ಗಾಂಧಿನಗರಕ್ಕೆ ಹಾರಿದ ತುಳುವಿನ ಕುವರ!
Team Udayavani, Jun 28, 2018, 12:05 PM IST
ಕಾಮಿಡಿ ಪಾತ್ರಗಳ ಮೂಲಕ ಕರಾವಳಿಯಲ್ಲಿ ನಾಟಕ ಹಾಗೂ ಕಾಮಿಡಿ ಶೋ ಮೂಲಕ ಗುರುತಿಸಿಕೊಂಡ ಕಲಾವಿದ ತುಳು ಸಿನೆಮಾದಲ್ಲಿ ಅವಕಾಶ ಪಡೆದು, ಈಗ ಕನ್ನಡ ಸಿನೆಮಾದಲ್ಲೂ ಅವಕಾಶ ಪಡೆಯುವುದು ಸುಲಭದ ಮಾತಲ್ಲ. ತುಳುವಿನಲ್ಲಿ ಇತ್ತೀಚೆಗೆ ಬಂದ ಹಲವು ಸಿನೆಮಾದಲ್ಲಿ ಗಮನೀಯ ಪಾತ್ರ ಮಾಡುವ ಮೂಲಕ ಗಮನಸೆಳೆದ ಖ್ಯಾತ ನಟ ಮಂಜು ರೈ ಮೂಳೂರು ಸದ್ದಿಲ್ಲದೆ ಗಾಂಧಿನಗರದತ್ತಲೂ ಮುಖ ಮಾಡಿದ್ದಾರೆ.
ತುಳು ಸಿನೆಮಾದ ಮೂಲಕ ಕೋಸ್ಟಲ್ವುಡ್ನಲ್ಲಿ ಕಾಮಿಡಿ ಲುಕ್ನಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದ ಮಂಜು ಈಗ ಕನ್ನಡ ಸಿನೆಮಾದಲ್ಲೂ ಕಾಣುವ ಹುಮ್ಮಸ್ಸಿನಲ್ಲಿದ್ದಾರೆ. ಅಂದಹಾಗೆ, ತುಳುವಿನ ಬಹುನಿರೀಕ್ಷೆಯ ‘ಮೈ ನೇಮ್ ಈಸ್ ಅಣ್ಣಪ್ಪ’ ಸಿನೆಮಾದಲ್ಲಿ ವಿಭಿನ್ನ ಪಾತ್ರದ ಮೂಲಕ ಗಮನಸೆಳೆದ ಮಂಜು ಸಿನೆಮಾ ಲೋಕದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಲಿದ್ದಾರೆ. ಕೆಲವೇ ದಿನದಲ್ಲಿ ಈ ಸಿನೆಮಾ ರಿಲೀಸ್ ಆಗಲಿದೆ. ಇದರ ಜತೆಗೆ, ಮಂಜು ಈಗ ‘ರತ್ನ ಮಂಜರಿ’ ಎಂಬ ಕನ್ನಡ ಸಿನೆಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಯುಎಸ್ಎ ಮೂಲದ ತಂಡವೊಂದು ಮಾಡುವ ಈ ಸಿನೆಮಾದಲ್ಲಿ ಮಂಜು ಸಬ್ ಇನ್ಸ್ಪೆಕ್ಟರ್ ರೋಲ್ ಮೂಲಕ ಗಮನ ಸೆಳೆಯಲಿದ್ದಾರೆ. ಚಿತ್ರದ ಶೂಟಿಂಗ್ ಸದ್ಯ ನಡೆಯುತ್ತಿದೆ. ಮಂಜು ಈಗಾಗಲೇ ತುಳುವಿನಲ್ಲಿ ರಿಕ್ಷಾ ಡ್ರೈವರ್, ಮದಿಮೆ, ಎಕ್ಕ ಸಕ್ಕ, ಐಸ್ಕ್ರೀಮ್, ದಂಡ್, ಜುಗಾರಿ, ಪ್ರೀತಿಗ್ ಪುದರ್ ದೀಲೆ, ಅಂಬರ ಕ್ಯಾಟರರ್, ಪಿಲಿಬೈಲ್ ಯಮುನಕ್ಕ, ಕೋರಿ ರೊಟ್ಟಿ, ಕರ್ಣೆ, ಮೈ ನೇಮ್ ಈಸ್ ಅಣ್ಣಪ್ಪೆ ಸಿನೆಮಾದಲ್ಲಿ ಅಭಿನಯಿಸಿದ್ದಾರೆ. ಇದಾದ ಬಳಿಕ ‘ಕಳ್ವೆ ನಂ.1’ ಎಂಬ ತುಳು ಸಿನೆಮಾದಲ್ಲೂ ಮಂಜು ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