ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವಕ್ಕೆ ತಿರಂಗ ಬಣ್ಣದಲ್ಲಿ “ಧೋಕ್ಲಾ” ತಯಾರಿಸಿ

ಮೊಸರಿನ ಜೊತೆಗೆ ನೀರನ್ನು ಬೆರಸದೇ ಚೆನ್ನಾಗಿ ಹದಮಾಡಿಕೊಳ್ಳಬೇಕು

ಶ್ರೀರಾಮ್ ನಾಯಕ್, Aug 5, 2022, 6:00 PM IST

web exclusive sri ram

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ನೀವು ಮನೆಯಲ್ಲಿಯೂ ತಿರಂಗ ಥೀಮ್ ನಲ್ಲಿ ಖಾದ್ಯಗಳನ್ನು ಮಾಡಿ ಸವಿಯಬಹುದು ಅದುವೇ “ಧೋಕ್ಲಾ” ರೆಸಿಪಿ. ಇದು ಗುಜರಾತಿನ ಜನಪ್ರಿಯ ತಿನಿಸಾಗಿದೆ. ಇದು ಸಿಹಿ ಮತ್ತು ಹುಳಿ ಮಿಶ್ರಣ ಇರುವುದರಿಂದ ಮಕ್ಕಳಿಗೆ ಇದು ಬಹಳ ಇಷ್ಟ ಪಡುವ ತಿಂಡಿಯಾಗಿದೆ . ಅದು ಮಾತ್ರವಲ್ಲದೇ  ಆರೋಗ್ಯಕ್ಕೂ ಒಳ್ಳೆಯದು . ನಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಇದು ಸಹಕಾರಿಯಾಗುತ್ತದೆ . ಈ ರೆಸಿಪಿ ತುಂಬಾನೇ ಸಿಂಪಲ್ ಕೂಡ ಆಗಿದೆ . ನೀವು ಇದನ್ನು ಮನೆಯಲ್ಲಿ  ಟ್ರೈ ಮಾಡಿ .

ಬೇಕಾಗುವ ಸಾಮಗ್ರಿಗಳು
ಬೊಂಬೈ ರವೆ 2 ಕಪ್ ,ಮೊಸರು 1/4 ಕಪ್ ,ಸಕ್ಕರೆ 1 ಚಮಚ ,ಎಣ್ಣೆ 4 ಚಮಚ ,ಕ್ಯಾರೆಟ್ 1 ,ಪಾಲಕ್ 1 ಕಟ್ಟು ,ಬೇಕಿಂಗ್ ಸೋಡಾ (ಅಡುಗೆ ಸೋಡಾ)1/4 ಟೀ . ಚಮಚ ,ರುಚ್ಚಿಗೆ ತಕ್ಕಷ್ಟು .

ಒಗ್ಗರಣೆಗೆ :ಸಾಸಿವೆ ,ಕರಿಬೇವು ,ಹಸಿಮೆಣಸು ,ಎಣ್ಣೆ

ತಯಾರಿಸುವ ವಿಧಾನ
ಕ್ಯಾರೆಟ್ ಜ್ಯೂಸ್ : ಒಂದು ಕ್ಯಾರೆಟ್ ನ್ನು ತೊಳೆದು ಸಣ್ಣಗೆ ಕಟ್ ಮಾಡಿ ಮಿಕ್ಸ್ ಜಾರಿಗೆ ಹಾಕಿ ಸ್ವಲ್ಪ ನೀರನ್ನು  ಹಾಕಿ ಜ್ಯೂಸ್ ಮಾಡಿ ಇಟ್ಟುಕೊಳ್ಳಿ.

ಪಾಲಕ್ ಜ್ಯೂಸ್ : ಒಂದು ಕಟ್ ಪಾಲಕ್ ತೊಳೆದು ಸಣ್ಣಗೆ ಕಟ್ ಮಾಡಿ ಮಿಕ್ಸ್ ಜಾರಿಗೆ ಹಾಕಿ ಸ್ವಲ್ಪ ನೀರನ್ನು  ಹಾಕಿ ಜ್ಯೂಸ್ ಮಾಡಿ ಇಟ್ಟುಕೊಳ್ಳಿ.

