ಹಾಗೇ ಗೆಳೆಯರೊಂದಿಗೆ ಸುತ್ತಾಟ


Team Udayavani, Dec 8, 2020, 12:00 PM IST

Badra Dam 03

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕಾಲೇಜುಗಳಲ್ಲಿ ಪಾಠದ ಜತೆಗೆ ಮೋಜು, ಮಸ್ತಿ ಎಲ್ಲ ಸರ್ವೆ ಸಾಮಾನ್ಯ. ಕೆಲವೊಂದು ಬಾರಿ ಅಲ್ಲಿ ಅನಿರೀಕ್ಷಿತ ತಿರುವುಗಳು ಉಂಟಾಗುತ್ತದೆ. ನಮ್ಮ ಒತ್ತಾಯದ ಮೇರೆಗೆ ನಾವು ಹತ್ತು ಮಂದಿ ಗೆಳೆಯರು ಭದ್ರಾ ಡ್ಯಾಂಗೆ ಪ್ರವಾಸ ಕೈಗೊಂಡಿದ್ದೆವು.

ಡ್ಯಾಂಮ್‌ನ ಹಿನ್ನೀರಿನ ಪ್ರದೇಶವನ್ನು ನೋಡಲು ಹೋಗಬೇಕೆಂದು ನಿರ್ಧರಿಸಿ ಹೊರೆಟೆವು. ಆದರೆ ಅದಕ್ಕೆ ಎರಡು ದಾರಿಗಳಿದ್ದವು. ಒಂದು ದಾರಿ ಕಿಲೋ ಮೀಟರ್‌ ಅಷ್ಟು ದೂರ. ಇನ್ನೊಂದು ದಾರಿ ಡ್ಯಾಂನ ಪಕ್ಕದಲ್ಲಿರುವ ಎತ್ತರದ ಗೇಟ್‌ ಅನ್ನು ಹಾರಿ ಹೋಗಬೇಕಿತ್ತು. ಈ ದಾರಿಯಲ್ಲಿ ಹೋದರೆ ಕೆಲವೇ ನಿಮಿಷಗಳು ಸಾಕಿತ್ತು. ಆದರೆ ಆ ದಾರಿ ಸ್ವಲ್ಪ ವರ್ಷಗಳಿಂದ ಮುಚ್ಚಲ್ಪಟ್ಟಿದೆ.ಆದರೆ ನಮ್ಮ ಜತೆ ಇದ್ದ ಕೆಲ ಸ್ನೇಹಿತರಿಗೆ ಆ ದಾರಿ ಎಲ್ಲಿಗೆ ಹೋಗಿ ತಲುಪುತ್ತದೆ ಎನ್ನುವ ಸಂಪೂರ್ಣ ಮಾಹಿತಿ ಗೊತ್ತಿತ್ತು.

ಅವರ ಮಾರ್ಗದರ್ಶನದ ಮೇರೆಗೆ ಹತ್ತು ಜನ ಸ್ನೇಹಿತರಲ್ಲಿ ಆರು ಜನ ಈ ದಾರಿಯಲ್ಲಿ ಹೋಗುವ ತೀರ್ಮಾನಕ್ಕೆ ಒಪ್ಪಿದೆವು. ಕೆಲ ಸ್ನೇಹಿತರು ಈ ತಿರ್ಮಾನವನ್ನು ಒಪ್ಪಲಿಲ್ಲ. ಈ ದಾರಿಯಲ್ಲಿ ಹೋಗುವುದು ಬೇಡ ಎಷ್ಟೇ ಸಮಯವಾದರೂ ಬೇರೆ ದಾರಿಯಿಂದ ಹೋಗೋಣ ಎಂದರು. ಅವರ ಮಾತನ್ನು ದಿಕ್ಕರಿಸಿ. ಎತ್ತರದ ಗೇಟುನ್ನು ನಮ್ಮ ಗುಂಪಿನಲ್ಲಿದ್ದ ಇಬ್ಬರು ಹತ್ತಿ ಆ ಕಡೆ ನೆಗೆದರು.

