ಇಂದಿನ ನಿಮ್ಮ ಗ್ರಹಬಲ: ಈ ರಾಶಿಯ ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಹೊಂದಿಯಾರು
Team Udayavani, Feb 16, 2021, 7:38 AM IST
16-02-2021
ಮೇಷ: ಆಕರ್ಷಕವಾದ ದೇಹ ಸೌಂದರ್ಯ ಹಾಗೂ ಒಳ್ಳೆಯ ನಡತೆ, ಸದಾಚಾರ, ಆತ್ಮಚಿಂತನೆ ಹೆಚ್ಚಾಗಿರುವ ನೀವು ಸದಾ ಒಳಿತನ್ನೇ ಬಯಸುವಿರಿ. ಪರರ ದುಃಖ, ಕಾತುರತೆ, ದೃಢ ಮನಸ್ಸಿನ ನೀವು ಕರಗುವಿರಿ.
ವೃಷಭ: ಸತ್ಯವಾದಿಗಳಾಗಿ ಗುರುಹಿರಿಯಲ್ಲಿ ಭಕ್ತಿಯುಳ್ಳ ವರಾಗಿದ್ದ ನೀವು ನೀತಿ ನಿಯಮಗಳಿಗೆ ಬದ್ಧರಾಗುತ್ತೀರಿ. ಪ್ರತ್ಯಕ್ಷವಾಗಲೀ ಪರೋಕ್ಷವಾಗಲೀ ವಂಚನೆಯನ್ನು ಮಾಡಲು ಬಯಸುವುದಿಲ್ಲ.
ಮಿಥುನ: ಉತ್ತಮ ಆತ್ಮಬಲವನ್ನು ಹೊಂದಿರುವ ನೀವು ನಿರ್ದಿಷ್ಟ ಸಂಕಲ್ಪವನ್ನು ಸ್ವಪ್ರಯತ್ನದಿಂದ ಪೂರ್ಣಗೊಳಿಸುವಿರಿ. ದಾಕ್ಷಿಣ್ಯ, ಸಂಕೋಚ ಪ್ರವೃತ್ತಿಯನ್ನು ಸ್ವಲ್ಪ ದೂರ ಮಾಡಿಕೊಳ್ಳಿರಿ. ಶುಭವಿರುತ್ತದೆ.
ಕರ್ಕ: ವೈಯಕ್ತಿಕವಾಗಿ ಕಷ್ಟನಷ್ಟಗಳನ್ನು ಲೆಕ್ಕಿಸದೆ ಪರೋಪಕಾರವನ್ನು ಮಾಡುವ ನಿಮ್ಮ ಮನಸ್ಸು ಸದಾ ಪರರಿಗಾಗಿ ಮಿಡಿಯುವುದು. ವೈಮನಸ್ಸನ್ನು ಪರಿಹರಿಸುವ ಪ್ರವೃತ್ತಿ ನಿಮ್ಮನ್ನು ಮುನ್ನಡೆಸಲಿದೆ.
ಸಿಂಹ: ಸೂಕ್ಷ್ಮಗ್ರಾಹಿಗಳೂ ಮತ್ತು ಪ್ರೀತಿ ಪುರಸ್ಸರವಾದ ನಡವಳಿಕೆಯನ್ನು ಜೀವನದಲ್ಲಿ ಹೊಂದಿರುತ್ತೀರಿ. ಎಂತಹ ಪರಿಸ್ಥಿತಿಯಲ್ಲೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಕಿರು ಸಂಚಾರ ಒದಗಿ ಬರುವುದು.
ಕನ್ಯಾ: ಗುರು ಕಾರುಣ್ಯದಿಂದ ನಿಮ್ಮೆಣಿಕೆಯ ಎಲ್ಲಾ ಕೆಲಸ ಕಾರ್ಯಗಳು ನೆರವೇರಲಿದೆ. ಧನವಿನಿಯೋಗದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುರಿ. ಗೃಹಕೃತ್ಯದಲ್ಲಿ ಖರ್ಚುವೆಚ್ಚ ಗಳನ್ನು ನಿಯಂತ್ರಿಸುವುದು.
ತುಲಾ: ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಹೊಂದಿಯಾರು. ಆದರೂ ಪ್ರಯತ್ನಬಲದಿಂದ ಅಧಿಕ ಲಾಭವನ್ನು ಹೊಂದುವಿರಿ. ವಿಳಂಬವಾದರೂ ಉತ್ತಮವಾಗಲಿದೆ. ಪತ್ನಿ, ಮಕ್ಕಳಿಂದ ಸಮಾಧಾನ ಸಿಗಲಿದೆ.
ವೃಶ್ಚಿಕ: ವೈವಾಹಿಕ ಜೀವನದಲ್ಲಿ ಅಸ್ತವ್ಯಸ್ತತೆ, ಭಿನ್ನಾಭಿಪ್ರಾಯಗಳಿಂದ ಕಲಹ ತಂದೀತು. ವೃತ್ತಿರಂಗದಲ್ಲಿ ಮೇಲಾಧಿಕಾರಿ ವರ್ಗದವರಿಂದ ಕಿರಿಕಿರಿಯು ಕಂಡು ಬರಲಿದೆ. ಪ್ರಯಾಣದಲ್ಲಿ ಅಡಚಣೆ ಕಂಡುಬರಬಹುದು.
ಧನು: ಅನಾರೋಗ್ಯದ ದಿನವಿದು. ಶೈಕ್ಷಣಿಕ ವೃತ್ತಿಯವರಿಗೆ ಆರ್ಥಿಕವಾಗಿ ತೊಂದರೆಗಳು ಕಂಡು ಬರಲಿವೆ. ಮಂಗಲ ಕಾರ್ಯಗಳ ಮಾತುಕತೆಗೆ ಅಡ್ಡಿ ಆತಂಕಗಳು ಎದುರಾದವು. ಸಹನೆಯ ಅಗತ್ಯವಿದೆ.
ಮಕರ: ಅನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿಯು ಕಂಡುಬರುವುದು. ವಿದ್ಯಾರ್ಥಿಗಳಿಗಂತೂ ವಿದ್ಯಾಭ್ಯಾಸದಲ್ಲಿ ಸ್ವಪ್ರಯತ್ನದಿಂದಲೇ ಮುಂದುವರಿಕೆ ಅನಿವಾರ್ಯವಾದೀತು. ರಾಜಕೀಯದವರಿಗೆ ವಿರೋಧಗಳಿವೆ.
ಕುಂಭ: ಹಲವು ಬಾರಿ ಅವಮಾನ, ಅಪವಾದ ಪ್ರಸಂಗಗಳು ಎದುರಾದರೂ ಅದನ್ನು ಧೈರ್ಯಗುಂದದೆ ಎದುರಿಸುವುದು. ಮುಖ್ಯವಾಗಿ ನಿಮ್ಮ ಪ್ರಯತ್ನಬಲ, ಆತ್ಮವಿಶ್ವಾಸ, ಚಾಣಾಕ್ಷತನ ನಿಮ್ಮನ್ನು ಕಾಪಾಡಲಿದೆ.
ಮೀನ: ನಿಮ್ಮ ಕೆಲಸಕಾರ್ಯಗಳಿಗೆ ಪೂರಕವಾದ ವಾತಾವರಣವು ಕಂಡುಬರುವುದು. ಕೌಟುಂಬಿಕವಾಗಿ ಬಂಧುಮಿತ್ರರೇ ಶತ್ರುಗಳಾದಾರು. ನೀವು ದೃಢ ಮನಸ್ಸಿಂದ ಮುನ್ನಡೆದರೆ ನಿಮ್ಮ ಕೆಲಸವಾಗಲಿದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ
Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
MUST WATCH
ಹೊಸ ಸೇರ್ಪಡೆ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