ಹಸಿದವರ ಹೊಟ್ಟೆ ತುಂಬಿಸಿದರು!
ಮುಂಡಳ್ಳಿ ಸತ್ಯ ನಾರಾಯಣ ನ್ಪೋರ್ಟ್ಸ್ ಕ್ಲಬ್ ಶ್ಲಾಘನೀಯ ಕಾರ್ಯ
Team Udayavani, Jun 5, 2021, 9:27 PM IST
ಭಟ್ಕಳ: ಯುವಕರು ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು ಎನ್ನುವುದನ್ನು ಇಲ್ಲಿನ ಮುಂಡಳ್ಳಿ ಸತ್ಯ ನಾರಾಯಣ ನ್ಪೋರ್ಟ್ಸ್ ಕ್ಲಬ್ ಸದಸ್ಯರು ಮಾಡಿ ತೋರಿಸಿದ್ದಾರೆ.
ಮುಂಡಳ್ಳಿ ಸತ್ಯನಾರಾಯಣ ನ್ಪೋರ್ಟ್ಸ್ ಕ್ಲಬ್ ಸದಸ್ಯರು ಹಸಿದವರ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಾ ಯುವ ಜನತೆಗೆ ಮಾದರಿಯಾಗಿದ್ದಾರೆ. ಸಣ್ಣ ಪ್ರಮಾಣದಲ್ಲಿ ಇಲ್ಲಿನ ನಿರ್ಗತಿಕರು, ಭಿಕ್ಷುಕರು ಆಹಾರವಿಲ್ಲದೇ ಸಂಕಷ್ಟದ ಸ್ಥಿತಿಗೆ ತಲುಪಿದ್ದನ್ನು ಮನಗಂಡು ಹಸಿದ ಹೊಟ್ಟೆ ತಣಿಸಲು ಯೋಚಿಸಿ ಊಟ ತಯಾರಿಸಿ ನೀಡಲು ಆರಂಭಿಸಿದ್ದು ಇಂದು ನೂರಾರು ಜನರ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೆ, ಪ್ರತಿನಿತ್ಯ ಸುಮಾರು 12:30ರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಚಾಲಕರಿಗೆ, ದೂರದ ಪ್ರಯಾಣಿಕರಿಗೆ ಊಟ ನೀಡಲು ಮುಂದಾಗಿದ್ದಾರೆ.
ಪ್ರತಿನಿತ್ಯ ಕ್ಲಬ್ನ ಸದಸ್ಯರೊಬ್ಬರ ಮನೆಯಲ್ಲಿ ಊಟ ತಯಾರಿಸಿ ಎಲ್ಲರೂ ಬೈಕ್ಗಳಲ್ಲಿ ಅಲ್ಲಲ್ಲಿ ತೆಗೆದುಕೊಂಡು ಹೋಗಿ ತಲುಪಿಸಿದರೆ, ಕೆಲವು ಸದಸ್ಯರು ಆಟೋ ರಿಕ್ಷಾದಲ್ಲಿ ಊಟ ತಂದು ಇಲ್ಲಿನ ಸಂಶುದ್ದೀನ್ ಸರ್ಕಲ್ನಲ್ಲಿ ನಿಂತು ಲಾರಿಗಳಿಗೆ ಕೈಮಾಡಿ ನಿಲ್ಲಿಸಿ ಅವರಿಗೆ ಅನ್ನ, ಸಾಂಬಾರ್, ನೀರು ಕೊಡುತ್ತಿದ್ದಾರೆ. ತಾವು ಊಟ ನೀಡಿದ ವ್ಯಕ್ತಿ ತಮಗೆ ಧನ್ಯವಾದ ಹೇಳಬೇಕು ಎನ್ನುವ ಯಾವುದೆ ಅಭಿಲಾಷೆಯನ್ನೂ ಇಟ್ಟುಕೊಳ್ಳದೇ ಮಾಡುವ ಇವರ ನಿಸ್ವಾರ್ಥ ಸೇವೆ ಮಾತ್ರ ಮೆಚ್ಚುವಂತದ್ದು. ಇದರ ವೆಚ್ಚವನ್ನು ಸದಸ್ಯರೇ ಭರಿಸುತ್ತಿದ್ದಾರೆ. ಕೇವಲ ನಗರದ ಮುಖ್ಯ ರಸ್ತೆ, ಹೆದ್ದಾರಿಯಲ್ಲದೇ ಇವರು ರೈಲ್ವೇ ನಿಲ್ದಾಣ, ಪ್ರಮುಖ ರಸ್ತೆಗಳು, ನಿರ್ಗತಿಕರು, ಭಿಕ್ಷುಕರು ಆಶ್ರಯ ಪಡೆದಿರುವ ಸ್ಥಳವನ್ನು ಹುಡುಕಿಕೊಂಡು ಹೋಗಿ ಊಟ ನೀಡುತ್ತಿದ್ದಾರೆ. ಅಲ್ಲದೇ ಯಾವುದೇ ಕಡೆಯಿಂದ ಕರೆ ಬಂದರೂ ಸಹ ಇವರು ತಕ್ಷಣ ಅಲ್ಲಿಗೆ ಹೋಗಿ ಊಟ ಕೊಟ್ಟು ಬರುತ್ತಿದ್ದು ಇವರ ಸಮಾಜ ಸೇವೆ ಮಾದರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