Sandalwood: ಮಲೆನಾಡ ಕಥಾ ಹಂದರದ ‘ಜಲಪಾತ’ ಇಂದು ತೆರೆಗೆ
Team Udayavani, Oct 13, 2023, 10:34 AM IST
ಮಲೆನಾಡಿನ ನೆಲ, ಜಲ, ಜನ-ಜೀವನ ಮತ್ತು ಪರಿಸರ ಸಂರಕ್ಷಣೆಯ ಕಥಾಹಂದರ ಹೊಂದಿರುವ “ಜಲಪಾತ’ ಸಿನಿಮಾ ಈ ವಾರ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. ಈ ಹಿಂದೆ “ವೈಶಂಪಾಯನ ತೀರ’ ಸಿನಿಮಾವನ್ನು ನಿರ್ದೇಶಿಸಿದ್ದ ಬೇಗಾರ್ ರಮೇಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ.
“ಜಲಪಾತ’ ಸಿನಿಮಾದಲ್ಲಿ ರಜನೀಶ್ ನಾಯಕನಾಗಿದ್ದು, ನಾಗಶ್ರೀ ಬೇಗಾರ್ ನಾಯಕಿಯಾಗಿದ್ದಾರೆ. ಪ್ರಮೋದ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಬಹುತೇಕ ಮಲೆನಾಡಿದ ಕಲಾವಿದರು ಮತ್ತು ತಂತ್ರಜ್ಞರು ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.
“ಜಲಪಾತ’ ಸಿನಿಮಾದ ಗೀತೆಗಳಿಗೆ ಸಾದ್ವಿನಿ ಕೊಪ್ಪ ಸಂಗೀತ ಸಂಯೋಜಿಸಿದ್ದು, ವಿಜಯ್ ಪ್ರಕಾಶ್ ಮೊದಲಾದ ಗಾಯಕರು ಹಾಡಿಗೆ ಧ್ವನಿಯಾಗಿದ್ದಾರೆ. “ಇಂಡಸ್ ಹರ್ಬ್ಸ್ ನ ಟಿ. ಸಿ. ರವೀಂದ್ರ ತುಂಬರಮನೆ, ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಈ ವಾರ “ಜಲಪಾತ’ ಸಿನಿಮಾವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.
ಇದರ ಜೊತೆಗೆ ಕುದ್ರು ಎಂಬ ಚಿತ್ರ ಕೂಡಾ ತೆರೆ ಕಾಣುತ್ತಿದೆ.