2 ವರ್ಷಗಳಲ್ಲೇ ಪ್ರತ್ಯಕ್ಷವಾಗಲಿದ್ದಾನೆ “ರಸ್ತೆಗಳ ರಾಜ’ : ಅಂಬಾಸಿಡರ್‌ 2.0


Team Udayavani, May 27, 2022, 9:10 AM IST

thumb 5

ಒಂದು ಕಾಲದಲ್ಲಿ ಭಾರತದ “ರಸ್ತೆಗಳ ರಾಜ’ನಾಗಿ ಮೆರೆದು, ನಂತರ ಇತಿಹಾಸದ  ಪುಟ ಸೇರಿದ್ದ ಅಂಬಾಸಿಡರ್‌ ಕಾರುಗಳು ಮತ್ತೆ ರಸ್ತೆಗಿಳಿದರೆ ಹೇಗಿರುತ್ತೆ? ರಾಜಕಾರಣಿ ಗಳು, ಸರ್ಕಾರಿ ಅಧಿಕಾರಿಗಳಿಂದ ಹಿಡಿದು ಸೆಲೆಬ್ರಿಟಿಗಳವರೆಗೂ 1960ರಿಂದ 90ರ ದಶಕದವರೆಗೂ ಭಾರತದ “ಸ್ಟೇಟಸ್‌ ಸಿಂಬಲ್‌’ ಆಗಿದ್ದ ಅಂಬಾಸಿಡರ್‌ ಕಾರುಗಳು ಇನ್ನೆರಡು ವರ್ಷಗಳಲ್ಲೇ ಹೊಸ ಅವತಾರದಲ್ಲಿ ಮತ್ತೆ ರಸ್ತೆಗಿಳಿಯಲಿವೆ.

ಹೊಸದಿಲ್ಲಿ: ಕೆಲವು ದಶಕಗಳ ಹಿಂದೆ ದೇಶದ ಕಾರು ಮಾರು ಕಟ್ಟೆಯನ್ನು ಆಳಿ ಈಗ ಮರೆಗೆ ಸರಿದಿರುವ ಅಂಬಾಸಡರ್‌ ಕಾರು ಮತ್ತೆ ಹೊಸ ಅವತಾರದೊಂದಿಗೆ ಪ್ರತ್ಯಕ್ಷವಾಗಲಿದೆಯೇ?

ಹೌದು.  ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಎರಡು ವರ್ಷಗಳಲ್ಲಿ ಇದು ನಿಜವಾಗಲಿದೆ. ಹಿಂಡ್‌ ಮೋಟಾರ್‌ ಫೈನಾನ್ಶಿಯಲ್‌ ಕಾರ್ಪೊರೇಶನ್‌ ಆಫ್ ಇಂಡಿಯಾ (ಎಚ್‌ಎಂಎಫ್ಸಿಐ) ಮತ್ತು ಫ್ರೆಂಚ್‌ ಕಾರು ಕಂಪೆನಿ ಪಝೋಟ್‌ “ಆ್ಯಂಬಿ’ಯ ಹೊಸ ನೂತನ ವಿನ್ಯಾಸ ಮತ್ತು ಎಂಜಿನ್‌ಗಾಗಿ ಸಹಯೋಗ ಸ್ಥಾಪಿಸಿಕೊಂಡಿದ್ದು, ಹೊಸ ಅವತಾರದಲ್ಲಿ ಅನಾವರಣಗೊಳಿಸಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದನ್ನು ಹಿಂದೂಸ್ತಾನ್‌ ಮೋಟಾರ್ನ ಚೆನ್ನೈ ಘಟಕದಲ್ಲಿ ಉತ್ಪಾದಿಸಲಾಗುತ್ತದೆ ಎಂದು ವರದಿಯಾಗಿದೆ.

ವಿನ್ಯಾಸ, ಎಂಜಿನ್‌ ನಿರ್ಮಾಣ :

ಹಿಂಡ್‌ ಮೋಟಾರ್‌ ಫಿನಾನ್ಶಿಯಲ್‌ ಕಾರ್ಪೊರೇಷನ್‌ ಆಫ್ ಇಂಡಿಯಾ ಮತ್ತು ಫ್ರಾನ್ಸ್‌ನ ಕಾರು ತಯಾರಕ ಕಂಪನಿ ಪ್ಯೂಗಟ್‌ ಜಂಟಿಯಾಗಿ “ಆ್ಯಂಬಿ’ ಕಾರುಗಳ ವಿನ್ಯಾಸ ಮತ್ತು ಎಂಜಿನ್‌ ನಿರ್ಮಾಣದಲ್ಲಿ ತೊಡಗಿವೆ. ಸಿಕೆ ಬಿರ್ಲಾ ಸಮೂಹದ ಅಂಗಸಂಸ್ಥೆಯಾದ ಹಿಂದುಸ್ತಾನ್‌ ಮೋಟಾರ್ಸ್‌ ನ ಚೆನ್ನೈ ಘಟಕದಲ್ಲಿ ಹೊಸ ಮಾದರಿಯ ನಿರ್ಮಾಣ ಕಾರ್ಯ ನಡೆಯ ಲಿದೆ. ಈ ಘಟಕವು ಈ ಹಿಂದೆ ಮಿಟ್ಸುಬಿಶಿ ಕಾರುಗಳನ್ನು ತಯಾರಿಸಿತ್ತು.

