ಇಂದಿನ ಗ್ರಹಬಲ: ಗೃಹಿಣಿಗೆ ಮುನಿಸು ತಣಿಸಲು ಗೃಹಾಲಂಕಾರ ವಸ್ತುಗಳ ಖರೀದಿ ಇದ್ದೀತು!
Team Udayavani, Mar 13, 2021, 7:47 AM IST
13-03-2021
ಮೇಷ: ಅಧೈರ್ಯದ ಹೆಜ್ಜೆಯಿಂದ ಕಾರ್ಯ ವಿಪತ್ತು ಕಾಣಿಸಲಿದೆ. ಕಾರ್ಯರಂಗದಲ್ಲಿ ಸ್ವಾಭಿಮಾನವನ್ನು ಬದಿಗೊತ್ತಿ ಧೈರ್ಯದಿಂದ ಮುಂದುವರಿಯಿರಿ. ಸಾಧಕವಾಗಲಿದೆ. ಧನಾಗಮನದಲ್ಲಿ ವಿಳಂಬವಾದರೂ ಸಾಕಷ್ಟು ಧನಪ್ರಾಪ್ತಿ ಇದೆ.
ವೃಷಭ: ಕೌಟುಂಬಿಕವಾಗಿ ಮನಸ್ಸಿಗೆ ಸಮಾಧಾನವಿರದು. ಸ್ವಲ್ಪ ಸಾವಧಾನದಿಂದ ಆಲೋಚಿಸಿ ಮುನ್ನಡೆದರೆ ಉತ್ತಮ. ದಾಯಾದಿಗಳ ಕಿರುಕುಳವು ಕಂಡುಬಂದೀತು. ಸ್ತ್ರೀ ನಿಮಿತ್ತ ಸ್ವಲ್ಪ ಅಸೌಖ್ಯ ಕಂಡುಬಂದೀತು. ಜಾಗ್ರತೆ ಇರಲಿ.
ಮಿಥುನ: ದಾಂಪತ್ಯ ಜೀವನದಲ್ಲಿ ಆಗಾಗ ಸಿಹಿ ಮಧ್ಯೆ ಖಾರ ಸವಿಯುವ ಪ್ರಸಂಗ ಬರಬಹುದು. ಮಕ್ಕಳ, ವಿದ್ಯಾರ್ಥಿಗಳ ಪ್ರಗತಿಯಲ್ಲಿ ಮುನ್ನಡೆ ಕಂಡುಬರುವುದು. ತಾತ್ಕಾಲಿಕ ಹುದ್ದೆಯವರಿಗೆ ಖಾಯಂ ಆಗುವ ಸಾಧ್ಯತೆ ಇರುತ್ತದೆ.
ಕರ್ಕ: ಹೈನು, ಕೃಷಿ, ಗುಡಿಕೈಗಾರಿಕೆ, ಕುಂಬಾರ ವೃತ್ತಿಯವರಿಗೆ ಆಶಾದಾಯಕ ದಿನಗಳಿವು. ಹಾಗೇ ಅವಿವಾಹಿತರಿಗೆ ಮಾಂಗಲ್ಯಭಾಗ್ಯ ಒದಗಿ ಬರಲಿದೆ. ಕಠಿಣ ದುಡಿಮೆ ತಕ್ಕ ರೀತಿಯಲ್ಲಿ ಫಲವು ಕಂಡುಬರುವುದು.
ಸಿಂಹ: ದೈವಾನುಗ್ರಹ ಇಲ್ಲವಾದರೂ ಪ್ರಯತ್ನ ಬಲದಿಂದ ಕೆಲಸವು ಫಲಿಸಲಿದೆ. ನೆಮ್ಮದಿ ಕಡಿಮೆ ಇದ್ದರೂ ಆರ್ಥಿಕವಾಗಿ ಚಿಂತೆ ಇರದು. ಕೃಷಿಕರ ಕಾದು ನೋಡುವ ಪ್ರವೃತ್ತಿ ಲಾಭ ತರಲಿದೆ. ವೈದ್ಯಕೀಯ ವೆಚ್ಚ ಹೆಚ್ಚಾಗಲಿದೆ.
