50ನೆಯ ವರ್ಧಂತಿಯಲ್ಲೇ “ವಾರ್ನಿಂಗ್’ ಕಂಡಿದ್ದ ಶ್ರೀಗಳು
Team Udayavani, Dec 30, 2019, 6:00 AM IST
ಬೆಂಗಳೂರಿನ ಚಾಮರಾಜಪೇಟೆ ಕೋಟೆ ಹೈಸ್ಕೂಲಿನ ಮೈದಾನದಲ್ಲಿ 1981ರ ಮೇ 16, 17ರಂದು ನಡೆದ ಪೇಜಾವರ ಶ್ರೀಗಳ 50ನೆಯ ವರ್ಧಂತಿಯಲ್ಲಿ ರಾಜ್ಯಪಾಲ ಗೋವಿಂದ ನಾರಾಯಣ, ಮುಖ್ಯಮಂತ್ರಿ ವೀರೇಂದ್ರ ಪಾಟೀಲ್, ಗುಂಡೂರಾಯರು ಕಲಬುರಗಿಯ ಬರಗಾಲದಲ್ಲಿ ನಡೆಸಿದ ಸೇವೆಯನ್ನು ಸ್ಮರಿಸಿಕೊಂಡರು.
“ಧ್ವಜ ಬಟ್ಟೆಯ ತುಂಡಾದರೂ ಅದು ರಾಷ್ಟ್ರವನ್ನು ಪ್ರತಿನಿಧಿಸುತ್ತದೆ. ಅದಕ್ಕಾಗಿ ಧ್ವಜಕ್ಕೆ ಗೌರವ. ನಾವೂ ಪ್ರಾಚೀನ ಸಂಸ್ಕೃತಿಯನ್ನು ಪ್ರತಿನಿಧಿಸುವ ಧ್ವಜದಂತೆ. ನನ್ನ ಪರಿಚಯ ನಿಮಗೆಲ್ಲರಿಗಿಂತ ಚೆನ್ನಾಗಿ ನನಗಿದೆ. ನನ್ನ ನ್ಯೂನತೆ, ದೌರ್ಬಲ್ಯದ ಅರಿವು ಚೆನ್ನಾಗಿದೆ. ನಿಮ್ಮ ಪ್ರಶಂಸೆಗಳಿಂದ ನಾನೀಗ ಏನಾಗಿರುವೆ ಎನ್ನುವುದಕ್ಕಿಂತಲೂ ಏನಾಗಬೇಕಾಗಿದೆ ಎಂದು ಆಲೋಚಿಸುತ್ತೇನೆ.
ನಾವು ಮಾಡಬೇಕಾದ ಕರ್ತವ್ಯ ಬಹಳಷ್ಟಿವೆ. ಮಾಡಿರುವುದು ಸ್ವಲ್ಪ. ನಿಮಗೆ 50 ಆಗಿದೆ. ಬೇಗ ಬೇಗ ಕರ್ತವ್ಯ ಮಾಡಿ ಎಂದು ನೀವು ಕೊಟ್ಟ ವಾರ್ನಿಂಗ್ ಎಂದು ತಿಳಿಯುತ್ತೇನೆ” ಎಂದಿದ್ದರು. ಇಂತಹ ವಾರ್ನಿಂಗ್ಗಳನ್ನು ಅವರು ಬೇರೆ ಬೇರೆ ಸಂದರ್ಭಗಳಲ್ಲಿ ತನ್ನನ್ನು ಅಭಿನಂದಿಸಿದಾಗಲೆಲ್ಲ ಹೇಳುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು