ಸ್ತ್ರೀಯರಿಗೂ ಮಂತ್ರದೀಕ್ಷೆ


Team Udayavani, Dec 30, 2019, 6:03 AM IST

striyarigu

ಪೇಜಾವರ ಶ್ರೀಗಳು ಉಮಾಭಾರತಿಯವರಿಗೆ ಸನ್ಯಾಸದೀಕ್ಷೆ ಕೊಟ್ಟದ್ದು ಮಾತ್ರವಲ್ಲ ಅದಕ್ಕೂ ಹಿಂದೆ ವಾರಿಜಾಕ್ಷಿ ಎಂಬ ಉಡುಪಿ ಮೂಲದ ಮಹಿಳೆಗೆ ದೀಕ್ಷೆ ನೀಡಿ ಸುಭದ್ರಾಮಾತಾ ಎಂದು ನಾಮಕರಣಗೊಳಿಸಿದ್ದರು. ಉಮಾಭಾರತಿಯವರು ಹಿಂದುಳಿದ ವರ್ಗಕ್ಕೆ ಸೇರಿದವರು, ಮಧ್ಯ ಭಾರತದವರು. ಪ್ರತಿ ವರ್ಷ ಗುರುಪೂರ್ಣಿಮೆ ದಿನ ಪೇಜಾವರ ಶ್ರೀಗಳು ಎಲ್ಲಿದ್ದಾರೋ ಅಲ್ಲಿಗೆ ಬಂದು ಗೌರವ ಸಮರ್ಪಿಸುತ್ತಿದ್ದರು.

ಪೇಜಾವರ ಶ್ರೀಗಳ ಐದನೆಯ ಪರ್ಯಾಯೋತ್ಸವದಲ್ಲಿ ಪಾಲ್ಗೊಂಡ ಉಮಾಭಾರತಿಯವರು ಬಳಿಕ ಅವರು ಅನಾರೋಗ್ಯಕ್ಕೆ ಈಡಾದಾಗಲೂ ಆಗಮಿಸಿದ್ದರು. ಒಮ್ಮೆ ಶ್ರೀಕೃಷ್ಣಜನ್ಮಾಷ್ಟಮಿಯ ಸಂದರ್ಭ ಆಗಮಿಸಿ ಕೃಷ್ಣಾಘ ಪ್ರದಾನ ಮಾಡಿದ್ದರು. ದಿಲ್ಲಿಯಲ್ಲಿ ಕಾರ್ಯಕ್ರಮ ನಿಗದಿಪಡಿಸಿ ಅಲ್ಲಿ ಸ್ವಾಮೀಜಿಯವರನ್ನು ಗೌರವಿಸಿದ್ದೂ ಇದೆ. ಸ್ತ್ರೀಯರಿಗೆ ಸನ್ಯಾದೀಕ್ಷೆ ಕೊಟ್ಟ ಕುರಿತು ಅನೇಕರು ಪ್ರಶ್ನಿಸಿದಾಗ “ಸ್ತ್ರೀಯರೂ ಸನ್ಯಾಸಿಗಳಾದ ಕುರಿತು ಅನೇಕ ಉದಾಹರಣೆಗಳು ಮಹಾಭಾರತದಲ್ಲಿ ಇವೆ.