ಕನ್ಯಾ: ದೇವತಾ ಕಾರ್ಯದಿಂದ ಮನಸ್ಸಿಗೆ ಸಂತಸವಾಗಲಿದೆ. ವಿದ್ಯಾರ್ಥಿಗಳಿಗೆ ತೊಡಕುಗಳು ಕಾಣಿಸಿಕೊಂಡರೂ ಫಲಿತಾಂಶವು ಉತ್ತಮ ದೊರಕಲಿದೆ. ಗೃಹಿಣಿಗೆ ಮುನಿಸು ತಣಿಸಲು ಗೃಹಾಲಂಕಾರ ವಸ್ತುಗಳ ಖರೀದಿ ಇದ್ದೀತು.
ತುಲಾ:ಗೃಹದಲ್ಲಿ ಇಷ್ಟಮಿತ್ರ ಬಂಧುಗಳ ಆಗಮನದಿಂದ ಸಂತೋಷ, ಸಮಾಧಾನ ಮೂಡಿಬರಲಿದೆ. ಶುಭಮಂಗಲ ಕಾರ್ಯದ ಚಿಂತನೆ ನಡೆದೀತು. ಉದ್ಯಮಿಗಳಿಗೆ ಸರಕಾರೀ ಅಧಿಕಾರಿಗಳ ಕಿರುಕುಳವು ಕಂಡುಬಂದೀತು.
ವೃಶ್ಚಿಕ: ಮನದ ಮೂಲೆಯಲ್ಲಿ ಆಳವಾದ ವ್ಯಸನವೊಂದು ಆಗಾಗ ಕಿರಿಕಿರಿ ತಂದೀತು. ಆರ್ಥಿಕವಾಗಿ ಹೆಚ್ಚಿನ ತಾಪತ್ರಯವು ಇರದು. ಹಲವು ತೊಂದರೆಗಳ ನಡುವೆ ಮೊಂಡು ಧೈರ್ಯದಿಂದ ಕಾರ್ಯಸಾಧನೆಯಾಗಲಿದೆ.
ಧನು: ಆತ್ಮೀಯ ಮಿತ್ರರ ಸಹಕಾರವು ದೊರಕಲಿದೆ. ಇದರಿಂದ ಮುನ್ನಡೆಗೆ ಸಾಧಕವಾದೀತು. ಅವಿವಾಹಿತರು ನಿರುದ್ಯೋಗಿಗಳಿಗೆ ಸ್ವಲ್ಪ ಕಾಲಾವಕಾಶವು ಬೇಕಾದರೂ ಉತ್ತಮ ಫಲಿತಾಂಶ ದೊರಕಲಿದೆ. ಕಿರು ಸಂಚಾರವಿದೆ.
ಮಕರ: ಕಾರ್ಯರಂಗದಲ್ಲಿ ನೂತನ ವೃತ್ತಿ ಯಾ ಹೊಸ ಸಂಬಂಧ ಕುದುರೀತು. ಕೋರ್ಟುಕಚೇರಿ ವಿವಾದಗಳಿಗೆ ನಿಮ್ಮ ಪರ ಜಯ ದೊರಕಲಿದೆ. ನೂತನ ದಂಪತಿಗಳಿಗೆ ಸಂತಾನಭಾಗ್ಯದ ಕುರುಹು ದೊರಕಿ ಸಂತಸವಾಗಲಿದೆ.
ಕುಂಭ: ನಿಮಗೆ ಸಾಕಷ್ಟು ಧನಾಗಮನವಿದ್ದರೂ ನಿಮ್ಮತನವನ್ನು ಮರೆಯಲೆಂದು ಹಲವು ಖರ್ಚುವೆಚ್ಚ ಗಳನ್ನು ಭರಿಸುವಿರಿ. ವಿದ್ಯಾಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಮುನ್ನಡೆ, ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದ್ದು ಸಮಾಧಾನವಾದೀತು.
ಮೀನ: ಸದ್ಯದ ಪರಿಸ್ಥಿತಿಯಲ್ಲಿ ಕಾದು ನೋಡುವ ಪ್ರಸಂಗ ಎದುರಾಗಲಿದೆ. ಕಾರ್ಯರಂಗದಲ್ಲಿ ನೂತನ ಮೈತ್ರಿ ಯಾ ಹೊಸ ಸಂಬಂಧ ಕುದುರೀತು. ಕೋರ್ಟು ವಾದ ವಿವಾದಗಳಿಗೆ ನಿಮ್ಮ ಪರ ಚಾಲನೆಯು ದೊರಕಲಿದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ
Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ
MUST WATCH
ಹೊಸ ಸೇರ್ಪಡೆ
ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್
Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