ಅಪಘಾತ ತಂದ ಆಪತ್ತು! ಮೆಡಿಕಲ್ ರೆಪ್ ಆಗಿದ್ದ ಜಗದಿ ಕಾಮಿಡಿ ಕಿಂಗ್ ಆಗಿದ್ದೇ ರೋಚಕ…
ಒಂದು ತಿಂಗಳ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲೂರ್ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಿದ್ದರು.
ನಾಗೇಂದ್ರ ತ್ರಾಸಿ, May 23, 2020, 8:34 PM IST
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್ ಹಾಗೂ ನರಸಿಂಹರಾಜು ಅದ್ಭುತ ಜೋಡಿಯಾಗಿತ್ತು. ಅದರಲ್ಲಿಯೂ ನರಸಿಂಹರಾಜು, ಬಾಲಣ್ಣ ಇದ್ದರಂತೂ ಸಿನಿಮಾ ಯಶಸ್ಸಿನ ಮೆಟ್ಟಿಲೇರುತ್ತಿತ್ತು. ಅದೇ ರೀತಿ ಮಲಯಾಳಂ ಚಿತ್ರರಂಗದಲ್ಲಿ ತನ್ನ ಹಾಸ್ಯದ ಮೂಲಕವೇ ಮನೆಮಾತಾದವರು ಅಂಬಲಿಯೇಟಾ ಅಲಿಯಾಸ್ ಜಗದಿ ಶ್ರೀಕುಮಾರ್!
ಬಹುಶಃ ಮಲಯಾಳಂ ಸಿನಿಮಾ ಪ್ರೇಮಿಗಳಿಗೆ ಜಗದಿಯ ಹಾಸ್ಯ ನಟನೆ ನೆನಪಿಸಿಕೊಂಡರೆ ನಗು ಬರದಿರಲು ಸಾಧ್ಯವೇ ಇಲ್ಲ. ನನ್ನ ತಂದೆಯೇ ನನಗೆ ಹೀರೋ ಎಂದು ಜಗದಿ ಹೇಳಿದ್ದರು. ಅವರ ತಂದೆ ನಾಟಕಕಾರ, ಬರಹಗಾರ ಜಗದಿ ಎನ್ ಕೆ ಆಚಾರ್ಯ. ತಾಯಿ ಪ್ರಸನ್ನಾ. ಹೀಗೆ ತ್ರಿವೆಂಡ್ರಮ್ ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಕಲಿತಿದ್ದ ಜಗದಿ ನಂತರ ಸಸ್ಯವಿಜ್ಞಾನ(ಬಾಟನಿ)ದಲ್ಲಿ ಪದವಿ ಪಡೆದಿದ್ದರು.
ಮೆಡಿಕಲ್ ರೆಪ್ ಆಗಿದ್ದ ಜಗದಿ ನಂತರ ಚಿತ್ರರಂಗಕ್ಕೆ ಎಂಟ್ರಿ…
ಪ್ರಾಥಮಿಕ ವಿದ್ಯಾಭ್ಯಾಸದ ಸಂದರ್ಭದಲ್ಲಿಯೇ ತಂದೆಯ ನಾಟಕಗಳಲ್ಲಿ ಜಗದಿ ಅಭಿನಯಿಸುತ್ತಿದ್ದರು. 5ನೇ ತರಗತಿಯಲ್ಲಿದ್ದಾಗಲೇ ಜಗದಿ ನಾಟಕದಲ್ಲಿ ನಟನೆಯ ಅವಕಾಶ ಪಡೆದಿದ್ದರು. ತ್ರಿವೆಂಡ್ರಮ್ ನಲ್ಲಿ ಕಾಲೇಜು ವಿದ್ಯಾಭ್ಯಾಸ ಪಡೆದ ನಂತರ ಜಗದಿ ಕೆಲ ಕಾಲ ಮೆಡಿಕಲ್ ರೆಪ್ರಸೆನ್ ಟೇಟಿವ್ ಆಗಿ ಕಾರ್ಯ ನಿರ್ವಹಿಸಿದ್ದರು. 1975ರಲ್ಲಿ ಜೆ.ಶಶಿಕುಮಾರ್ ನಿರ್ದೇಶನದ ಚಟ್ಟಾಂಬಿಕಾಕಲ್ಯಾಣಿ ಸಿನಿಮಾದಲ್ಲಿ ನಟಿಸುವ ಮೂಲಕ ಜಗದಿ ಬೆಳ್ಳಿತೆರೆಗೆ ಕಾಲಿರಿಸಿದ್ದರು. ಹೀಗೆ ಮಲಯಾಳಂ ಸಿನಿಮಾದಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡ ಜಗದಿ ಆ ನಂತರ ತಮ್ಮ ಸಿನಿ ಜೀವನದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲಾ…ಬರೋಬ್ಬರಿ ಒಂದು ಸಾವಿರಕ್ಕೂ ಅಧಿಕ ಸಿನಿಮಾಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ಲಕ್ಷಾಂತರ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದು ಜಗದಿ!
