Budget 2024-25; ಬೆಂಗಳೂರು, ಮೈಸೂರಿಗೆ ಸಿಂಹಪಾಲು; ಉತ್ತರಕ್ಕೆ ಸಮಪಾಲು


Team Udayavani, Feb 17, 2024, 6:45 AM IST

Budget  2024-25; ಬೆಂಗಳೂರು, ಮೈಸೂರಿಗೆ ಸಿಂಹಪಾಲು; ಉತ್ತರಕ್ಕೆ ಸಮಪಾಲು

ರಾಜ್ಯ ಆಯವ್ಯಯದಲ್ಲಿ ಎಂದಿನಂತೆ ಬೆಂಗಳೂರು ಮಹಾನಗರಕ್ಕೆ ಸಿಂಹಪಾಲು ದೊರೆತಿದೆ. ಬಾಗಲಕೋಟೆ, ಹಾಸನ, ಕೋಲಾರ ಜಿಲ್ಲೆಗಳಿಗೆ ಅತ್ಯಂತ ಕಡಿಮೆ ಸೌಕರ್ಯಗಳನ್ನು ನೀಡಲಾಗಿದೆ. ಕೊಪ್ಪಳ, ಕಲಬುರಗಿ ಸೇರಿದಂತೆ ಇನ್ನಷ್ಟು ಜಿಲ್ಲೆಗಳಿಗೂ ಆದ್ಯತೆ ನೀಡಲಾಗಿದೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಬೆಂಗಳೂರು- ಮೈಸೂರು- ಮಂಡ್ಯ ಬಿಟ್ಟರೆ ಇನ್ನಿತರ ಪ್ರದೇಶಗಳಿಗೆ ಸಾಮಾನ್ಯ ಆದ್ಯತೆಗೆ ಮೀಸಲು ಮಾಡಲಾಗಿದೆ. ಈ ಹಿಂದಿನ ಬಜೆಟ್‌ಗಳಿಗೆ ಹೋಲಿಸಿದರೆ ಈ ಬಾರಿ ಕರಾವಳಿ ಭಾಗಕ್ಕೆ ಹೆಚ್ಚು ಮಾನ್ಯತೆ ನೀಡಿದಂತೆ ಕಾಣುತ್ತಿಲ್ಲ. ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿರುವುದು ಕಂಡುಬರುತ್ತದೆ. ಬೆಂಗಳೂರು ನಗರದ ಒತ್ತಡವನ್ನು ನಿಭಾಯಿಸಲು ಜಿಲ್ಲಾಮಟ್ಟದಲ್ಲಿ ಟೌನ್‌ಶಿಪ್‌ ಸ್ಥಾಪನೆ ಹಾಗೂ ನಾವೀನ್ಯತಾ ಕೇಂದ್ರಗಳ ಸ್ಥಾಪನೆಗೆ ಸರಕಾರ ಮುಂದಾಗಿದೆ.

ಬೆಳಗಾವಿ
-ಮಾರುಕಟ್ಟೆಯಲ್ಲಿ ಬಯೋ ಸಿಎನ್‌ಜಿ ಪಾಯಿಂಟ್‌ ಸ್ಥಾಪನೆ
-500 ಕೋಟಿ ವೆಚ್ಚದಲ್ಲಿ ವಿಟಿಯು ಅನ್ನು ಐಐಟಿ ಮಾದರಿ ಅಭಿವೃದ್ಧಿ
-ಖಾನಾಪುರದಲ್ಲಿ 100 ಹಾಸಿಗೆಯ ತಾಲೂಕು ಆಸ್ಪತ್ರೆ ನಿರ್ಮಾಣ
-ರೇಣುಕಾ ಯಲ್ಲಮ್ಮ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು
-ಗೋಕಾಕ್‌ ಜಲಪಾತ ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ

ಗದಗ
-ಜಿಲ್ಲೆಯಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಶೀತಲಗೃಹ ನಿರ್ಮಾಣ
-ಶಿರಹಟ್ಟಿಯಲ್ಲಿ 100 ಹಾಸಿಗೆಯ ತಾಲೂಕು ಆಸ್ಪತ್ರೆ ನಿರ್ಮಾಣ
-ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಾರ್ಡಿಯಾಕ್‌ ಯೂನಿಟ್‌ ಸ್ಥಾಪನೆ
-ರೋಣ ಮಲ್ಲಾಪುರದಲ್ಲಿ ರೈಲು ಸೇತುವೆಗಳ ನಿರ್ಮಾಣಕ್ಕೆ ಕ್ರಮ
-ಕಪ್ಪತ್ತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ

ಕೊಪ್ಪಳ
-ಯಲಬುರ್ಗಾ ಕೃಷಿ ಮಾರುಕಟ್ಟೆಯಲ್ಲಿ ಶೀತಲಗೃಹ ನಿರ್ಮಾಣ
-ಯಲಬುರ್ಗಾ- ಕುಕನೂರಿನ 38 ಕೆರೆಗಳಿಗೆ ನೀರು
-ಕುಕನೂರು-ಯಲಬುರ್ಗಾಗಳಲ್ಲಿ ಕೆರೆ, ಬ್ರಿಡ್ಜ್ಗಳ ನಿರ್ಮಾಣ
-ಕೊಪ್ಪಳದ ತಳಕಲ್‌ನಲ್ಲಿ ಜಿಟಿಟಿಸಿ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆ
-ಹುಲಿಗೆಮ್ಮ ದೇಗುಲ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚನೆ
-ಜಿಲ್ಲಾ/ತಾಲೂಕು ಕೇಂದ್ರಗಳಲ್ಲಿ ವಿವಿ ಘಟಕ ಕಾಲೇಜು ಸ್ಥಾಪನೆ

ಹುಬ್ಬಳ್ಳಿ-ಧಾರವಾಡ 
-ಮಾರುಕಟ್ಟೆಯಲ್ಲಿ ಬಯೋ ಸಿಎನ್‌ಜಿ ಪಾಯಿಂಟ್‌ ಸ್ಥಾಪನೆ
-ಬೆಣ್ಣೆಹಳ್ಳದ ಪ್ರವಾಹ ಪೀಡಿತ ಗ್ರಾಮಗಳಿಗೆ ತಡೆಗೋಡೆ ನಿರ್ಮಾಣ
-ಆಧುನಿಕ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಸ್ಥಾಪನೆ
-ಹು-ಧಾರವಾಡದಲ್ಲಿ ಇಂಟಿಗ್ರೇಟೆಡ್‌ ಟೌನ್‌ ಶಿಪ್‌ ಅಭಿವೃದ್ಧಿ
-ತಂತ್ರಜ್ಞಾನಗಳಲ್ಲಿ ಕೌಶಲ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆ

ವಿಜಯನಗರ
-ಐಪಿಎಚ್‌ಎಲ್‌ ಪ್ರಯೋಗಾಲಯ ಸ್ಥಾಪನೆ
-ಹಗರಿಬೊಮ್ಮನಹಳ್ಳಿಯಲ್ಲಿ ತಾಲೂಕು ಮಟ್ಟದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ.

ಉತ್ತರ ಕನ್ನಡ
-ಹೊನ್ನಾವರದ ಮಂಕಿ/ಕಾಸರಕೋಡದಲ್ಲಿ ಮೀನುಗಾರಿಕಾ ಸಂಶೋಧನೆ ಕೇಂದ್ರ ಸ್ಥಾಪನೆ
-ಮುರುಡೇಶ್ವರದಲ್ಲಿ ಮೀನುಗಾರಿಕೆ ಹೊರ ಬಂದರು ಸ್ಥಾಪನೆ
-ಕಾರವಾರ ಬಂದರಿನಲ್ಲಿ ಬೆಂಕಿ ನಂದಿಸುವ ಅಳವಡಿಕೆ ಕಾಮಗಾರಿ
-ದಾಂಡೇಲಿಯಲ್ಲಿ ಇಂಟರ್‌ ಪ್ರಿಟೇಷನ್‌ ಸೆಂಟರ್‌ಗಳನ್ನು ಜೆಎಲ್‌ಆರ್‌ ಸಂಸ್ಥೆ ಮೂಲಕ ನಿರ್ಮಾಣ

ಹಾವೇರಿ
-ರಾಣೆಬೆನ್ನೂರು ಕೃಷಿ ಮಾರುಕಟ್ಟೆಯಲ್ಲಿ ಶೀತಲಗೃಹ ನಿರ್ಮಾಣ, ಮೆಗಾ ಮಾರುಕಟ್ಟೆಯಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ
-ಹಿರೇಕೆರೂರಲ್ಲಿ ವಚನಕಾರ ಸರ್ವಜ್ಞನ ಸ್ಮಾರಕ ಅಭಿವೃದ್ಧಿಗೆ ಕ್ರಮ

ದಾವಣಗೆರೆ
-ಆಧುನಿಕ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಸ್ಥಾಪನೆ
-ಜಿಲ್ಲಾಸ್ಪತ್ರೆಯಲ್ಲಿ ಕಾಲೊ³àಸ್ಕೋಪಿ ಉಪಕರಣ ಖರೀದಿಗೆ ಒತ್ತು