ನಾನು ಇದನ್ನೆಲ್ಲ ಪರಿಶೀಲಿಸಿ ಶಾಸ್ತ್ರ ಸಂಪ್ರದಾಯಗಳಿಗೆ ಸಮ್ಮತವಾಗುವ ರೀತಿಯಲ್ಲಿ ದೀಕ್ಷೆ ನೀಡಿದ್ದೇವೆ’ ಎಂದು ಪೇಜಾವರ ಶ್ರೀಗಳು ಸ್ಪಷ್ಟಪಡಿಸಿದ್ದರು. ಮಧ್ಯಪ್ರದೇಶದ ತಿಕಮ್‌ಗಢ ಜಿಲ್ಲೆಯ ದುಂಡ ಮೂಲದ ಉಮಾಭಾರತಿಯವರು 1959ರಲ್ಲಿ ಜನಿಸಿದರು. 1992ರಲ್ಲಿ ಅಯೋಧ್ಯಾ ಕಾರ್‌ಸೇವೆ ಸಂದರ್ಭ ಉಮಾಭಾರತಿಯವರಿಗೆ ಪೇಜಾವರ ಶ್ರೀಗಳ ಪರಿಚಯವಾಯಿತು. ಆ ಪರಿಣಾಮ 1992ರಲ್ಲಿಯೇ ಅವರು ಸನ್ಯಾಸದೀಕ್ಷೆಯನ್ನು ಪಡೆದರು. ಬಳಿಕ ಇವರ ಹೆಸರು ಉಮಾಶ್ರೀಭಾರತಿ ಎಂದಾಯಿತು.

ಉಮಾಭಾರತಿಗೆ ಮುನ್ನ: ಪೇಜಾವರ ಶ್ರೀಪಾದರು ಉಮಾಭಾರತಿಗೆ ಸನ್ಯಾಸದೀಕ್ಷೆ ನೀಡು ವುದಕ್ಕೂ ಮುನ್ನವೇ 1970ರ ವೇಳೆಗೆ ವಾರಿಜಾಕ್ಷಿ ಎಂಬವರಿಗೆ ದೀಕ್ಷೆ ನೀಡಿದ್ದರು. ಭಕ್ತಿ ದೀಕ್ಷೆ ಕೊಟ್ಟು ಇರಿಸಿದ ಹೆಸರು ಸುಭದ್ರಾ. ಇವರು ಉತ್ತರ ಭಾರತದಲ್ಲಿ ಸುಭದ್ರಾ ಮಾತಾ ಎಂದೇ ಹೆಸರುವಾಸಿ. ಉತ್ತರ ಭಾರತದ ಗಂಗೋತ್ರಿಯಿಂದ ಗೋಮುಖಕ್ಕೆ 19 ಕಿ.ಮೀ. ದೂರ ಇದೆ.

ಗೋಮುಖದಿಂದ ಸುಮಾರು 2,000 ಅಡಿ, ಸಮುದ್ರಮಟ್ಟದಿಂದ 14,640 ಅಡಿ ಎತ್ತರದಲ್ಲಿರುವ ತಪೋವನದ ಗುಹೆಗೆ ಪ್ರವಾಸಿಗರು ಹೋಗುವುದು ಕೆಲವೇ ತಿಂಗಳು. ಜುಲೈನಿಂದ ಆಗಸ್ಟ್‌, ಸೆಪ್ಟೆಂಬರ್‌ವರೆಗೆ ಹಿಮ ಕರಗಿ ನೆಲ ತೋರುತ್ತದೆ. ಅದು ಬಿಟ್ಟರೆ ಸದಾ ಹಿಮಪಾತ. ಈ ತಪೋವನದ ಗುಹೆಯಲ್ಲಿ 9 ವರ್ಷ ಇದ್ದು ತಪಸ್ಸು ಮಾಡಿದ ಸಾಧಕಿ ಸುಭದ್ರಾ ಅವರು ತಪೋವನಿ ಮಾತಾ ಎಂದೇ ಪ್ರಸಿದ್ಧರಾದರು. ಇವರಿಗೂ ಈಗ ಹೆಚ್ಚು ಕಡಿಮೆ 90 ವರ್ಷ ವಯಸ್ಸು.

