![court](https://www.udayavani.com/wp-content/uploads/2024/07/court-7-415x231.jpg)
ಲೆಟರ್ ಮ್ಯಾನ್; 14 ಸಾವಿರ ಅಡಿ ಎತ್ತರದಲ್ಲಿ ಈತನೇ ಏಕೈಕ ಅಂಚೆಯಣ್ಣ
Team Udayavani, Apr 17, 2017, 10:08 AM IST
![17-PTI-1.jpg](https://www.udayavani.com/wp-content/uploads/2017/04/17/17-PTI-1.jpg)
ನಾಥುಲಾ (ಭಾರತ-ಚೀನ ಗಡಿ): ಭಾರತ ಮತ್ತು ಚೀನ ನಡುವೆ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜತಾಂತ್ರಿಕ ಮಟ್ಟದಲ್ಲಿ ವಾಗ್ವಾದ ನಡೆಯುತ್ತಿರಬಹುದು. ಅದು ಯಾವುದೂ ಈ ವ್ಯಕ್ತಿಯ ಕೆಲಸಕ್ಕೇನೂ ತೊಂದರೆಯಾಗಿಲ್ಲ. ಅವರು 25 ವರ್ಷಗಳಿಂದ ಅಂಚೆಯಣ್ಣನಾಗಿ ಕೆಲಸ ಮಾಡುತ್ತಿದ್ದಾರೆ. ಅವರೇ ಸಿಕ್ಕಿಂನ 61 ವರ್ಷದ ಭೀಮ್ ಬಹದ್ದೂರ್ ತಮಂಗ್.
ತಮಂಗ್ ಪತ್ರ ತಲುಪಿಸುವ ಕೆಲಸ ಮಾಡುವುದು ಬರೋಬ್ಬರಿ 14,000 ಅಡಿ ಎತ್ತರದ ಹಿಮಾವೃತ ಪ್ರದೇಶದಲ್ಲಿ ಎಂಬುದು ಅಚ್ಚರಿಯ ಅಂಶ! ಸುಮಾರು 25 ವರ್ಷಗಳ ಕಾಲ ಪೋಸ್ಟ್ಮ್ಯಾನ್ ಆಗಿ ಸೇವೆ ಸಲ್ಲಿಸಿರುವ ಭೀಮ್ ಬಹದ್ದೂರ್ ತಮಂಗ್, ಇಳಿ ವಯಸ್ಸಿನಲ್ಲೂ ಹಿಮಾವೃತ ಗುಡ್ಡಗಾಡಿನ ದುರ್ಗಮ ಹಾದಿಯಲ್ಲಿ ಕ್ರಮಿಸಿ, 14 ಸಾವಿರ ಅಡಿ ಎತ್ತರದಲ್ಲಿರುವ ಭಾರತ-ಚೀನ ಗಡಿ ಪ್ರದೇಶ, ನಾಥು ಲಾ ತಲುಪಿ ಪತ್ರ ವಿನಿಮಯ ಮಾಡುತ್ತಾರೆ.
ಪ್ರತಿ ಗುರುವಾರ ಬೆಳಗ್ಗೆ ಪತ್ರಗಳ ಬ್ಯಾಗ್ ಹೆಗಲೇರಿಸಿಕೊಂಡು, ಸಾಮಾನ್ಯ ಉಡುಗೆ, ಮೇಲೊಂದು ಜಾಕೆಟ್, ಗಾಳಿಯಿಂದ ಕಿವಿಗಳನ್ನು ರಕ್ಷಿಸಲು ಟೋಪಿ ಧರಿಸಿ ಹೊರಡುವ ತಮಂಗ್, ಬೆಳಗ್ಗೆ 8.30ಕ್ಕೆ ಭಾರತದ ಗಡಿ ಮೂಲಕ ತೆರಳಿ, ಚೀನದ ಗಡಿ ಪ್ರವೇಶಿಸಿ, ಚೀನ ಭಾಗದಲ್ಲಿರುವ ವ್ಯಕ್ತಿಯೊಂದಿಗೆ ಪತ್ರದ ಚೀಲ ವಿನಿಮಯ ಮಾಡಿ ಕೊಂಡು ಹಿಂದಿರುಗುತ್ತಾರೆ. ಈ ಕೆಲಸವನ್ನ ಎರಡೂ ದೇಶಗಳ ಅನುಮತಿ ಪಡೆದೇ ಮಾಡುತ್ತಿರುವ ತಮಂಗ್, ಚಳಿಗಾಲದಲ್ಲಿ – 20 ಡಿ. ಸೆ. ಕೊರೆವ ಚಳಿ ಇದ್ದರೂ ಕರ್ತವ್ಯ ಮರೆಯುವುದಿಲ್ಲ. ಮಾತ್ರವಲ್ಲ “ಇದೊಂದು ಸಣ್ಣ ಪ್ರಕ್ರಿಯೆ’ ಎನ್ನುತ್ತಾರೆ!
ಟಾಪ್ ನ್ಯೂಸ್
![court](https://www.udayavani.com/wp-content/uploads/2024/07/court-7-415x231.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
![robbers](https://www.udayavani.com/wp-content/uploads/2024/07/robbers-1-150x89.jpg)
Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!
![Kohli IPL 2024](https://www.udayavani.com/wp-content/uploads/2024/07/Kohli-IPL-2024-150x103.jpg)
Champions Trophy; ಕೊಹ್ಲಿ ಪಾಕ್ನಲ್ಲಿ ಆಡಲಿ: ಯೂನಿಸ್ ಖಾನ್
![1-tatoo](https://www.udayavani.com/wp-content/uploads/2024/07/1-tatoo-150x84.jpg)
Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!
![1-wewqewq](https://www.udayavani.com/wp-content/uploads/2024/07/1-wewqewq-2-150x98.jpg)
Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.