Yugadi: ಯುಗಾದಿ
Team Udayavani, Apr 25, 2024, 11:31 AM IST
ಸಿಹಿ ಕಹಿಗಳೆರಡೂ ಜೀವನದಲ್ಲಿ ಸಮಾನವಾಗಿರಬೇಕು. ಯುಗಾದಿ ಅಥವಾ ಯುಗಾದಿ ಚೈತ್ರ ಮಾಸದ ಮೊದಲನೆಯ ದಿನವಾಗಿದೆ ಇದು ನಮ್ಮ ಭಾರತದ ಅನೇಕ ಕಡೆಗಳಲ್ಲಿ ಈ ದಿನವನ್ನು ಹೊಸ ವರ್ಷದ ಮೊದಲನೆಯ ದಿನವೆಂದು ಹೇಳುತ್ತಾರೆ.
ಈ ಒಂದು ಹಬ್ಬವನ್ನು ಹೆಚ್ಚಾಗಿ ಕರ್ನಾಟಕ ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುತ್ತಾರೆ. ಹುಣಸೆ ಹಣ್ಣು ಬೆಲ್ಲ ಮಾವಿನಕಾಯಿ ಉಪ್ಪು ಮೆಣಸು ಬೇವು ಇತ್ಯಾದಿಗಳನ್ನ ಬಳಸಿಕೊಂಡು ಕೆಲವೊಂದು ತಿಂಡಿ ತಿನಿಸುಗಳನ್ನ ಮಾಡುತ್ತಾರೆ.
ಬೆಳಗ್ಗೆ ಎದ್ದು ತಳಿರು ತೋರಣವನ್ನು ಮನೆಯ ಬಾಗಿಲಿಗೆ ದೇವರ ಮನೆಯ ಬಾಗಿಲಿಗೆ ಕಟ್ಟುತ್ತಾರೆ. ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಗಳನ್ನು ಹಾಕುತ್ತಾರೆ. ನಂತರ ಎಣ್ಣೆ ಸೀಗೆಕಾಯಿಂದ ತಲೆಯನ್ನು ತೊಳೆದುಕೊಂಡು ಕೆಲವೊಂದು ಪುಣ್ಯಹ ಮಂತ್ರವನ್ನು ಹೇಳಿಕೊಳ್ಳುತ್ತಾ ಮಾವಿನ ಎಲೆಯಿಂದ ಮನೆಯ ಎಲ್ಲಾ ಕಡೆ ಕಳಸದ ನೀರನ್ನ ಹಾಕುತ್ತಾರೆ ನಂತರ ಸ್ನಾನ ಮಾಡಿ ಹೊಸ ಬಟ್ಟೆಯನ್ನ ಧರಿಸಿಕೊಂಡು ಪಂಚಾಂಗವನ್ನು ಮನೆಯ ಹಿರಿಯರು ಎಲ್ಲರೂ ಓದುತ್ತಾರೆ.
ಹಬ್ಬದ ದಿನ ವಿಶೇಷ ತಿಂಡಿಗಳನ್ನು ಮಾಡುವುದರ ಜೊತೆಗೆ ಒಬ್ಬಟ್ಟು ಹೋಳಿಗೆ ಅದರಲ್ಲಿಯೂ ಕಡಲೆ ಅಥವಾ ತೊಗರಿ ಬೆಳೆಯ ಹೂರಣದಲ್ಲಿ ಮಾಡುತ್ತಾರೆ. ವಿಶೇಷವಾಗಿ ಯುಗಾದಿಯ ದಿನದ ಸಂಕೇತವಾಗಿ ಬೇವುಬೆಲ್ಲವನ್ನು ಸ್ವೀಕರಿಸುತ್ತಾರೆ. ಬೇವು ಕಷ್ಟದ ಸಂಕೇತವನ್ನು ಮತ್ತು ಬೆಲ್ಲವನ್ನು ಸಿಹಿಯ ವಿಚಾರವನ್ನು ಎರಡನ್ನು ಒಟ್ಟಿಗೆ ಬೆರಸಿ ಸಮಾನವಾಗಿ ಸ್ವೀಕರಿಸಬೇಕೆನ್ನುವದು ಇದರ ಉದ್ದೇಶವಾಗಿದೆ.
ಪ್ರಮುಖವಾಗಿ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕ್ಕೆ ಹೊಸ ಹರುಷಕೆ ಹೊಸತು ಹೊಸತು ತರುತಿದೆ ಎನ್ನುವ ರೀತಿಯಲ್ಲಿ ಹಾಡಿನ ಮೂಲಕ ಮನೆಯ ಕೆಲವೊಂದು ಕೃಷಿಗೆ ಸಂಬಂಧಪಟ್ಟ ವಸ್ತುಗಳಿಗೆ ಪೂಜೆಯನ್ನು ಮಾಡುತ್ತಾರೆ. ಯುಗಾದಿ ಎಂದರೆ ಯುಗ +ಆದಿ ಅಂದ್ರೆ ಹೊಸ ಯುಗದ ಆರಂಭ ಅಂತ.
ಮುಖ್ಯವಾಗಿ ಬೇವು ಬೆಲ್ಲನೆ ಯಾಕೆ ಕೊಡ್ತಾರೆ ಗೊತ್ತಾ ಜೀವನದ ಸಿಹಿಕಹಿ ಗಳೆರಡನ್ನು ಪಡೆಯಬೇಕೆಂದು ಮತ್ತು ಅವುಗಳನ್ನು ನೆನಪಿಸಿಕೊಳ್ಳಲು ಬೇವು ಬೆಲ್ಲನ ಬೆಲ್ಲಗಳನ್ ಬೇವು ಬೆಲ್ಲಗಳ ಮಿಶ್ರಣವನ್ನು ಮಾಡಲಾಗುತ್ತದೆ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು, ಕಷ್ಟಾನು ಸುಖಾನು ಇರೋವಷ್ಟು ದಿನ ಎಲ್ಲವನ್ನು ಸಮಾನವಾಗಿ ಹಂಚಿಕೊಂಡು ಬಾಳ್ಳೋಣ.
-ಪ್ರಿಯಾ
ಎಂ.ಜಿ.ಎಂ. ಕಾಲೇಜು ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
ಅರವಿಂದ್ ಕೇಜ್ರಿವಾಲ್ಗೆ ಮಧ್ಯಂತರ ಜಾಮೀನು? ಸುಪ್ರೀಂ ಸುಳಿವು
ಬಿಗ್ಬಾಸ್ ವಿಜೇತ ಎಲ್ವಿಶ್ ಯಾದವ್ ವಿರುದ್ಧ ಅಕ್ರಮ ವರ್ಗಾವಣೆ ಕೇಸ್ ದಾಖಲಿಸಿದ ಇ.ಡಿ
T20 World Cup; ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್ ಕೆಂಜಿಗೆಗೆ ಸ್ಥಾನ
Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್ ಏಕಾಂಗಿ ಫೈಟ್