ಆತ್ಮ-ತಪೋಬಲ: ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಮಿತಾಹಾರಿಯಾಗಿದ್ದವರು, ಕೆಲವೇ ಗಳಿಗೆಗಳ ನಿದ್ದೆ, ಕಿರಿದಾದ ಶರೀರ. ಆದರೆ ಕಾರ್ಯಚಟುವಟಿಕೆಗಳದು ಭೌಮವ್ಯಾಪ್ತಿ. ಇದಕ್ಕೆ ಮನೋಬಲ, ಸಂಕಲ್ಪ ಮತ್ತು ಶ್ರದ್ಧೆಗಳೇ ಕಾರಣವಾಗಿದ್ದವು ಎಂದರೆ ಅತಿಶಯೋಕ್ತಿ ಆಗದು. ಪ್ರಾಯಃ ಆತ್ಮಬಲ ಮತ್ತು ತಪೋಬಲ ಎನ್ನುವುದೇ ಶ್ರೀಗಳ ಕೆಲಸ ಕಾರ್ಯಗಳನ್ನು ವ್ಯಾಖ್ಯಾನಿಸಲು ಸೂಕ್ತವಾದ ಪದಗಳು.

ಪೇಜಾವರ ಪ್ರಭೆಪೇಜಾವರ ಶ್ರೀಗಳ ಸಾಧನೆಗಳು ನೂರಾರು. ಕೆಲವು ಪ್ರಮುಖ ಘಟನೆಗಳನ್ನು ಸಂಕ್ಷಿಪ್ತವಾಗಿ ಗಮನಿಸೋಣ.
4 8 1978: ಬದರಿಯಲ್ಲಿ ಯಾತ್ರಿಕರ ಸೌಕರ್ಯಕ್ಕಾಗಿ ಅನಂತಮಠ ವಸತಿ ಗೃಹದ ಉದ್ಘಾಟನೆ. ಇದೀಗ ಬದಲಿಯಲ್ಲಿ, ಊಟದ ವ್ಯವಸ್ಥೆ ಇರುವ ಅತ್ಯಂತ ಸುಸಜ್ಜಿತವಾದ ವಸತಿಗೃಹಗಳಲ್ಲೊಂದು.

1 5 1981: ಪೂರ್ಣಪ್ರಜ್ಞ ವಿದ್ಯಾಪೀಠದ ಸಂಭ್ರಮದ ರಜತೋತ್ಸವ. ಇದೀಗ ಪೂರ್ಣಪ್ರಜ್ಞ ವಿದ್ಯಾಪೀಠ ವೇದಾಂತ ಶಿಕ್ಷಣದ ರಂಗದಲ್ಲಿ ದೇಶದಲ್ಲೇ ಅಗ್ರಮಾನ್ಯ ಸಂಸ್ಥೆಯಾಗಿ ಬೆಳೆದುನಿಂತಿದೆ.

26 1 1982: ಅಖೀಲ ಭಾರತ ಮಾಧ್ವ ಮಹಾಮಂಡಲದ ವತಿಯಿಂದ, ಕರ್ಜಗಿ ಯಲ್ಲೊಂದು ವೃದ್ಧಾಶ್ರಮ-“ವಾನಪ್ರಸ್ಥಾಶ್ರಮ’ದ ಉದ್ಘಾಟನೆ.

1984 1986: ಜನವರಿ 18ರಿಂದ 1986 ಜನವರಿ 17ರ ತನಕ ಅದ್ದೂರಿಯ ಮೂರನೆಯ ಪರ್ಯಾಯ.

13 1 1985: ನಾಲ್ಕು ದಿನಗಳ ಕಾಲ ಉಡುಪಿಯಲ್ಲಿ ಶ್ರೀಕೃಷ್ಣ ಪ್ರತಿಷ್ಠಾ ಸಪ್ತಮ ಶತಮಾನೋತ್ಸವ.

7 12 1985: ಉಡುಪಿಯಲ್ಲಿ ಶ್ರೀಕೃಷ್ಣ ಸನ್ನಿಧಿಯಲ್ಲಿ ರಾಜಾಂಗಣದ ಪಕ್ಕದಲ್ಲಿ, ಯಾತ್ರಿಕರ ಸೌಕರ್ಯಕ್ಕಾಗಿ ವಸತಿಗೃಹ ಶ್ರೀಕೃಷ್ಣಧಾಮದ ಉದ್ಘಾಟನೆ.