ಭೀಕರ ಅಪಘಾತ ಜಗದಿ ಬದುಕನ್ನೇ ಕಂಗೆಡಿಸಿಬಿಟ್ಟಿತ್ತು:
2012ರ ಮಾರ್ಚ್ 10ರಂದು ನಿರ್ದೇಶಕ ಲೆನಿನ್ ರಾಜೇಂದ್ರನ್ ಅವರ ಈಡವುಪತಿ ಸಿನಿಮಾದ ಚಿತ್ರೀಕರಣಕ್ಕಾಗಿ ಮಲಪ್ಪುರಂನಿಂದ ತೆರಳಿದ್ದ ವೇಳೆ ಕ್ಯಾಲಿಕಟ್ ಸಮೀಪ ರಸ್ತೆ ಅಪಘಾತ ಸಂಭವಿಸಿತ್ತು. ಕೂಡಲೇ ಅವರನ್ನು ಕ್ಯಾಲಿಕಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ತಿಂಗಳ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲೂರ್ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಿದ್ದರು. ಅಲ್ಲಿ ಜಗದಿ ಅವರಿಗೆ ಹಲವಾರು ಶಸ್ತ್ರಚಿಕಿತ್ಸೆ ನೆರವೇರಿಸಲಾಗಿತ್ತು. ಹೀಗೆ ಬರೋಬ್ಬರಿ ಒಂದು ವರ್ಷಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದರು. 2013ರಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಜಗದಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲವಾಗಿತ್ತು. ತನ್ನ ಅದ್ಭುತ ನಟನೆಯ ಮೂಲಕ ಸಾವಿರಾರು ಜನರನ್ನು ನಗಿಸುತ್ತಿದ್ದ ಜಗದಿಯ ಸ್ಥಿತಿ ನೋಡಿ ಅಪಾರ ಅಭಿಮಾನಿಗಳು ಕಣ್ಣೀರು ಹಾಕಿದ್ದರು. ಅವರ ಆರೋಗ್ಯ ಚೇತರಿಕೆಯಾಗಿ, ಮೊದಲಿನಂತೆ ಅಭಿನಯಿಸುವಂತಾಗಲಿ ಎಂದು ಅಭಿಮಾನಿಗಳು ಹರಕೆ, ಪೂಜೆ, ಪುನಸ್ಕಾರ ಸಲ್ಲಿಸಿದ್ದರು. 2014ರಲ್ಲಿ ಮತ್ತೆ ಜಗದಿ ಆಸ್ಪತ್ರೆ ಪಾಲಾಗಿದ್ದರು.
ಮೂರು ವರ್ಷದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಮುಚ್ಚಿಟ್ಟ ಸತ್ಯ ಬಹಿರಂಗಗೊಳಿಸಿದ್ದರು!
1974ರಲ್ಲಿ ಜಗದಿ ಮಲ್ಲಿಕಾ ಸುಕುಮಾರನ್ ಅವರನ್ನು ವಿವಾಹವಾಗಿದ್ದರು. 1976ರಲ್ಲಿ ಇಬ್ಬರು ವಿವಾಹ ವಿಚ್ಛೇದನ ಪಡೆದಿದ್ದರು. ನಂತರ ಜಗದಿ ಶೋಭಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಪುತ್ರ ರಾಜ್ ಕುಮಾರ್, ಪುತ್ರಿ ಪಾರ್ವತಿ ಸೇರಿ ಇಬ್ಬರು ಮಕ್ಕಳು. ಏತನ್ಮಧ್ಯೆ ಹಲವು ವರ್ಷಗಳಿಂದ ಅಂತೆ, ಕಂತೆ ಹರಿದಾಡುತ್ತಿತ್ತು. ಜಗದಿ ಅವರು ಗುಟ್ಟಾಗಿ ಮತ್ತೊಂದು ವಿವಾಹವಾಗಿದ್ದು, ಅವರಿಗೆ ಬೇಕಾದ ಎಲ್ಲಾ ರೀತಿಯ ಆರ್ಥಿಕ ನೆರವು ನೀಡುತ್ತಿದ್ದಾರೆ ಎಂಬುದು. ಆದರೆ ಇದ್ಯಾವುದಕ್ಕೂ ಅಧಿಕೃತ ಮಾನ್ಯತೆ ಇರಲಿಲ್ಲವಾಗಿತ್ತು.