ಶಿವಮೊಗ್ಗ
-ಸೋಗಾನೆಯಲ್ಲಿ ಆಹಾರ ಪಾರ್ಕ್‌ ನಿರ್ಮಾಣ, ಆಧುನಿಕ ಮೀನು ಮಾರುಕಟ್ಟೆ, ಐಪಿಎಚ್‌ಎಲ್‌ ಲ್ಯಾಬೊರೇಟರಿ ಸ್ಥಾಪನೆ
-ಸೊರಬ ವರದಾ ನದಿಗೆ ಅಡ್ಡಲಾಗಿ ಬ್ರಿಡ್ಸ್‌/ಬ್ಯಾರೇಜ್‌
-ರೈಲು ಮೇಲು- ಕೆಳ ಸೇತುವೆಗಳ ನಿರ್ಮಾಣಕ್ಕೆ ಕ್ರಮ
-ವಿಜ್ಞಾನ ಕೇಂದ್ರ/ತಾರಾಲಯ ಹೊಸದಾಗಿ ಸ್ಥಾಪನೆ
-ಮಾಜಿ ಸಿಎಂ ಎಸ್‌.ಬಂಗಾರಪ್ಪನವರ ಸ್ಮಾರಕ ನಿರ್ಮಾಣ

ಉಡುಪಿ
-ಸ್ವರ್ಣ- ಸಿದ್ದಾಪುರ ಏತನೀರಾವರಿಗೆ ಒತ್ತು
-ಆಧುನಿಕ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಸ್ಥಾಪನೆ
-ಜಿಲ್ಲಾಸ್ಪತ್ರೆಯಲ್ಲಿ ಕಾಲ್ಪೋಸ್ಕೋಪಿ ಉಪಕರಣ ಖರೀದಿಗೆ ಒತ್ತು
-ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ

ಚಿಕ್ಕಮಗಳೂರು
-ಸ್ಪೈಸ್‌ ಪಾರ್ಕ್‌ ನಿರ್ಮಾಣ
-ಶೃಂಗೇರಿಯಲ್ಲಿ 100 ಹಾಸಿಗೆಯ ತಾಲೂಕು ಆಸ್ಪತ್ರೆ ನಿರ್ಮಾಣ
-ಐಪಿಎಚ್‌ಎಲ್‌ ಪ್ರಯೋಗಾಲಯ ಸ್ಥಾಪನೆ
-ವಿಜ್ಞಾನ ಕೇಂದ್ರ/ತಾರಾಲಯ ಹೊಸದಾಗಿ ಸ್ಥಾಪನೆ

ದಕ್ಷಿಣ ಕನ್ನಡ
-ಮಂಗಳೂರಿನ ಮಾರುಕಟ್ಟೆಯಲ್ಲಿ ಕೃಷಿ ಸಂಕೀರ್ಣ ಸ್ಥಾಪನೆ
-ಮಂಗಳೂರಿನಲ್ಲಿ ಹಜ್‌ ಭವನ ನಿರ್ಮಾಣ
-ಮಂಗಳೂರು ಬಂದರಿನಿಂದ ಬೆಂಗಳೂರುವರೆಗೆ ಕಾರಿಡಾರ್‌
-ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ ವಾಹನಗಳ ಡಿಜಿಟಲೀಕರಣ| ಇಂಟಿಗ್ರೇಟೆಡ್‌ ಟೌನ್‌ ಶಿಪ್‌ ಅಭಿವೃದ್ಧಿ

ಹಾಸನ
-ಐಪಿಎಚ್‌ಎಲ್‌ ಪ್ರಯೋಗಾಲಯ ಸ್ಥಾಪನೆ
-ಹಾಸನ ವಿಮಾನ ನಿಲ್ದಾಣ ಕಾಮಗಾರಿಗೆ ಪ್ರಸಕ್ತ ಸಾಲಿನಲ್ಲಿ ಬಾಕಿ 30 ಕೋಟಿ ಬಿಡುಗಡೆ

ಕೊಡಗು
-ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪಿಪಿಪಿ ಮಾದರಿ ಕಾರ್ಡಿಯಾಕ್‌ ಯೂನಿಟ್‌ ಆರಂಭ ಮತ್ತು ವೈರಲ್‌ -ರೀಸರ್ಚ್‌ ಮತ್ತು ಡಯಾಗ್ನಾಸ್ಟಿಕ್‌ ಲ್ಯಾಬೋರೇಟರಿ ಸ್ಥಾಪನೆ
-ಪೊನ್ನಂಪೇಟೆಯಲ್ಲಿ ಕ್ರೀಡಾ ವಸತಿ ನಿಲಯ ಕಟ್ಟಡ ನಿರ್ಮಾಣ
-ವಿರಾಜಪೇಟೆಯಲ್ಲಿ ಹೊಸ ಕೋರ್ಟ್‌ ಸಂಕೀರ್ಣ ನಿರ್ಮಾಣ

