ಪೋಷಕರೇ ನಿರೀಕ್ಷಿಸದ ಸಾಧನೆ; ಈಕೆ ಪ್ರಥಮ ಪ್ರಯತ್ನದಲ್ಲೇ ಯುಪಿಎಸ್ ಪರೀಕ್ಷೆ ತೇರ್ಗಡೆ
ಸೃಷ್ಟಿ ಅದಕ್ಕಾಗಿ ಮೀಸಲಿಟ್ಟದ್ದು ತಮ್ಮ ಜೀವನದ ಅಮೂಲ್ಯ 2 ವರ್ಷಗಳನ್ನು
Team Udayavani, Sep 21, 2021, 3:49 PM IST
ಲಕ್ಷ ಮಂದಿ ಬರೆಯುವ ಯುಪಿಎಸ್ ಪರೀಕ್ಷೆಯನ್ನು ಒಂದೇ ಪ್ರಯತ್ನದಲ್ಲಿ ತೇರ್ಗಡೆಯಾಗುವುದು ಕನಸಿನ ಮಾತು ಎಂಬ ಮಾತನ್ನು ಕೇಳುತ್ತಲೇ ಬೆಳೆದವಳು ಆಕೆ. ಆದರೆ ಮನಸ್ಸು ಧನಾತ್ಮಕ ಯೋಚನೆಯನ್ನು ಮಾತ್ರ ತೆಗೆದುಕೊಳ್ಳುವ ನಿರ್ಧಾರವನ್ನು ಮಾಡಿದ್ದರಿಂದ ಆ ಮಾತುಗಳೆಲ್ಲ ಗಾಳಿಯಲ್ಲೇ ತೇಲಿ ಹೋದವು. ಆ ಮಾತುಗಳೆಲ್ಲ ಸುಳ್ಳೆಂಬಂತೆ ಆಕೆ ಮೊದಲ ಪ್ರಯತ್ನದಲ್ಲೇ ಯುಪಿಎಸ್ ಪರೀಕ್ಷೆಯನ್ನು ತೇರ್ಗಡೆಯಾದಳು. ಅದೂ 5 ನೇ ರ್ಯಾಂಕ್ನೊಂದಿಗೆ. ಸಾಧನೆಗೆ ಪ್ರಯತ್ನ ಮತ್ತು ಏಕಾಗ್ರತೆ ಮಾತ್ರ ಮುಖ್ಯ ಎಂಬುದನ್ನು ಅವಳು ನಿರೂಪಿಸಿದ್ದಳು.
ಆಕೆಯ ಹೆಸರು ಸೃಷ್ಟಿ ದೇಶ್ಮುಖ್. ರಾಜಸ್ತಾನದ ಬೋಪಾಲ ಆಕೆಯ ಊರು. 2018ರ ಯುಪಿಎಸ್ ಫಲಿತಾಂಶ ಪ್ರಕಟವಾದಾಗ ಆಕೆಗೆ 23 ವಯಸ್ಸು. ಚಂಚಲ ಮನಸ್ಸಿನ ಜತೆ ಓಲಾಡುವ ಯುವ ಜನತೆಗೆ ಆಕೆ ಮಾದರಿ. ಪಡೆದದ್ದು ದೇಶದಲ್ಲಿ ಐದನೇ ರ್ಯಾಂಕ್. ಹೆತ್ತವರೇ ನಿರೀಕ್ಷಿಸದ ಸಾಧನೆಯದು. ಐಐಟಿ ಯ ಎಂಟ್ರೆನ್ಸ್ ಪರೀಕ್ಷೆಯನ್ನು ಪಾಸಾಗದ ಹುಡುಗಿ ಐಎಎಸ್ ಪರೀಕ್ಷೆಯಲ್ಲಿ 5 ನೇ ರ್ಯಾಂಕ್ ಪಡೆದಳೆಂದರೆ ನಂಬುವುದು ಕಷ್ಟವೇ. ಆದರೆ ಸಾಧನೆಗೆ ಯಾವುದೇ ಹಂಗಿಲ್ಲ.
