ಸಿನೆಮಾ ಮಾಡಲಿದ್ದಾರೆ ಡಾ|ಆಳ್ವರು!
Team Udayavani, Nov 29, 2018, 1:03 PM IST
ಆಳ್ವಾಸ್ ನುಡಿಸಿರಿಯ ಮೂಲಕ ಕನ್ನಡ ನಾಡು-ನುಡಿಯ ವಿಚಾರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ|ಎಂ.ಮೋಹನ್ ಆಳ್ವರು ಸದ್ಯ ಎರಡು ಸಿನೆಮಾ ಮಾಡುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಸರಕಾರಿ ಶಾಲೆ ಎದುರಿಸುತ್ತಿರುವ ಇಂದಿನ ಸಮಸ್ಯೆಯ ಗಂಭೀರತೆ ಹಾಗೂ ಅದರಲ್ಲಿ ಆಗಬೇಕಾದ ಬದಲಾವಣೆಯ ಬಗ್ಗೆ ನೀತಿಪಾಠ ಹೇಳುವ ಕಥೆಯಾಧಾರಿತ ಒಂದು ಸಿನೆಮಾವಾದರೆ, ಇನ್ನೊಂದು ತುಳುನಾಡಿನ ಕೃಷಿ ಬದುಕನ್ನು ಕಟ್ಟಿಕೊಡುವ ನೆಲೆಯಲ್ಲಿ ಮೂಡಿಬರಲಿದೆ.
ತುಳುನಾಡಿನಲ್ಲಿ ಹೆಕ್ಟೇರ್ಗಟ್ಟಲೆ ಗದ್ದೆಯಲ್ಲಿ ಕೃಷಿ ಮಾಡುತ್ತ, ಮನೆ ಮಂದಿಯೆಲ್ಲ ಅದರಲ್ಲಿಯೇ ತೊಡಗಿಸಿಕೊಳ್ಳುವ ಕಾಲವಿತ್ತು. ಆದರೆ, ಈಗ ಅಂತಹ ಗದ್ದೆಯ ಭೂಮಿ ಬರಡಾಗಿದೆ. ಕೃಷಿಯಿಂದ ಬಹುತೇಕ ಜನ ವಿಮುಖರಾಗಿದ್ದಾರೆ. ಕೃಷಿಯ ಮನೆಯ ಸೌಂದರ್ಯ ಮೂಲೆ ಸೇರಿದೆ. ಗದ್ದೆ ತೊರೆದ ಮನೆಯ ಮಕ್ಕಳು ಸಿಟಿಗೆ ಸೇರಿ ಹೈಫೈ ಜೀವನ ನಡೆಸುವಂತಾಗಿದೆ. ಇಂತಹ ಕಥೆಯೊಂದನ್ನು ಇಟ್ಟುಕೊಂಡು ಹೊಸ ಸಿನೆಮಾ ಮಾಡಬೇಕು ಎಂಬುದು ಡಾ|ಆಳ್ವರ ಯೋಚನೆಯಂತೆ. ತುಳುವಿನಲ್ಲಿಯೂ ಈ ಸಿನೆಮಾ ಮೂಡಿಬರಬೇಕು ಎಂಬ ತುಡಿತ ಅವರಲ್ಲಿದೆ. ಸಣ್ಣ ಬಜೆಟ್ನಲ್ಲಿ ಮಾಡುವ ಈ ಸಿನೆಮಾದ ಬಗ್ಗೆ ಡಾ|ನಾಗತಿಹಳ್ಳಿ ಚಂದ್ರಶೇಖರ್, ಡಾ|ಭಾರತಿ ವಿಷ್ಣುವರ್ಧನ್ ಅವರ ಬಳಿಯಲ್ಲಿಯೂ ಮಾತನಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