ಮೈಸೂರು
-ಜಿಲ್ಲೆಯಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಶೀತಲಗೃಹ ನಿರ್ಮಾಣ
-ಬಯೋ ಸಿಎನ್‌ಜಿ ಪಾಯಿಂಟ್‌ ಸ್ಥಾಪನೆ
-ಹುಣಸೂರಿನ ಮರದೂರು ಕೆರೆ ತುಂಬಿಸಲು ಒತ್ತು
-ವರುಣಾ ಕ್ಷೇತ್ರದ ನಾಲೆಗಳ ಅಭಿವೃದ್ಧಿ
-ಮಹಾರಾಣಿ ಕಾಲೇಜು ಹಾಸ್ಟೆಲ್‌ ಕಟ್ಟಡ ನಿರ್ಮಾಣ
-ಆಧುನಿಕ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಸ್ಥಾಪನೆ
-ಹ್ಯೂಮನ್‌ ಮಿಲ್ಕ್ ಬ್ಯಾಂಕ್‌ ಘಟಕ ಸ್ಥಾಪನೆ
-ಕೆ. ಆರ್‌. ಆಸ್ಪತ್ರೆ ಬಳಿ ಹೊರ ರೋಗಿ ವಿಭಾಗ ಕಟ್ಟಡ ನಿರ್ಮಾಣ
-ವರುಣಾದಲ್ಲಿ ಜಿಟಿಟಿಸಿ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆ
-ಪ್ರಖ್ಯಾತ ಲ್ಯಾನ್ಸ್‌ಡೌನ್‌ ಕಟ್ಟಡ ಮತ್ತು ದೇವರಾಜ ಅರಸು ಮಾರುಕಟ್ಟೆಯನ್ನು ಪಾರಂಪರಿಕ ಶೈಲಿಯಲ್ಲಿ ಅಭಿವೃದ್ಧಿ
-ಕುಕ್ಕರಹಳ್ಳಿ ಬಳಿ ರೈಲು ಸೇತುವೆಗಳ ನಿರ್ಮಾಣಕ್ಕೆ ಕ್ರಮ
-ನಂಜನಗೂಡಿನ ತಾ.ಬದನವಾಳಿನಲ್ಲಿ ಖಾದಿಗೆ ಪ್ರೋತ್ಸಾಹ
-ವಿಜ್ಞಾನ ಕೇಂದ್ರ/ತಾರಾಲಯ ಹೊಸದಾಗಿ ಸ್ಥಾಪನೆ
-ಕಬಿನಿಯಲ್ಲಿ ಇಂಟರ್‌ ಪ್ರಿಟೇಷನ್‌ ಸೆಂಟರ್‌ಗಳ ನಿರ್ಮಾಣ
-ಬಂಡೀಪುರದಲ್ಲಿ ಚಿರತೆ, ಆನೆ ಕಾರ್ಯಪಡೆ ರಚನೆ
-ಕೆ.ಆರ್‌.ನಗರ ಕೆಸ್ತೂರು ಕೊಪ್ಪಲು ಏತನೀರಾವರಿ

ಮಂಡ್ಯ
-ವಿ.ಸಿ. ಪಾರಂನಲ್ಲಿ ಕೃಷಿ ವಿವಿ ಸ್ಥಾಪನೆಗೆ ತಜ್ಞರ ಸಮಿತಿ ರಚನೆ
-ಕೆಆರ್‌ಎಸ್‌ ಉದ್ಯಾನ ವಿಶ್ವದರ್ಜೆಗೇರಿಸಲು ಒತ್ತು
-ಮಳವಳ್ಳಿ ಮಾದವ ಮಂತ್ರಿ ನಾಲೆ, ಮದ್ದೂರು ಕೆಮ್ಮಣ್ಣು ನಾಲೆ ಆಧುನೀಕರಣ
-ಕೆಆರ್‌ಎಸ್‌ ರಸ್ತೆಯಲ್ಲಿ ರೈಲುಗಳಿಗೆ ಸೇತುವೆ ನಿರ್ಮಾಣ
-ಮೈಶುಗರ್‌ ಆವರಣದಲ್ಲಿ ಹೊಸ ಸಕ್ಕರೆ ಕಾರ್ಖಾನೆ