ಬಾಲ್ಯದ ಕನಸು
ಐಎಎಸ್ ಅಧಿಕಾರಿ ಆಗಬೇಕೆಂಬು ಆಕೆಯ ಬಾಲ್ಯದ ಕನಸು. ಎಲ್ಲ ಮಕ್ಕಳು ತಮ್ಮ ಆಟದಲ್ಲಿ ನಿರತರಾಗಿದ್ದರೆ ಸೃಷ್ಟಿ ಮಾತ್ರ ಓದುತ್ತಿದ್ದಳು. ಕೇಳಿದರೆ ನಾನು ಐಎಎಸ್ ಅಧಿಕಾರಿ ಆಗಬೇಕೆನ್ನುತ್ತಿದ್ದಳು ಎಂಬುದನ್ನು ಆಕೆಯ ತಾಯಿ ನೆನಪಿಸಿಕೊಳ್ಳುತ್ತಾರೆ. ಇಂಜಿನಿಯರಿಂಗ್ ಪದವಿ ಮುಗಿಸಿದ ಬಳಿಕ ಐಎಎಸ್ ತರಬೇತಿಗೆ ಸೇರ್ಪಡೆಗೊಂಡ ಸೃಷ್ಟಿ ಅದಕ್ಕಾಗಿ ಮೀಸಲಿಟ್ಟದ್ದು ತಮ್ಮ ಜೀವನದ ಅಮೂಲ್ಯ 2 ವರ್ಷಗಳನ್ನು. ದಿನದ ಐದಾರು ಗಂಟೆಗಳನ್ನು ಕೇವಲ ಓದಿಗಾಗಿ ಮೀಸಲಿಡುತ್ತಿದ್ದರು. ಸ್ತ್ರೀ ಸಶಕ್ತೀಕರಣದ ಕುರಿತು ಒಂದಷ್ಟು ಯೋಜನೆಗಳನ್ನು ರೂಪಿಸಿಕೊಂಡಿದ್ದ ಸೃಷ್ಟಿಗೆ ಅದನ್ನು ಕಾರ್ಯ ರೂಪಕ್ಕೆ ತರಬೇಕಾದರೆ ಅಧಿಕಾರ ಬೇಕೆಂಬುದು ಸ್ಪಷ್ಟವಾಗಿತ್ತು. ಗುರಿ ಸ್ಪಷ್ಟವಿದ್ದಾಗ ಯಾವುದೇ ಪರೀಕ್ಷೆಗಳೂ ಕಷ್ಟವಾಗುವುದಿಲ್ಲ.
ದಿನ ಪತ್ರಿಕೆಯೇ ಹೆಚ್ಚು ಸಹಾಯಕ
ದಿನ ಪತ್ರಿಕೆಯನ್ನು ದಿನಾ ಓದುತ್ತಿದ್ದೆ. ಜತೆಗೆ ಇದ ಸುದ್ದಿ ವಾಹಿನಿಗಳನ್ನೂ ವೀಕ್ಷಿಸುತ್ತಿದ್ದೆ. ಸಾಮಾಜಿಕ ಜಾಲತಾಣಗಳಿಂದ ಆದಷ್ಟು ದೂರವಿದ್ದರೆ ಸಾಧನೆಯ ಹಾದಿ ಸುಲಭ ಎನ್ನುತ್ತಾರೆ ಸೃಷ್ಟಿ. ಯುವ ಭಾರತ ಇಂದು ತಂತ್ರಜ್ಞಾನಗಳಿಗೆ ದಾಸರಾಗುತ್ತಿರುವ ಬಗ್ಗೆ ಆಕೆ ಖೇದ ವ್ಯಕ್ತ ಪಡಿಸುತ್ತಾರೆ. ತಂತ್ರಜ್ಞಾನಗಳನ್ನು ಉತ್ತಮ ಕೆಲಸಗಳಿಗೆ ಬಳಸಿಕೊಳ್ಳಬೇಕೆಂಬುದು ಸೃಷ್ಟಿಯ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Inheritance Tax: ಸ್ಯಾಮ್ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