ದ್ವಾರಕಾಮಯಿ ಶ್ರೀ ಸಾಯಿಬಾಬಾ ಮಂದಿರದಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೌರವ ಅರ್ಪಣೆ | Udayavani
Team Udayavani, Apr 21, 2020, 2:14 PM IST
ಕಟಪಾಡಿ,;ಶಂಕರಪುರದ ದ್ವಾರಕಾಮಯಿ ಶ್ರೀ ಸಾಯಿಬಾಬಾ ಮಂದಿರದಲ್ಲಿ ಕುರ್ಕಾಲು, ಮೂಡಬೆಟ್ಟು, ಏಣಗುಡ್ಡೆ, ಗ್ರಾಮಗಳ 10ಆಶಾ ಕಾರ್ಯಕರ್ತೆಯರಿಗೆ ಅರಿಶಿನ, ಕುಂಕುಮ, ಶಾಲು ಹೊದಿಸಿ, ಆಹಾರದ ಕಿಟ್ ನೀಡಿ ಗೌರವಾರ್ಪಣೆ ಮತ್ತು ದಿನಬಳಕೆಯ ಸಾಮಾಗ್ರಿಗಳನ್ನು ನೀಡಲಾಯಿತು. “ಕರೋನಾ ವೈರಸ್ ಹರಡುವ ಬಗ್ಗೆ ಗ್ರಾಮದ ಪ್ರತಿ ಮನೆಗಳಿಗೆ ಬೇಟಿ ನೀಡಿ ಜಾಗ್ರತಿ ಮೂಡಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ನಮ್ಮ ಮಂದಿರದಿಂದ ಗೌರವ ಅರ್ಪಣೆ ಮಾಡುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸುವ ಅವಕಾಶ ಇದಾಗಿದೆ” ಎಂಗು ಗುರೂಜಿ ಸಾಯಿಈಶ್ವರ್ ಈ ಸಂದರ್ಭದಲ್ಲಿ ಉದಯವಾಣಿಗೆ ತಿಳಿಸಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಸ್ಮೀತಾ ಪ್ರವೀನ್, ಗ್ರಾ.ಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯರು ಅಶೋಕ್ ರಾವ್ , ಟ್ರಸ್ಟ್ ಅಧ್ಯಕ್ಷ ವಿಶ್ವನಾಥ ಸುವರ್ಣ, ಶಿಕ್ಷಕ ಅಮೊಕೋಂಡ, ವಿಜಯ್ ಕುಂದರ್ ಸತೀಶ್ ದೇವಾಡಿಗ, ಕಿಶೋರ್ ಕುಮಾರ್, ಅಮಿತ್ ಬಜಪೆ ಉಪಸ್ಥಿತರಿದ್ದರು.