ಮೊದಲಿಗೆ ದೊಡ್ಡ ಮಿಶ್ರಣ ಬೌಲ್ ನಲ್ಲಿ ರವೆ ಮತ್ತು ಮೊಸರಿನ ಜೊತೆಗೆ ನೀರನ್ನು ಬೆರಸದೇ ಚೆನ್ನಾಗಿ ಹದಮಾಡಿಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ,ಸಕ್ಕರೆ ,2 ಚಮಚ ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ಸುಮಾರು 15 ನಿಮಿಷಗಳ ಕಾಲ ಹಾಗೇ ಬಿಡಿ . 15 ನಿಮಿಷಗಳ ಬಳಿಕ ಒಂದು ಕಪ್ ನೀರನ್ನು ಹಾಕಿ ಮಿಕ್ಸ್ ಮಾಡಿ 3 ಸಣ್ಣ ಬೌಲ್ ಗೆ ಸಮನಾಗಿ ಪಾಲು ಮಾಡಿಕೊಳ್ಳಿ . ನಂತರ ವಿಂಗಡಿಸಿದ 3 ಬೌಲ್ ನಲ್ಲಿ 1 ಬೌಲ್ ನ್ನು ತೆಗೆದುಕೊಂಡು ಅದಕ್ಕೆ ಮಾಡಿದ  ಕ್ಯಾರೆಟ್ ಜ್ಯೂಸ್  ಹಾಕಿ ಬೇಕಿಂಗ್ ಸೋಡಾವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ . ತದನಂತರ ಒಂದು ಕಂಟೇನರ್ ಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಸುತ್ತ ಸವರಿಕೊಳ್ಳಬೇಕು . ನಂತರ ಮಿಕ್ಸ್ ಮಾಡಿದ ಕ್ಯಾರೆಟ್ ಮಿಶ್ರಣ ವನ್ನು ಹಾಕಿ ಸುಮಾರು 10 ನಿಮಿಷಗಳ ಕಾಲ ಸ್ಟೀಮ್ (ಬೇಯಿಸುವುದು)ಮಾಡಿಕೊಳ್ಳಿ.

ಉಳಿದ ಎರಡು ಬೌಲ್ ಗಳಲ್ಲಿ ಒಂದನ್ನು ತೆಗೆದುಕೊಂಡು  ಅದಕ್ಕೆ ಬೇಕಿಂಗ್ ಸೋಡಾವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬೇಯಿಸಿಟ್ಟ ಕ್ಯಾರೆಟ್ ಮಿಶ್ರಣದ ಮೇಲೆಯೇ ಇದನ್ನು ಹಾಕಿ ಪುನಃ ಸುಮಾರು 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ  ಬೇಯಿಸಿರಿ. ನಂತರ ಉಳಿದ ಒಂದು ಪ್ರಮಾಣದ ಬೌಲ್ ನ ಮಿಶ್ರಣಕ್ಕೆ ಪಾಲಕ್ ಜ್ಯೂಸ್ ಅನ್ನು ಹಾಕಿ ಅದಕ್ಕೆ ಅಡುಗೆ ಸೋಡಾವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಬೇಯಿಸಿಟ್ಟ  ಎರಡು ಮಿಶ್ರಣಗಳ ಮೇಲೆಯೇ ಪಾಲಕ್ ಮಿಶ್ರಣವನ್ನು ಹಾಕಿ ಪುನಃ ಕಡಿಮೆ ಉರಿ ಅಲ್ಲಿ 10 ನಿಮಿಷ ಗಳ ಕಾಲ ಬೇಯಿಸಿರಿ. ನಂತರ ಧೋಕ್ಲಾವನ್ನು ತಣ್ಣಗಾಗಿಸಿದ ನಂತರ ತೆಗೆಯಿರಿ. ಅದಕ್ಕೆ ಎಣ್ಣೆ ಸಾಸಿವೆ, ಕರಿಬೇವು ಮತ್ತು ಹಸಿಮೆಣಸನ್ನು ಹಾಕಿ ಒಗ್ಗರಣೆ  ಹಾಕಿ ಅಲಂಕರಿಸಿರಿ .ನಂತರ ಧೋಕ್ಲಾ ವನ್ನು ನಿಮಗೆ ಬೇಕಾಗುವ ಆಕಾರಕ್ಕೆ ಕತ್ತರಿಸಿ. ಇದನ್ನು  ಹಸಿರು ಚಟ್ನಿಯೊಂದಿಗೆ ಸವಿಯಲು ರುಚಿಕರ.

*ಶ್ರೀರಾಮ್ ನಾಯಕ್

ಟಾಪ್ ನ್ಯೂಸ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.