ಅವರ ಅನಂತರ ಒಬ್ಬೊರಂತೆ ಹತ್ತುತ್ತಿರುವಾಗ ನನ್ನ ಸರದಿ ಬಂತು. ಅಲ್ಲಿಯೇ ನೋಡಿ ಎಡವಟ್ಟಾಗಿದ್ದು. ನಾನು ಕಷ್ಟಪಟ್ಟು ಹತ್ತಲಾರದೇ ಸ್ನೇಹಿತರ ಮಾರ್ಗದರ್ಶನ ದೊಂದಿಗೆ ಹತ್ತಿ ಆ ಕಡೆ ಹಾರುವಷ್ಟರಲ್ಲಿ ಅಲ್ಲಿಗೆ ಅದೇ ಊರಿನ ಒಬ್ಟಾತ ಬಂದು ನೀವು ಯಾವ ಊರಿನವರು, ಯಾರನ್ನು ಕೇಳಿ ಇಷ್ಟು ಎತ್ತರದ ಗೇಟು ಹತ್ತಿ ಆ ಕಡೆ ಹೋಗಿದ್ದಿರಾ? ಈ ದಾರಿಯನ್ನು ಮುಚ್ಚಲಾಗಿದೆ. ಇಲ್ಲಿಂದ ನೀವು ಹಿನ್ನೀರಿನ ಸ್ಥಳಕ್ಕೆ ಹೋಗಲು ಆಗುವುದಿಲ್ಲ. ನಿಮ್ಮಂತಹವರಿಗಾಗಿ ನಾವು ಈ ಗೇಟಿಗೆ ಬೀಗ ಹಾಕದೇ ಅದರ ಚೀಲಕ ಹಾಕಿ ವೆಲ್ಡಿಂಗ್‌ ಮಾಡಿಸಿದ್ದೇವೆ.

ಇಷ್ಟಾದರೂ ಹತ್ತಿದ್ದೀರಲ್ಲಾ ಬುದ್ಧಿ ಇಲ್ವಾ ಎಂದು ಬೈಯ್ಯಲಾರಂಭಿಸಿದರು. ಆದರೆ ಈ ಬೈಗುಳ ಕೇವಲ ನಮ್ಮ ಗುಂಪಿನಲ್ಲಿದ್ದ ಆರು ಜನಕ್ಕೆ ಮಾತ್ರ ಸೀಮಿತವಾಗಿತ್ತು. ಇನ್ನುಳಿದ ನಾಲ್ಕು ಜನ ಗೆಳೆಯರು ಗೇಟಿನ ಹೊರಗೆ ನಿಂತು ಅವರಿಗೂ ನಮಗೂ ಯಾವುದೇ ರೀತಿಯ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದರು. ನಾವು ನಮ್ಮ ಜತೆ ಜಗಳ ಮಾಡುತ್ತಿರುವವನೊಡನೆ ವಾದ ಮಾಡುತ್ತಿದ್ದರೂ ಆ ನಾಲ್ಕು ಜನ ಮಾತ್ರ ಸುಮ್ಮನಿದ್ದರು. ಕೊನೆಗೆ ಆತ ನಮ್ಮನ್ನು ಗದರಿಸಿ ನಮ್ಮ ನಿರ್ಧಾರವನ್ನು ಬದಲಿಸಿಬಿಟ್ಟ. ಹೇಗೆ ಹರಸಾಹಸ ಪಟ್ಟು ಗೇಟು ಹತ್ತಿದ್ದೆವೋ ಅದೇ ರೀತಿ ಹಾಗೇ ವಾಪಸ್ಸಾದೆವು.

ಅನಂತರ ಸರಿಯಾದ ದಾರಿ ಮೂಲಕ ಹಿನ್ನೀರಿನ ಸ್ಥಳಕ್ಕೆ ಹೋಗಿ ನೀರಿನಲ್ಲಿ ಚೆನ್ನಾಗಿ ಆಟ ಆಡಿ ಹಿಂದಿರುಗಿದೆವು. ಅಲ್ಲಿಗೆ ಪ್ರತೀ ಸಲ ಭೇಟಿ ನೀಡಿದಾಗಲೂ ಆ ಬೈಗುಳ ಕಿವಿಗೆ ಕೇಳಿಸುತ್ತದೆ. ಆ ನೆನಪು ಕೂಡ ಶಾಶ್ವತ.


ಭಾಗ್ಯಶ್ರೀ ಎಸ್‌., ಕುವೆಂಪು ವಿವಿ, ಶಿವಮೊಗ್ಗ

ಟಾಪ್ ನ್ಯೂಸ್

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.