ಹೈಕಮಾಂಡ್ಗೆ ಪತ್ರ ಕನ್ನಡದಲ್ಲಿ ಇರಬೇಕೇ? ಇಂಗ್ಲಿಷ್ನಲ್ಲಿರಬೇಕೇ?
Team Udayavani, Apr 12, 2023, 7:25 AM IST
ಇಂಥದ್ದೊಂದು ಜಿಜ್ಞಾಸೆ ಮಂಗಳವಾರ ರಾಜ್ಯದಲ್ಲಿ ಗುಲ್ಲಿಗೆ ಕಾರಣವಾಯಿತು. ತಮ್ಮ ಚುನಾವಣ ರಾಜಕೀಯ ನಿವೃತ್ತಿ ಘೋಷಿಸಿದ ಕೆ.ಎಸ್. ಈಶ್ವರಪ್ಪ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕನ್ನಡದಲ್ಲಿ ಪತ್ರ ಬರೆದು ಸೋಜಿಗಕ್ಕೆ ಕಾರಣವಾದರು. ಕನ್ನಡದಲ್ಲಿ ಬರೆದಿದ್ದುದರಿಂದಲೇ ಇದು ನಕಲಿ ಪತ್ರ ಎಂದು ಗುಲ್ಲೆದ್ದಿತ್ತು. ಆದರೆ ಅನಂತರ ಸ್ವತಃ ಈಶ್ವರಪ್ಪ ತಮ್ಮ ನಿವೃತ್ತಿಯನ್ನು ದೃಢೀಕರಿಸಿದರು. ಆದರೆ ಕನ್ನಡ ಬಾರದ ನಡ್ಡಾ ಅವರಿಗೆ ಕನ್ನಡದಲ್ಲಿ ಪತ್ರ ಬರೆದದ್ದು ಏಕೆ ಎಂದು ಕಡೆಗೂ ಗೊತ್ತಾಗಲಿಲ್ಲ. ಇದು ಅವರ ಕನ್ನಡ ಪ್ರೇಮ ಎಂದು ಅವರ ಅಭಿಮಾನಿಗಳು ಹೇಳಿಕೊಂಡು ಸಮಾಧಾನ ಮಾಡಿಕೊಂಡರು.
ಸಂಜೆಯ ಹೊತ್ತಿಗೆ ಇನ್ನೊಂದು ಪತ್ರ ಕನ್ನಡದಲ್ಲೇ ಬಂತು. ಅದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಪತ್ರ. ಈ ಬಗ್ಗೆ ಸ್ಪಷ್ಟನೆ ನೀಡಿದ ಶೆಟ್ಟರ್, “ಅದು ನಕಲಿ ಪತ್ರ. ನಾನು ರಾಜೀನಾಮೆ ನೀಡಿಲ್ಲ’ ಎಂದು ಹೇಳಿದರಲ್ಲದೆ, ದಿಲ್ಲಿ ವರಿಷ್ಠರಿಗೆ ರಾಜೀನಾಮೆ ಪತ್ರ ಬರೆಯುವುದಾದರೆ ಕನ್ನಡದಲ್ಲಿ ಬರೆಯುತ್ತಾರೆಯೇ? ಇಂಗ್ಲಿಷ್ನಲ್ಲಿ ತಾನೇ? ಹಾಗಾಗಿಯೇ ಮೇಲ್ನೋಟಕ್ಕೆ ತಿಳಿಯುತ್ತದೆ ಇದು ಸುಳ್ಳೆಂದು ಸ್ಪಷ್ಟಪಡಿಸಿದರು. ಹಾಗಿದ್ದರೆ ಭಾಷೆ ಮೇಲೆ ಪತ್ರ ನಕಲಿಯೋ ಅಸಲಿಯೋ ಎಂದು ತಿಳಿಯುವುದು ಕಷ್ಟ ಎಂದಾಯಿತು. ಹೈಕಮಾಂಡ್ಗೆ ಪತ್ರ ಕನ್ನಡದಲ್ಲಿ ಇರಬೇಕೇ? ಇಂಗ್ಲಿಷ್ನಲ್ಲಿರಬೇಕೇ- ಕಡೆಗೂ ತಿಳಿಯಲಿಲ್ಲ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್