ಎರಡು ಝೆನ್‌ ಕತೆಗಳು


Team Udayavani, Jul 1, 2018, 6:00 AM IST

10.jpg

ಅಮರಾವತಿಯೆಂಬ ಹಳ್ಳಿಯೊಂದು ಗಿರಿತಪ್ಪಲಿನಲ್ಲಿ ನಿಸರ್ಗದ ನಿಸ್ವನದೊಂದಿಗೆ ಐಕ್ಯವಾದಂತೆ ಶಾಂತವಾಗಿ ಹರಡಿಕೊಂಡಿತ್ತು. ಜನ ಮಾತನಾಡಿಕೊಳ್ಳುತ್ತಿರಲಿಲ್ಲ ಎಂದೇನೂ ಅಲ್ಲ. ಆದರೆ, ಮಾತು ಮುತ್ತಿನ ಸರದಂತೆ ಮೌನದ ದಾರದಲ್ಲಿ ಪೋಣಿಸಲ್ಪಟ್ಟಿತ್ತು. ಹಳ್ಳಿಯಲ್ಲಿ ಇಂಥ ಶಾಂತತೆ ಮೂಡಲು ಕಾರಣವಾಗಿದ್ದುದು ಒಂದು ಆಶ್ರಮ. ಆ ಆಶ್ರಮದ ಅಂಗಳದಲ್ಲಿ ತರಗೆಲೆ ಅಲುಗಿದರೂ ಆಲಿಸಬಹುದಾಗಿರುವಂಥ ಸ್ಥಿತಿ. ಹಾಗೆಂದು, ಆಶ್ರಮದಲ್ಲಿ ಯಾರೂ ಇರಲಿಲ್ಲವೆಂದಲ್ಲ. ಪಾಠಪ್ರವಚನಗಳು ನಡೆಯುತ್ತಿರಲಿಲ್ಲವೆಂದಲ್ಲ.

ಮಾಣಿಕ್ಯನೆಂಬ ಸಂತನೊಬ್ಬ ಅಲ್ಲಿದ್ದ. ಅವನಿಗೊಂದಿಷ್ಟು ಮಂದಿ ಶಿಷ್ಯರಿದ್ದರು. ಪ್ರತಿಯೊಬ್ಬ ಶಿಷ್ಯನೂ ಪ್ರಕಾಂಡ ಪಂಡಿತ. ಅವರಿಗೆ ಗುರು ಮೌನವಾಗಿ ಹೇಗೆ ಕಲಿಸಿದ, ಶಿಷ್ಯರು ನಿಶ್ಶಬ್ದವಾಗಿ ಹೇಗೆ ಕಲಿತರು ಎಂಬ ಬೆರಗು ಇಡೀ ಅಮರಾವತಿ ಹಳ್ಳಿಯನ್ನು ಆವರಿಸಿ, ಅಲ್ಲಿನವರ ನಡೆ-ನುಡಿಯಲ್ಲಿ ಅನೂಹ್ಯ ಗಾಂಭೀರ್ಯ ನೆಲೆಸಿಬಿಟ್ಟಿತ್ತು.

ಒಬ್ಬ ಸಂತನಿಂದಾಗಿ ಒಂದು ಹಳ್ಳಿಯೇ ಬದಲಾಗುತ್ತದೆ ಎಂಬುದು ಗಿರಿತಪ್ಪಲಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರಚಾರವಾಗಿ ಅವರೆಲ್ಲ ಮಾಣಿಕ್ಯ ಮುನಿಯನ್ನು ನೋಡಲು ಅಮರಾವತಿಗೆ ಆಗಮಿಸುತ್ತಿದ್ದರು. “ಆಹಾ! ಮೌನದ ಮಂದಿರ’ ಎಂದು ಆಶ್ರಮವನ್ನು ಕೊಂಡಾಡುತ್ತಿದ್ದರು.

ಮಾಣಿಕ್ಯನು ಮರಣಿಸಿದ ದಿನ ಇಡೀ ಆಶ್ರಮ ಮಂತ್ರಘೋಷಗಳಿಂದ ಗಂಟೆಗಳ ಮೊಳಗಿನಿಂದ ವೇದಗಳ ಪಠಣದಿಂದ ತುಂಬಿಹೋಯಿತು. ಹಳ್ಳಿಯ ಬೀದಿಗಳಲ್ಲಿ ಶಬ್ದಗಳ ಮೆರವಣಿಗೆ ಸಾಗತೊಡಗಿತು. ಈಗಲೂ ಅಲ್ಲಿನ ಹಿರಿಯರು ಅದನ್ನು ನೆನಪಿಸಿಕೊಳ್ಳುವುದು ಹೀಗೆ: ಅದು ಮೌನವೇ ಮೌನವಾದ ದಿನ!

2
ಗುರು ಹಕು-ಯಿಕೊ ತನ್ನ ಆಶ್ರಮಕ್ಕೆ ಮರಳಿಬಂದಾಗ ಅಮಾವಾಸ್ಯೆಯ ಕತ್ತಲು ಇಹಲೋಕವನ್ನಿಡೀ ಆವರಿಸಿದಂತಿತ್ತು. ಆಶ್ರಮದ ಒಳಗೊಂದು ಮಿಣುಕುದೀಪ ಉರಿಯುತ್ತಿತ್ತು. ದೀಪದ ಬುಡದಲ್ಲಿಯೇ ಶಿಷ್ಯ ವಮೋಶಿ ಧೇನಿಸುತ್ತ ಕುಳಿತಿದ್ದ. ಗುರು ಅವನನ್ನು ಹೊರಗಿನಿಂದಲೇ ದಿಟ್ಟಿಸಿ ನೋಡಿ ಗವಾಕ್ಷಿಯ ಬಳಿ ಮುಖವಿಟ್ಟು “ಶೂ ಶೂ’ ಎಂದು ಕರೆದ.

ವಮೋಶಿ ಒಮ್ಮೆ ತಲೆ ಎತ್ತಿ ಕುಳಿತಲ್ಲಿಂದಲೇ ಯಾರು ಎಂದು ಕೇಳಿದ.
“”ಯಾರೆಂದು ಗೊತ್ತಾಗಲಿಲ್ಲವೆ?” ಗುರು ಸ್ವರ ಬದಲಿಸಿದ.
“”ಇಲ್ಲ…” ಎಂದ ವಮೋಶಿ.
“”ಮತ್ತೆ ನಿನ್ನ ಬಳಿ ದೀಪವಿದೆಯಲ್ಲವೆ?”
“”ನನ್ನ ಬಳಿ ದೀಪವಿದ್ದರೆ ನೀನು ಹೇಗೆ ಕಾಣಿಸುತ್ತಿ?”
“”ದೀಪವನ್ನೊಮ್ಮೆ ಕಿಟಕಿಯ ದಂಡೆಯ ಮೇಲಿಟ್ಟು ಕತ್ತಲಲ್ಲಿ ನಿಲ್ಲು. ಆಗ ನಾನು ಯಾರೆಂದು ತೋರಬಹುದು”
ವಮೋಶಿ ಹಾಗೆಯೇ ಮಾಡಿದ. ಕಿಟಕಿಯ ಆಚೆಗೆ ನಿಂತಿದ್ದ ಗುರುವಿನ ಗುರುತು ಹಿಡಿದವನೇ ವಮೋಶಿ, “”ಹೋ, ನೀವಾ ಗುರುಗಳೆ…” ಎಂದು ನಕ್ಕ.
“”ಒಳಗೆ ಎಷ್ಟು ಬೆಳಗಿದರೇನು ಫ‌ಲ, ಹೊರಗಿನದ್ದನ್ನು ಬೆಳಗಿಸದ ಹೊರತಾಗಿ” ಎಂದು ಗೊಣಗುತ್ತ ಒಳಬಂದವನೇ ಹಕು-ಯಿಕೊ ಬಗಲ ಚೀಲವನ್ನು ಬದಿಗಿಟ್ಟು ಮತ್ತೆ ಹೊರನಡೆದ. ವಮೋಶಿ ಅವನನ್ನು ಅನುಸರಿಸಿದ. ಹಕು-ಯಿಕೊ ವಿಹಾರದ ಬಾಗಿಲು ದೂಡಿ ಒಳಬಂದು ಬುದ್ಧನ ಮೂರ್ತಿಯ ತಳದಲ್ಲೊಂದು ದೀಪ ಉರಿಸಿ ಬಿಂಬವನ್ನು ನೋಡುತ್ತ ಕುಳಿತ.

“”ನಿನಗೆ ನಾನು ಕಾಣಿಸುವುದಿಲ್ಲ. ನನಗೆ ನೀನೂ ಕಾಣಿಸುತ್ತಿಲ್ಲ. ಆದರೆ, ಅವನು ನಮ್ಮ ಕಣ್ಣುಗಳಲ್ಲಿ ಬೆಳಗುತ್ತಿದ್ದಾನೆ” ಎಂದು ಗುರು ಗೊಯಿಂಕಾ ಉದ್ಗರಿಸಿದಾಗ ವಮೋಶಿ ಅದೇನೋ ಅರ್ಥವಾಗಿ ತಲೆಯಾಡಿಸಿದ.

ಟಾಪ್ ನ್ಯೂಸ್

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

ಇಂದು ರಾತ್ರಿಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತ

ಇಂದು ರಾತ್ರಿಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತ

ಸಿಹಿತಿಂಡಿ ನೀಡದ್ದಕ್ಕೆ ಮದುವೆಯೇ ರದ್ದು!

Madikeri ಸಿಹಿತಿಂಡಿ ನೀಡದ್ದಕ್ಕೆ ಮದುವೆಯೇ ರದ್ದು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.