ಚಾಮರಾಜನಗರ
-ಯಳಂದೂರು 100 ಹಾಸಿಗೆ ತಾಲೂಕು ಆಸ್ಪತ್ರೆ ನಿರ್ಮಾಣ
-ಬಂಡೀಪುರದಲ್ಲಿ ಅರಿವು ಮೂಡಿಸಲು ಕೇಂದ್ರ ನಿರ್ಮಾಣ

ರಾಮನಗರ
-ಅರ್ಕಾವತಿ ನದಿ ತೀರ ಅಭಿವೃದ್ಧಿಗೆ ಒತ್ತು
-ಕನಕಪುರ ಹೆಗ್ಗನೂರು ಕೆರೆ ತುಂಬಿಸಲು ಯೋಜನೆ
-ಬಿಡದಿ ಮತ್ತು ಮಾಗಡಿಯಲ್ಲಿ ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಉಪನಗರ ಟೌನ್‌ಶಿಪ್‌ ಅಭಿವೃದ್ಧಿ
– ಚನ್ನಪಟ್ಟಣ-ಬೈರಾಪಟ್ಟಣ ರೈಲು ಮೇಲು ಹಾಗೂ ಕೆಳ ಸೇತುವೆಗಳ ನಿರ್ಮಾಣಕ್ಕೆ ಕ್ರಮ

ಬೆಂ. ಗ್ರಾಮಾಂತರ
-ಪೂಜೇನಹಳ್ಳಿಯಲ್ಲಿ ಆಹಾರ ಪಾರ್ಕ್‌ ನಿರ್ಮಾಣ
-ಆನೇಕಲ್‌, ಹೊಸಕೋಟೆ, ನೆಲಮಂಗಲದಲ್ಲಿ 100 ಹಾಸಿಗೆಯ ತಾಲೂಕು ಆಸ್ಪತ್ರೆ ನಿರ್ಮಾಣ
-ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರದಲ್ಲಿ ಟೌನ್‌ಶಿಪ್‌ ಅಭಿವೃದ್ಧಿ
-ಶ್ರೀ ಘಾಟಿ ದೇಗುಲ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರ

ಬಾಗಲಕೋಟೆ
-ಹುನಗುಂದದಲ್ಲಿ ತಾಲೂಕು ಮಟ್ಟದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ.
-ಕೆಎಸ್‌ಟಿಡಿಪಿಯಿಂದ ಐಹೊಳೆಯಲ್ಲಿ ಸುಸಜ್ಜಿತ ಹೋಟೆಲ್‌ ನಿರ್ಮಾಣ, ರೋರಿಚ್‌, ದೇವಿಕಾರಾಣಿ ಎಸ್ಟೇಟ್‌ -ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ

ವಿಜಯಪುರ
-ಇಟ್ಟಂಗಿಹಾಳದಲ್ಲಿ ಆಹಾರ ಪಾರ್ಕ್‌ ನಿರ್ಮಾಣ
-ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆ
-ಆಲಮಟ್ಟಿ ಒಳನಾಡು ಮೀನುಗಾರಿಕೆ ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪನೆ
-ಬಸವನ ಬಾಗೇವಾಡಿಯಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಶೀತಲಗೃಹ ನಿರ್ಮಾಣ
-ಆಧುನಿಕ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಸ್ಥಾಪನೆ
-ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆ
-ಸಿದ್ಧರಾಮೇಶ್ವರರ ಬದುಕು ಬರಹ ಅಧ್ಯಯನಕ್ಕಾಗಿ ಅಕ್ಕಮಹಾದೇವಿ ಮಹಿಳಾ ವಿವಿ ಅಧ್ಯಯನ ಪೀಠ ಸ್ಥಾಪನೆ
-ಕರೇಜ್‌ ನೀರು ವ್ಯವಸ್ಥೆ ತಾಂತ್ರಿಕ ನೆರವಿನೊಂದಿಗೆ ಪುನಶ್ಚೇತನ

ಬೀದರ
-ಜಿಲ್ಲಾ/ತಾಲೂಕು ಕೇಂದ್ರಗಳಲ್ಲಿ ವಿವಿ ಘಟಕ ಕಾಲೇಜು ಸ್ಥಾಪನೆ
-1 ಕೋಟಿ ವೆಚ್ಚದಲ್ಲಿ ನಾನಕ್‌ ಝೀರಾ ಸಾಹೇಬ್‌ ಗುರುದ್ವಾರದ ಅಭಿವೃದ್ಧಿ.
-ಬೀದರ್‌ ಹಾಗೂ ಬೆಂಗಳೂರು ನಡುವೆ ಕಾರಿಡಾರ್‌ ಅಭಿವೃದ್ಧಿ
-ಕರೇಜ್‌ ನೀರು ವ್ಯವಸ್ಥೆ ತಾಂತ್ರಿಕ ನೆರವಿನೊಂದಿಗೆ ಪುನಶ್ಚೇತನ
-ಹೊನ್ನಿಕೆರೆ ಮೀಸಲು ಅರಣ್ಯದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಒತ್ತು
-ಭಾಲ್ಕಿಯಲ್ಲಿ ಪ್ರಾಯೋಗಿಕವಾಗಿ ವಾಹನಗಳ ಡಿಜಿಟಲೀಕರಣ ಜಾರಿ

