ಆನೆಗುಡ್ಡೆ ಶ್ರೀವಿನಾಯಕ ದೇಗುಲ: ಹರಿದು ಬಂದ ಭಕ್ತ ಸಮೂಹ
Team Udayavani, Jul 6, 2021, 3:00 PM IST
ತೆಕ್ಕಟ್ಟೆ: ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೆ ಜು.6 ಮಂಗಳವಾರದಂದು ಮುಂಜಾನೆಯಿಂದಲೇ ಭಕ್ತ ಸಮೂಹ ಹರಿದು ಬಂದಿದ್ದು, ದೇವರ ದರ್ಶನ ಪಡೆದು ಪುನೀತರಾದರು.
ಕೋವಿಡ್ ೧೯ರ ನಿಯಂತ್ರಣ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ಭಕ್ತಾಧಿಗಳಿಗೆ ಜು.5 ರ ಬೆಳಗ್ಗೆ ಗಂಟೆ 6 ರಿಂದ 12:30 ರ ವರೆಗೆ ಹಾಗೂ ಮಧ್ಯಾಹ್ನ ಗಂಟೆ ೩.೩೦ ರಿಂದ ಸಂಜೆ ಗಂಟೆ 7.30 ರ ವರೆಗೆ ದೇವಳ ಪ್ರವೇಶ, ದೇವರ ದರ್ಶನಕ್ಕೆ ಮಾತ್ರ ಸೀಮಿತ ಗೊಳಿಸಿದೆ. ಯಾವುದೇ ಸೇವೆ ಸಂಕಲ್ಪಗಳು ಹಣ್ಣುಕಾಯಿ ಸೇವೆ ಹಾಗೂ ಪ್ರಸಾದ ಇರಲಿಲ್ಲ.