ಇಂದಿನ ಗ್ರಹಬಲ: ಗೃಹಿಣಿಗೆ ಮುನಿಸು ತಣಿಸಲು ಗೃಹಾಲಂಕಾರ ವಸ್ತುಗಳ ಖರೀದಿ ಇದ್ದೀತು!


Team Udayavani, Mar 13, 2021, 7:47 AM IST

horoscope

13-03-2021

ಮೇಷ: ಅಧೈರ್ಯದ ಹೆಜ್ಜೆಯಿಂದ ಕಾರ್ಯ ವಿಪತ್ತು ಕಾಣಿಸಲಿದೆ. ಕಾರ್ಯರಂಗದಲ್ಲಿ ಸ್ವಾಭಿಮಾನವನ್ನು ಬದಿಗೊತ್ತಿ ಧೈರ್ಯದಿಂದ ಮುಂದುವರಿಯಿರಿ. ಸಾಧಕವಾಗಲಿದೆ. ಧನಾಗಮನದಲ್ಲಿ ವಿಳಂಬವಾದರೂ ಸಾಕಷ್ಟು ಧನಪ್ರಾಪ್ತಿ ಇದೆ.

ವೃಷಭ: ಕೌಟುಂಬಿಕವಾಗಿ ಮನಸ್ಸಿಗೆ ಸಮಾಧಾನವಿರದು. ಸ್ವಲ್ಪ ಸಾವಧಾನದಿಂದ ಆಲೋಚಿಸಿ ಮುನ್ನಡೆದರೆ ಉತ್ತಮ. ದಾಯಾದಿಗಳ ಕಿರುಕುಳವು ಕಂಡುಬಂದೀತು. ಸ್ತ್ರೀ ನಿಮಿತ್ತ ಸ್ವಲ್ಪ ಅಸೌಖ್ಯ ಕಂಡುಬಂದೀತು. ಜಾಗ್ರತೆ ಇರಲಿ.

ಮಿಥುನ: ದಾಂಪತ್ಯ ಜೀವನದಲ್ಲಿ ಆಗಾಗ ಸಿಹಿ ಮಧ್ಯೆ ಖಾರ ಸವಿಯುವ ಪ್ರಸಂಗ ಬರಬಹುದು. ಮಕ್ಕಳ, ವಿದ್ಯಾರ್ಥಿಗಳ ಪ್ರಗತಿಯಲ್ಲಿ ಮುನ್ನಡೆ ಕಂಡುಬರುವುದು. ತಾತ್ಕಾಲಿಕ ಹುದ್ದೆಯವರಿಗೆ ಖಾಯಂ ಆಗುವ ಸಾಧ್ಯತೆ ಇರುತ್ತದೆ.

ಕರ್ಕ: ಹೈನು, ಕೃಷಿ, ಗುಡಿಕೈಗಾರಿಕೆ, ಕುಂಬಾರ ವೃತ್ತಿಯವರಿಗೆ ಆಶಾದಾಯಕ ದಿನಗಳಿವು. ಹಾಗೇ ಅವಿವಾಹಿತರಿಗೆ ಮಾಂಗಲ್ಯಭಾಗ್ಯ ಒದಗಿ ಬರಲಿದೆ. ಕಠಿಣ ದುಡಿಮೆ ತಕ್ಕ ರೀತಿಯಲ್ಲಿ ಫ‌ಲವು ಕಂಡುಬರುವುದು.

ಸಿಂಹ: ದೈವಾನುಗ್ರಹ ಇಲ್ಲವಾದರೂ ಪ್ರಯತ್ನ ಬಲದಿಂದ ಕೆಲಸವು ಫ‌ಲಿಸಲಿದೆ. ನೆಮ್ಮದಿ ಕಡಿಮೆ ಇದ್ದರೂ ಆರ್ಥಿಕವಾಗಿ ಚಿಂತೆ ಇರದು. ಕೃಷಿಕರ ಕಾದು ನೋಡುವ ಪ್ರವೃತ್ತಿ ಲಾಭ ತರಲಿದೆ. ವೈದ್ಯಕೀಯ ವೆಚ್ಚ ಹೆಚ್ಚಾಗಲಿದೆ.

ಕನ್ಯಾ: ದೇವತಾ ಕಾರ್ಯದಿಂದ ಮನಸ್ಸಿಗೆ ಸಂತಸವಾಗಲಿದೆ. ವಿದ್ಯಾರ್ಥಿಗಳಿಗೆ ತೊಡಕುಗಳು ಕಾಣಿಸಿಕೊಂಡರೂ ಫ‌ಲಿತಾಂಶವು ಉತ್ತಮ ದೊರಕಲಿದೆ. ಗೃಹಿಣಿಗೆ ಮುನಿಸು ತಣಿಸಲು ಗೃಹಾಲಂಕಾರ ವಸ್ತುಗಳ ಖರೀದಿ ಇದ್ದೀತು.

ತುಲಾ:ಗೃಹದಲ್ಲಿ ಇಷ್ಟಮಿತ್ರ ಬಂಧುಗಳ ಆಗಮನದಿಂದ ಸಂತೋಷ, ಸಮಾಧಾನ ಮೂಡಿಬರಲಿದೆ. ಶುಭಮಂಗಲ ಕಾರ್ಯದ ಚಿಂತನೆ ನಡೆದೀತು. ಉದ್ಯಮಿಗಳಿಗೆ ಸರಕಾರೀ ಅಧಿಕಾರಿಗಳ ಕಿರುಕುಳವು ಕಂಡುಬಂದೀತು.

ವೃಶ್ಚಿಕ: ಮನದ ಮೂಲೆಯಲ್ಲಿ ಆಳವಾದ ವ್ಯಸನವೊಂದು ಆಗಾಗ ಕಿರಿಕಿರಿ ತಂದೀತು. ಆರ್ಥಿಕವಾಗಿ ಹೆಚ್ಚಿನ ತಾಪತ್ರಯವು ಇರದು. ಹಲವು ತೊಂದರೆಗಳ ನಡುವೆ ಮೊಂಡು ಧೈರ್ಯದಿಂದ ಕಾರ್ಯಸಾಧನೆಯಾಗಲಿದೆ.

ಧನು: ಆತ್ಮೀಯ ಮಿತ್ರರ ಸಹಕಾರವು ದೊರಕಲಿದೆ. ಇದರಿಂದ ಮುನ್ನಡೆಗೆ ಸಾಧಕವಾದೀತು. ಅವಿವಾಹಿತರು ನಿರುದ್ಯೋಗಿಗಳಿಗೆ ಸ್ವಲ್ಪ ಕಾಲಾವಕಾಶವು ಬೇಕಾದರೂ ಉತ್ತಮ ಫ‌ಲಿತಾಂಶ ದೊರಕಲಿದೆ. ಕಿರು ಸಂಚಾರವಿದೆ.

ಮಕರ: ಕಾರ್ಯರಂಗದಲ್ಲಿ ನೂತನ ವೃತ್ತಿ ಯಾ ಹೊಸ ಸಂಬಂಧ ಕುದುರೀತು. ಕೋರ್ಟುಕಚೇರಿ ವಿವಾದಗಳಿಗೆ ನಿಮ್ಮ ಪರ ಜಯ ದೊರಕಲಿದೆ. ನೂತನ ದಂಪತಿಗಳಿಗೆ ಸಂತಾನಭಾಗ್ಯದ ಕುರುಹು ದೊರಕಿ ಸಂತಸವಾಗಲಿದೆ.

ಕುಂಭ: ನಿಮಗೆ ಸಾಕಷ್ಟು ಧನಾಗಮನವಿದ್ದರೂ ನಿಮ್ಮತನವನ್ನು ಮರೆಯಲೆಂದು ಹಲವು ಖರ್ಚುವೆಚ್ಚ ಗಳನ್ನು ಭರಿಸುವಿರಿ. ವಿದ್ಯಾಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಮುನ್ನಡೆ, ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದ್ದು ಸಮಾಧಾನವಾದೀತು.

ಮೀನ: ಸದ್ಯದ ಪರಿಸ್ಥಿತಿಯಲ್ಲಿ ಕಾದು ನೋಡುವ ಪ್ರಸಂಗ ಎದುರಾಗಲಿದೆ. ಕಾರ್ಯರಂಗದಲ್ಲಿ ನೂತನ ಮೈತ್ರಿ ಯಾ ಹೊಸ ಸಂಬಂಧ ಕುದುರೀತು. ಕೋರ್ಟು ವಾದ ವಿವಾದಗಳಿಗೆ ನಿಮ್ಮ ಪರ ಚಾಲನೆಯು ದೊರಕಲಿದೆ.

ಎನ್.ಎಸ್. ಭಟ್‌

ಟಾಪ್ ನ್ಯೂಸ್

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.