ಕಲಬುರಗಿ
-ಬೆಣ್ಣೆತೊರಾ ಜಲಾಶಯಕ್ಕೆ ಭೀಮಾ-ಕಾಗಿಣಾ ನದಿಗಳ ನೀರು ತುಂಬಿಸಲು ಯೋಜನೆ
-ಚಿತ್ತಾಪುರ ಕೆರೆ, ಜೇವರ್ಗಿಯ ಬಾಂದೂರು ಕೆರೆ ತುಂಬಿಸಲು ಒತ್ತು
-ಜಿಲ್ಲಾ/ತಾಲೂಕು ಕೇಂದ್ರಗಳಲ್ಲಿ ವಿವಿ ಘಟಕ ಕಾಲೇಜು ಸ್ಥಾಪನೆ
-ಐಸಿಡಿಟಿ ಕೇಂದ್ರಗಳ ಬಲವರ್ಧನೆ
-ಕಲಬುರಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಕ್ಕಳ ಘಟಕ ಸ್ಥಾಪನೆ
-ಜಿಟಿಟಿಸಿ ಬಹು ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆ
-ಕಲಬುರಗಿಯಲ್ಲಿ ಇಂಟಿಗ್ರೇಟೆಡ್‌ ಟೌನ್‌ ಶಿಪ್‌ ಅಭಿವೃದ್ಧಿ
-ಕಲಬುರಗಿ ಮೆಗಾ ಟೆಕ್ಸ್‌ಟೈಲ್‌ ಯೋಜನೆಗೆ 50 ಕೋಟಿ ವೆಚ್ಚದಲ್ಲಿ ಪೂರಕ ಮೂಲ ಸೌಕರ್ಯ

ಯಾದಗಿರಿ
-ಜಿಲ್ಲಾ/ತಾಲೂಕು ಕೇಂದ್ರಗಳಲ್ಲಿ ವಿವಿ ಘಟಕ ಕಾಲೇಜು ಸ್ಥಾಪನೆ
-ವಿಜ್ಞಾನ ಕೇಂದ್ರ/ತಾರಾಲಯ ಹೊಸದಾಗಿ ಸ್ಥಾಪನೆ

ರಾಯಚೂರು
-ಕೃಷಿ ಮಾರುಕಟ್ಟೆಯಲ್ಲಿ ಶೀತಲಗೃಹ ನಿರ್ಮಾಣ
-25ಕೋ. ವೆಚ್ಚದಲ್ಲಿ ಒಣಮೆಣಸಿನ ಕಾಯಿ ಮಾರುಕಟ್ಟೆ ನಿರ್ಮಾಣ
-ಚಿಕ್ಕಲಪರ್ವಿ ಬಳಿ ತುಂಗಭದ್ರಾ ನದಿಗೆ ಬಿಸಿಬಿ ನಿರ್ಮಾಣ, ಕುರ್ಡಿ ಕೆರೆ ತುಂಬಿಸಲು ಒತ್ತು
-ಜಿಲ್ಲಾ/ತಾಲೂಕು ಕೇಂದ್ರಗಳಲ್ಲಿ ವಿವಿ ಘಟಕ ಕಾಲೇಜು ಸ್ಥಾಪನೆ
-ಹ್ಯೂಮನ್‌ ಮಿಲ್ಕ್ ಬ್ಯಾಂಕ್‌ ಸ್ಥಾಪನೆ
-ನೂತನ ಜವುಳಿ ಪಾರ್ಕ್‌ ಸ್ಥಾಪನೆ
-ವಿಜ್ಞಾನ ಕೇಂದ್ರ/ತಾರಾಲಯ ಹೊಸದಾಗಿ ಸ್ಥಾಪನೆ
-ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸಲು ರಾಯಚೂರಿನ ಚಿಕ್ಕಮಂಚಾಲಿ ಬಳಿ ಬ್ರಿಡ್ಜ್ /ಬ್ಯಾರೇಜ್‌ ನಿರ್ಮಾಣ

