ಸಿರಿಯಾ: ಭೀಕರ ವಿಷಾನಿಲ ದಾಳಿಗೆ 100 ಬಲಿ, ವಿಶ್ವ ನಾಯಕರ ಖಂಡನೆ
Team Udayavani, Apr 5, 2017, 11:11 AM IST
ಬೇರೂತ್ : ಸಿರಿಯದ ಇದ್ಲಿಬ್ ಪ್ರಾಂತ್ಯದ ಖಾನ್ ಶೈಖೌನ್ ಪ್ರದೇಶದಲ್ಲಿ ನಡೆದಿರುವ ಭೀಕರ ವಿಷಾನಿಲ ದಾಳಿಗೆ ನೂರು ಮಂದಿ ಬಲಿಯಾಗಿದ್ದಾರೆ.
ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದಲ್ಲಿ ನಿನ್ನೆ ಮಂಗಳವಾರ ವಿಷಾನಿಲ ದಾಳಿ ನಡೆದಿತ್ತು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 58 ನಾಗರಿಕರು ಬಲಿಯಾಗಿದ್ದರು. ಇಂದು ಸಾವಿನ ಸಂಖ್ಯೆ 100ಕ್ಕೇರಿರುವುದಾಗಿ ಸಿರಿಯದ ಮಾನವ ಹಕ್ಕು ವಿಚಕ್ಷಣ ಸಂಸ್ಥೆಯು ತಿಳಿಸಿದೆ.
ಸರಕಾರಿ ಸೇನೆಯ ಯುದ್ಧ ವಿಮಾನಗಳು ಈ ಶಂಕಿತ ವಿಷಾನಿಲ ದಾಳಿ ಮಾಡಿವೆ ಎಂದು ಹೇಳಲಾಗಿದೆ. ಆದರೆ ದಾಳಿ ನಡೆಸಿರುವುದು ರಶ್ಯದ ಮೈತ್ರಿಕೂಟದ ವಿಮಾನಗಳೇ ಅಥವಾ ಸಿರಿಯದ ವಿಮಾನಗಳೇ ಎಂಬುದು ಇನ್ನೂ ಖಚಿತವಾಗಿಲ್ಲ. ಈ ದಾಳಿಯಲ್ಲಿ ತನ್ನ ಕೈವಾಡವಿರುವ ಆರೋಪವನ್ನು ಸಿರಿಯ ಸರಕಾರ ಅಲ್ಲಗಳೆದಿದೆ.
ಈ ವಿಷಾನಿಲ ದಾಳಿಯನ್ನು ಅಮೆರಿಕ, ಫ್ರಾನ್ಸ್, ಬ್ರಿಟನ್ ಸೇರಿದಂತೆ ವಿಶ್ವದ ಹಲವು ದೇಶಗಳ ನಾಯಕರು ಖಂಡಿಸಿದ್ದಾರೆ. ಇದೊಂದು ಹೇಯ ಕೃತ್ಯ ಎಂದು ಫ್ರಾನ್ಸ್ ವಿದೇಶಾಂಗ ಸಚಿವ ಜಿಯಾನ್ ಮಾರ್ಕ್ ಅರೌಲ್ಫ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