1986: ಬಾಗಲಕೋಟೆಯ ಕುರುವಿನಕೊಪ್ಪದಲ್ಲಿ ಗೋಶಾಲೆ ಸ್ಥಾಪನೆ.

18 12 1988: ಬೆಂಗಳೂರಿನಲ್ಲಿ ಶ್ರೀಪಾದರ ಪೀಠಾರೋಹಣದ ಸುವರ್ಣ ಮಹೋತ್ಸವದ ಸಂಭ್ರಮ.

1989: ಬೆಂಗಳೂರಿನಲ್ಲಿ 750ನೆಯ ಮಧ್ವ ಜಯಂತೀ ಮಹೋತ್ಸವ.

27 10 1990: ಉತ್ತರಪ್ರದೇಶದ ಸರಹದ್ದಿನಲ್ಲಿ ಶ್ರೀರಾಮಜನ್ಮಭೂಮಿ ವಿಮುಕ್ತಿಗಾಗಿ ನಡೆದ ಆಂದೋಲನದಲ್ಲಿ ಭಾಗವಹಿಸಲೆಂದು ತೆರಳಿದ ಶ್ರೀಪಾದರಿಗೆ ಗೃಹಬಂಧನ. ಗೃಹಬಂಧನದಲ್ಲೂ ಸಾವಿರಾರು ಭಕ್ತರ ದರ್ಶನ. ಶ್ರೀಪಾದರ ಜನಪ್ರಿಯತೆಗೆ ಕಂಗಾಲಾದ ಸರಕಾರದಿಂದ ಬಿಡುಗಡೆಯ ಆದೇಶ. ಪೊಲೀಸರಿಂದ ಕ್ಷಮಾಯಾಚನೆ.

ಉಡುಪಿಯಲ್ಲಿ ಮಹಿಳೆಯರು ಮತ್ತಿತರರಿಗೆ ಸನ್ಯಾಸದೀಕ್ಷೆ ಕೊಡುತ್ತಿರಲಿಲ್ಲ. ಆದರೆ ಪೇಜಾವರ ಸ್ವಾಮೀಜಿಯವರು ಬೇರೆಯವರ ವಿರೋಧ ಎದುರಿಸಿಯೂ ನನಗೆ ದೀಕ್ಷೆ ಕೊಟ್ಟರು. ಸನ್ಯಾಸಕ್ಕೆ ಜಾತಿ ಲಿಂಗಗಳ ಭೇದ ಎಣಿಸಬಾರದು ಎಂಬ ದಿಟ್ಟ ನಿಲುವು ಅವರದು.
-ಉಮಾಭಾರತಿ,(ಉದಯವಾಣಿ, ಜನವರಿ 4, 1999)

ಸಮಾಜವಾದ, ಗಾಂಧೀವಾದ, ಹಿಂದುತ್ವವಾದ- ಇವು ಮೂರು ನಮ್ಮ ಮೇಲೆ ಪ್ರಭಾವ ಬೀರಿದ ಅಂಶಗಳು.
-ಶ್ರೀ ವಿಶ್ವೇಶ ತೀರ್ಥರು

ಟಾಪ್ ನ್ಯೂಸ್

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ve-46

ರಾಜಕಾರಣ- ಭ್ರಷ್ಟಾಚಾರ- ಸ್ವರ್ಗ- ಪರಿಸರ- ಪುಣ್ಯ…

ve-44

ರಥಬೀದಿ, ಪೇಜಾವರ ಮಠದಲ್ಲಿ ನೀರವ ಮೌನ

ve-47

ರಾಮ-ವಿಠಲ, ಶ್ರೀಕೃಷ್ಣ, ರಾಮಲಲ್ಲಾ…

bg-68

ಪೇಜಾವರ ಶ್ರೀ ಬದುಕಿನ ಸಾರ

kolar-tdy-1

ದಲಿತ ಕೇರಿಗೆ ಭೇಟಿ ನೀಡಿದ್ದ ಪೇಜಾವರ ಶ್ರೀ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.