ಬಳ್ಳಾರಿ
-ಜಿಲ್ಲೆಯಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಶೀತಲಗೃಹ ನಿರ್ಮಾಣ
-ಮಾರುಕಟ್ಟೆಯಲ್ಲಿ ಬಯೋ ಸಿಎನ್‌ಜಿ ಪಾಯಿಂಟ್‌ ಸ್ಥಾಪನೆ
-ಹ್ಯೂಮನ್‌ ಮಿಲ್ಕ್ ಬ್ಯಾಂಕ್‌ ಘಟಕ ಸ್ಥಾಪನೆ
-ಸಂಡೂರಿನಲ್ಲಿ ಸ್ಕಿಲ್‌ ಅಕಾಡೆಮಿ ಸ್ಥಾಪನೆ
-ಜಿಟಿಟಿಸಿ ಕೇಂದ್ರ ಸ್ಥಾಪನೆ
-ನಗರಗಳ ಸಮೀಪದಲ್ಲಿ ಇಂಟಿಗ್ರೇಟೆಡ್‌ ಟೌನ್‌ ಶಿಪ್‌ ಅಭಿವೃದ್ಧಿ
-ಬಳ್ಳಾರಿಯಲ್ಲಿ ಜೀನ್ಸ್‌ ಅಪಾರೆಲ್‌ ಪಾರ್ಕ್‌,ಸಾಮಾನ್ಯ ಸೌಲಭ್ಯ ಕೇಂದ್ರ ಅಭಿವೃದ್ಧಿ
-10 ಕೋಟಿ ವೆಚ್ಚದಲ್ಲಿ ಬಳ್ಳಾರಿಯಲ್ಲಿ ಕ್ರೀಡಾ ವಸತಿ ನಿಲಯದ ಉನ್ನತೀಕರಣ

ಚಿತ್ರದುರ್ಗ
-ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗದಲ್ಲಿ ಗಣಿಬಾಧಿತ ಪ್ರದೇಶದಲ್ಲಿ ಮೀನುಗಾರಿಕೆಗೆ ಒತ್ತು
-ವೈದ್ಯಕೀಯ ಕಾಲೇಜು, ವಸತಿ ಗೃಹಗಳ ಪೂರ್ಣಕ್ಕೆ ಕ್ರಮ
-ಜಿಟಿಟಿಸಿ ಕೇಂದ್ರ ಸ್ಥಾಪನೆ

ತುಮಕೂರು
-ಗುಬ್ಬಿಯ ಮಠದಹಳ್ಳಿ ಕುಡಿವ ನೀರು ಯೋಜನೆಗೆ ಒತ್ತು
-ಶಿರಾ ತಾಲೂಕು ಮಟ್ಟದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ.
-ವಸಂತನರಸಾಪುರದಲ್ಲಿ ಇಂಟಿ ಗ್ರೇಟೆಡ್‌ ಟೌನ್‌ ಶಿಪ್‌ ಅಭಿವೃದ್ಧಿ
-ತಂತ್ರಜ್ಞಾನಗಳಲ್ಲಿ ಕೌಶಲ್ಯ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆ
-ಮಧುಗಿರಿಯಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ

ಚಿಕ್ಕಬಳ್ಳಾಪುರ
-ಶಿಡ್ಲಘಟ್ಟದಲ್ಲಿ ರೇಷ್ಮೆ ಮಾರುಕಟ್ಟೆ 2-ನೇ ಹಂತ ಅಭಿವೃದ್ಧಿ
-ಮಾರುಕಟ್ಟೆಯಲ್ಲಿ ಬಯೋ ಸಿಎನ್‌ಜಿ ಪಾಯಿಂಟ್‌ ಸ್ಥಾಪನೆ
-ಚಿಕ್ಕಬಳ್ಳಾಪುರದಲ್ಲಿ ರೈಲು ಮೇಲು- ಕೆಳ ಸೇತುವೆಗಳ ನಿರ್ಮಾಣಕ್ಕೆ ಕ್ರಮ
-ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ

ಕೋಲಾರ
-ಮಾರುಕಟ್ಟೆಯಲ್ಲಿ ಬಯೋ ಸಿಎನ್‌ಜಿ ಪಾಯಿಂಟ್‌ ಸ್ಥಾಪನೆ
-ಜಿಲ್ಲಾಸ್ಪತ್ರೆಯಲ್ಲಿ ಕಾಲೊ³àಸ್ಕೋಪಿ ಉಪಕರಣ ಖರೀದಿಗೆ ಒತ್ತು
-ಕೆಜಿಎಫ್ನಲ್ಲಿ ಇಂಟಿಗ್ರೇಟೆಡ್‌ ಟೌನ್‌ ಶಿಪ್‌ ಅಭಿವೃದ್ಧಿ
-ಆದಿಮ ಸಾಂಸ್ಕೃತಿಕ ಕೇಂದ್ರದ ಅಭಿವೃದ್ಧಿಗೆ ಅಗತ್ಯ ನೆರವು