ಆದರೆ ಅಪಘಾತವಾಗಿ ಮೂರು ವರ್ಷಗಳ ಕಾಲ ಹೋರಾಟ ನಡೆಸಿ ಚೇತರಿಕೆ ಕಂಡ ನಂತರ ಕೊಟ್ಟಾಯಂನಲ್ಲಿ ಒಂದು ಸಮಾರಂಭವನ್ನು ಆಯೋಜಿಸಲಾಗಿತ್ತು. ಅಲ್ಲಿ ಜಗದಿಯನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜಗದಿ ಅವರನ್ನು ವೀಲ್ ಚೇರ್ ಮೂಲಕ ಡಯಾಸ್ ಗೆ ಕರೆತಂದಾಗ ಒಬ್ಬಳು ಯುವತಿ ದಿಢೀರನೆ ವೇದಿಕೆ ಮೇಲೆ ಬಂದು ಜಗದಿ ಅವರನ್ನು ಅಪ್ಪಿ ಮುದ್ದಾಡಿದ್ದಳು. ಈ ವಿಚಾರದಲ್ಲಿ ಜಗದಿ ದೊಡ್ಡ ಮಗಳು ದೊಡ್ಡ ರಂಪಾಟ ನಡೆಸಿಬಿಟ್ಟಿದ್ದಳು. ಆದರೆ ಈ ಸಮಾರಂಭದಲ್ಲಿಯೇ ಜಗದಿ ಆಕೆ ತನ್ನ ಮಗಳು ಎಂಬುದನ್ನು ಬಹಿರಂಗಪಡಿಸಿದ್ದರು. ಹೌದು ಶ್ರೀಲಕ್ಷ್ಮಿ ನನ್ನ ಮಗಳು ಎಂದು ಹೇಳುವ ಮೂಲಕ ಎಲ್ಲಾ ಅನುಮಾನಗಳಿಗೂ ತೆರ ಎಳೆದಿದ್ದರು.
ಶೋಭಾ ಅವರನ್ನು ವಿವಾಹವಾಗಿದ್ದ ನಂತರ ಜಗದಿ ಅವರು ಜ್ಯೂನಿಯರ್ ನಟಿ ಕಲಾ ಅವರನ್ನು ಗುಟ್ಟಾಗಿ ವಿವಾಹವಾಗಿದ್ದು, ಆಕೆಯ ಮಗಳೇ ಶ್ರೀಲಕ್ಷ್ಮಿ. ಆದರೆ ಎಷ್ಟೋ ವರ್ಷಗಳವರೆಗೆ ಈ ವಿಷಯ ಬಹಿರಂಗವಾಗಿರಲಿಲ್ಲವಾಗಿತ್ತು. ಹೀಗೆ ಜೀವನದಲ್ಲಿ ಹಲವಾರು ತಿರುವುಗಳನ್ನು ಕಂಡಿದ್ದ ಜಗದಿ ಶ್ರೀಕುಮಾರ್ ಅಪಘಾತವಾಗಿ ಸುಮಾರು ಏಳು ವರ್ಷಗಳ ಬಳಿಕ 2019ರಲ್ಲಿ ಜಗದಿ ಶ್ರೀಕುಮಾರ್ ಎಂಟರ್ ಟೈನ್ ಮೆಂಟ್ ಬ್ಯಾನರ್ ಅಡಿ ಪ್ರೇಕ್ಷಕರನ್ನು ನಗಿಸುವ ಕಾಯಕ ಮುಂದುವರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sidhu Moosewala: ಗಂಡು ಮಗುವಿಗೆ ಜನ್ಮ ನೀಡಿದ ಸಿಧು ಮೊಸೆವಾಲ ತಾಯಿ
Box office: ಸಿದ್ದಾರ್ಥ್ ʼಯೋಧʼ ಎದುರು ಸದ್ದು ಮಾಡದ ಅದಾ ಶರ್ಮಾ ʼಬಸ್ತಾರ್ʼ
“ದೊಡ್ಡ ಸೌತ್ ಸಿನಿಮಾ ಮಾಡುತ್ತಿದ್ದೇನೆ” ಎಂದ ಕರೀನಾ: ಯಶ್ ಜೊತೆ ಬೇಬೋ ನಟಿಸೋದು ಪಕ್ಕಾ?
ಸಟ್ಟೇರುವ ಮುನ್ನವೇ ಬಹುಕೋಟಿ ʼರಾಮಾಯಣʼಕ್ಕೆ ಸಂಕಷ್ಟ: ನಿರ್ಮಾಣದಿಂದ ಹಿಂದೆ ಸರಿದ ನಿರ್ಮಾಪಕ
ನಿಜಕ್ಕೂ ಅಮಿತಾಬ್ ಬಚ್ಚನ್ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿದ್ರಾ? ಬಿಗ್ ಬಿ ಹೇಳಿದ್ದೇನು
MUST WATCH
ಹೊಸ ಸೇರ್ಪಡೆ
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!
Pan India: ಯಶ್ ʼಟಾಕ್ಸಿಕ್ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್