ಉತ್ಪಾದನೆ ನಿಂತಿದ್ದೇಕೆ? :

ದೇಶದ ಅತ್ಯಂತ ಹಳೆಯ ಕಾರು ತಯಾರಕ ಕಂಪನಿ ಹಿಂದುಸ್ತಾನ್‌ ಮೋಟಾರ್ಸ್‌ 2014ರಲ್ಲಿ ಅಂಬಾಸಿಡರ್‌ ತಯಾರಿಕೆಯನ್ನು ಸ್ಥಗಿತಗೊಳಿ ಸಿತ್ತು. ಭಾರೀ ಪ್ರಮಾಣದ ಸಾಲ ಹಾಗೂ ಬೇಡಿಕೆಯ ಕೊರತೆಯಿಂದಾಗಿ

ಈ ನಿರ್ಧಾರ ಕೈಗೊಂಡಿತ್ತು. ತಂತ್ರಜ್ಞಾನ ಹಾಗೂ ಆರಾಮದಾಯಕತೆಯಲ್ಲಿ ಬೇರೆ ಕಾರುಗಳೊಂದಿಗೆ ಪೈಪೋಟಿ ನೀಡಲು ಸಾಧ್ಯವಾಗದ ಕಾರಣ ಅಂಬಾಸಿಡರ್‌ ಇತಿಹಾಸದ ಪುಟ ಸೇರಿತ್ತು. 2017ರಲ್ಲಿ ಈ ಕಂಪನಿಯ ಮಾಲೀಕ ಸಿಕೆ ಬಿರ್ಲಾ ಗ್ರೂಪ್‌, ಈ ಕಾರಿನ ಬ್ರ್ಯಾಂಡ್‌ ಅನ್ನು ಫ್ರಾನ್ಸ್‌ನ ಕಂಪನಿಗೆ 80 ಕೋಟಿ ರೂ.ಗಳಿಗೆ ಮಾರಾಟ ಮಾಡಿತ್ತು.

ಕಾರು ಕಥನ… :

  • ಎಷ್ಟು ವರ್ಷ ಇದು ಭಾರತದ ರಸ್ತೆಗಳಲ್ಲಿ ರಾರಾಜಿಸಿತ್ತು?: 1958 ರಿಂದ 2014
  • ಹಳೆಯ ಅಂಬಾಸಿಡರ್‌ ತಯಾರಿಕೆ ಸ್ಥಗಿತಗೊಂಡಿದ್ದು: 2014ರಲ್ಲಿ
  • 80ರ ದಶಕದಲ್ಲಿ ಅಂಬಾಸಿಡರ್‌ ವಾರ್ಷಿಕ ಮಾರಾಟ ಎಷ್ಟಿತ್ತು?: 20,000
  • 2013-14ರ ವೇಳೆಗೆ ಎಷ್ಟು ಕಾರು ಮಾರಾಟವಾಗುತ್ತಿತ್ತು?: 2,000
  • ಹೊಸ ಅವತಾರದಲ್ಲಿ ರಸ್ತೆಗಿಳಿಯಲು ಇನ್ನೆಷ್ಟು ವರ್ಷ ಬೇಕು?: 2
  • ಹೊಸ ಮಾಡೆಲ್‌ ನಿರ್ಮಾಣ ಎಲ್ಲಿ?: ಚೆನ್ನೈನ ಹಿಂದುಸ್ತಾನ್‌ ಮೋಟಾರ್ಸ್‌ (ಎಚ್‌ಎಂ) ಘಟಕದಲ್ಲಿ.

ಕಾರಿನ ನೂತನ ಎಂಜಿನ್‌ನ ಮೆಕ್ಯಾನಿಕಲ್‌ ವಿನ್ಯಾಸದ ಕೆಲಸವು ನಿರ್ಣಾ ಯಕ ಹಂತಕ್ಕೆ ಬಂದಿದೆ. ಹೊಸ ಲುಕ್‌ನಲ್ಲಿ ಇನ್ನೆರಡು ವರ್ಷ ಗಳಲ್ಲೇ “ಆ್ಯಂಬಿ’ ರಸ್ತೆಗಿಳಿಯಲಿದೆ. -ಉತ್ತಮ್‌ ಬೋಸ್‌,  ಎಚ್‌ಎಂ ನಿರ್ದೇಶಕ

 

ಟಾಪ್ ನ್ಯೂಸ್

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.