ಮಣಿಪುರದಲ್ಲಿ ಬಿಜೆಪಿಗೆ ತಲೆನೋವು ಸೃಷ್ಟಿಸಿದ ಅಫಸ್ಪಾ
ಕಾಯಿದೆ ತೆರವಿಗೆ ಸ್ಥಳೀಯ ಪಕ್ಷಗಳ ಆಗ್ರಹ
Team Udayavani, Jan 17, 2022, 3:57 PM IST
ಮಣಿಪುರ :ನಾಗಾಲ್ಯಾಂಡ್ನಲ್ಲಿ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತಕ್ಕೆ ಕಾರಣವಾಗಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆ (ಅಫ್ಸ್ಪಾ ) ವಿರುದ್ಧ ಆಕ್ಷೇಪ ವ್ಯಕ್ತವಾಗುತ್ತಿರುವುದು ಮಣಿಪುರದಲ್ಲೂ ಬಿಜೆಪಿಗೆ ಭಾರಿ ತಲೆನೋವು ಸೃಷ್ಟಿಸಿದೆ.
ರಾಜಧಾನಿ ಇಂಫಾಲ್ ಹೊರತುಪಡಿಸಿ ಮಣಿಪುರದ ಎಲ್ಲ ಜಿಲ್ಲೆಗಳಿಗೂ ಈ ಕಾಯಿದೆ ಅನ್ವಯವಾಗುತ್ತಿದೆ. ಅಫ್ಸ್ಪಾ ಕೈ ಬಿಡುವಂತೆ ಮಣಿಪುರದ ನಾಗರಿಕ ಸಂಘಟನೆಗಳು ಕಳೆದ ಐದು ವರ್ಷದಿಂದಲೂ ಹೋರಾಟ ನಡೆಸುತ್ತಿವೆ. ಆದರೆ ಆಡಳಿತಾರೂಢ ಬಿಜೆಪಿ ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿದೆ. ಹೀಗಾಗಿ ಪಕ್ಷದ ನಿಲುವೇನು ? ಎಂದು ಸ್ಥಳೀಯ ಪಕ್ಷಗಳು ಪ್ರಶ್ನೆ ಮಾಡುತ್ತಿವೆ.
ಮಣಿಪುರದ ಮೇಲೆ ಹೇರಿಕೆಯಾಗಿರುವ ಅಫ್ಸ್ಪಾ ಅವಧಿ ಡಿಸೆಂಬರ್ 1 ಕ್ಕೆ ಕೊನೆಗೊಂಡಿದೆ. ನಾಗಲ್ಯಾಂಡ್ನಲ್ಲಿ ಡಿ.4 ರಂದು ಸೇನಾಪಡೆಗಳು ಗುಪ್ತದಳದ ತಪ್ಪು ಮಾಹಿತಿ ಆಧರಿಸಿ ನಾಗರಿಕ ಹತ್ಯೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಇಡಿ ಈಶಾನ್ಯ ಭಾರತದ ರಾಜ್ಯಗಳು ರಕ್ಷಣಾ ಪಡೆಗಳ ವಿಶೇಷಾಧಿಕಾರ ಕಾಯಿದೆ ವಾಪಾಸ್ ಪಡೆಯುವಂತೆ ಆಗ್ರಹಿಸುತ್ತಿವೆ. ಆದರೆ ಕಳೆದ ವಾರ ಸಭೇ ಸೇರಿದ್ದ ಕೇಂದ್ರ ಗೃಹ ಇಲಾಖೆ ನಾಗಾಲ್ಯಾಂಡ್ನಲ್ಲಿ ಕಾಯಿದೆ ವಿಸ್ತರಿಸಲು ನಿರ್ಧರಿಸಿದೆ.
ನಾಗಾಲ್ಯಾಂಡ್ನ ಎನ್ಪಿಎಫ್ ಪಕ್ಷ ಮಣಿಪುರದಲ್ಲೂ ಪ್ರಭಾವ ಹೊಂದಿದ್ದು, ಈ ಬಾರಿ 50 ಕ್ಷೇತ್ರದಲ್ಲಿ ಸ್ಪರ್ಧೆ ನಡೆಸುತ್ತಿದೆ. ಹೀಗಾಗಿ ಅಫ್ಸ್ಪಾ ವಿಚಾರ ಮಣಿಪುರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
MUST WATCH
ಹೊಸ ಸೇರ್ಪಡೆ
Mangaluru: ರೋಗಿಗಳಲ್ಲಿ ಭರವಸೆ ತುಂಬುವ ಕೆಲಸವಾಗಲಿ: ರೈ| ರೆ| ಡಾ| ಸಲ್ಡಾನ್ಹಾ
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!