ಬೆಂಗಳೂರು ನಗರ
-ದಾಸನಪುರದಲ್ಲಿ ಬಯೋ ಸಿಎನ್‌ಜಿ ಪಾಯಿಂಟ್‌ ಸ್ಥಾಪನೆ
-ಕೆ.ಸಿ.ಜನರಲ್‌ ಆಸ್ಪತ್ರೆ ಬಳಿ ತಾಯಿ- ಮಗು ಆಸ್ಪತ್ರೆ ನಿರ್ಮಾಣ
-ಬೆಂ.ಪೂರ್ವದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರ ಆರಂಭ
-ಡಾ. ಸಿದ್ದಲಿಂಗಯ್ಯ ಸ್ಮರಣಾರ್ಥ ಬೆಂವಿವಿಯಲ್ಲಿ ಅಧ್ಯಯನ ಪೀಠ ಸ್ಥಾಪನೆ
-ಹೆಬ್ಬಾಳ ಜಂಕ್ಷನ್‌ನಲ್ಲಿ ಪ್ರಾಯೋಗಿಕ ಟನೆಲ್‌ ನಿರ್ಮಾಣ
-ಆರ್ಥಿಕ ಚಟುವಟಿಕೆಗೆ ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ಪರಿಕಲ್ಪನೆಗೆ ಒತ್ತು
-ಬಿಎಂಟಿಸಿಗೆ 1334 ಹೊಸ ಎಲೆಕ್ಟ್ರಿಕ್‌ ಬಸ್‌, 820 ಬಿಎಸ್‌-6 ಡಿಸೇಲ್‌ ಬಸ್‌ ಸೇರ್ಪಡೆ
-ಮಹಿಳೆಯರಿಗಾಗಿ ವೆಹಿಕಲ್‌ ಟ್ರ್ಯಾಕಿಂಗ್‌ ಮೊಬೈಲ್‌ ಆ್ಯಪ್‌ ವ್ಯವಸ್ಥೆ
-28 ಜಂಕ್ಷನ್‌ಗಳಲ್ಲಿ ಏರಿಯಾ ಟ್ರಾಫಿಕ್‌ ಸಿಗ್ನಲ್‌ ಕಂಟ್ರೋಲ್‌ ಸಿಸ್ಟಮ್‌ಗೆ ಒತ್ತು
-200 ಕೋಟಿ ವೆಚ್ಚದಲ್ಲಿ ಬಿಬಿಎಂಪಿಗೆ ಸೇರಿದ 110 ಗ್ರಾಮಗಳಿಗೆ ಕುಡಿವ ನೀರಿನ ಯೋಜನೆ
-ಸರ್ವಜ್ಞನಗರ ಕ್ಷೇತ್ರದಲ್ಲಿ ಸರ್ವಜ್ಞ ಉದ್ಯಾನ ಅಭಿವೃದ್ಧಿ
-ವಿದ್ಯುತ್‌ ಬೇಡಿಕೆ ನೀಗಿಸಲು ಸಬ್‌ಸ್ಟೇಷನ್‌ ಉನ್ನತೀಕರಣ
-ಬೆಂಗಳೂರು-ಮಂಡ್ಯ-ಮೈಸೂರು ಹೊರವಲಯದ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣ
-ಕೇಂದ್ರದ ನೆರವಿನೊಂದಿಗೆ 233 ಕೋಟಿಯಲ್ಲಿ ವಿಜ್ಞಾನ ನಗರಿ ಸ್ಥಾಪನೆ
-ಬೆಂ. ಉತ್ತರ ತಾಲೂಕಿನಲ್ಲಿ ಕ್ರೀಡಾನಗರ ಸ್ಥಾಪನೆ
-ಬೆಂಗಳೂರಿನಲ್ಲಿ 4 ಕಡೆ ಅತ್ಯಾಧುನಿಕ ಕ್ರೀಡಾಸಂಕೀರ್ಣ ಸ್ಥಾಪನೆ
-ಪೊಲೀಸ್‌ ಸುಲಿವನ್‌ ಮೈದಾನದಲ್ಲಿ ಆಸ್ಟ್ರೋ ಟಫ್ì ಹಾಕಿ ಪ್ರಾಂಗಣ ನಿರ್ಮಾಣ

ಟಾಪ್ ನ್ಯೂಸ್

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

Hassan ವೀಡಿಯೋ ಪ್ರಕರಣ ಎಸ್‌ಐಟಿ ತನಿಖೆಗೆ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.