಗಾಗದಂತೆ ಯುವಜನತೆಗೆ ಕರೆ ನೀಡುವುದು
– ಉಗ್ರರ ಚಲನವಲನ ಕುರಿತು ಪರಸ್ಪರ ಮಾಹಿತಿ ವಿನಿಮಯ

ಮೋದಿ ಹೇಳಿದ್ದೇನು?
– ನಾಗರಿಕರು, ಆರ್ಥಿಕ ಅಭಿವೃದ್ಧಿ, ಸಂಪರ್ಕ, ಸಮಗ್ರತೆ, ಗೌರವ ಹಾಗೂ ಪರಿಸರ ರಕ್ಷಣೆಯನ್ನು ಒಳಗೊಂಡ ಸುಭದ್ರತೆ ಅಗತ್ಯ 
– ಸಂಪರ್ಕ ಎಂಬುದು ಕೇವಲ ಭೌತಿಕವಾದದ್ದಲ್ಲ. ಮಾನವೀಯ ಸಂಪರ್ಕವೂ ಅತ್ಯಂತ ಅಗತ್ಯ
– ಎಸ್‌ಸಿ ಗುರಿಗಳನ್ನು ನಿಗದಿಗೊಳಿಸಬೇಕು ಮತ್ತು ಅದನ್ನು ಸಾಧಿಸಲು ಸಣ್ಣ ಸಮಿತಿಗಳನ್ನು ರಚಿಸಿ ರೂಪುರೇಷೆ ನಿಗದಿಗೊಳಿಸಬೇಕು 
– ಭಾರತದಲ್ಲಿ ಶೀಘ್ರ ಎಸ್‌ಸಿಒ ಆಹಾರ ಮೇಳ ಮತ್ತು ಬೌದ್ಧ ಪರಂಪರೆಯ ಸಮಗ್ರ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತದೆ
– ಭಾರತಕ್ಕೆ ಎಸ್‌ಸಿಒ ದೇಶಗಳಿಂದ ಆಗಮಿಸುವ ಪ್ರವಾಸಿಗರ ಪ್ರಮಾಣ ಶೇ. 6ರಷ್ಟು ಮಾತ್ರ, ಇದು ದ್ವಿಗುಣಗೊಳ್ಳುವ ಅವಕಾಶ ಹೊಂದಿದೆ. 

ನೆರೆ ದೇಶಗಳ ಜತೆ ಸಂಪರ್ಕ ಸಾಧಿಸುವುದು ಭಾರತದ ಪ್ರಥಮ ಆದ್ಯತೆ. ಸುಸ್ಥಿರ ಮತ್ತು ದಕ್ಷ ಸಂಪರ್ಕ
ಯೋಜನೆಗಳನ್ನು ನಾವು ಸ್ವಾಗತಿಸುತ್ತೇವೆ. ಇವು ದೇಶದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನೂ
ಗೌರವಿಸಬೇಕು

–  ನರೇಂದ್ರ ಮೋದಿ

ಟಾಪ್ ನ್ಯೂಸ್

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.