ಯಕ್ಷಗಾನ ಸಮ್ಮೇಳನದಲ್ಲಿ ಗಮನ ಸೆಳೆದ ”ಶಶಿಪ್ರಭೆ-ವೃಷಸೇನ-ರುಕ್ಮಾವತಿ”

ಬಯಲಾಟ ಕಲಾವಿದರಿಂದ ಮೇಳೈಸಿದ ಪೌರಾಣಿಕ ಕಥಾನಕಗಳು

ವಿಷ್ಣುದಾಸ್ ಪಾಟೀಲ್, Feb 15, 2023, 10:09 PM IST

1-sadsadsad

ಉಡುಪಿಯಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದಲ್ಲಿ ತೆಂಕು ,ಬಡಗು ತಿಟ್ಟು ಪ್ರಸಂಗಗಳ ಪ್ರದರ್ಶನಗಳು, ಗೋಷ್ಠಿಗಳು ಯಕ್ಷಗಾನ ಪ್ರೇಮಿಗಳ ಗಮನ ಸೆಳೆದವು. ಬಡಗುತಿಟ್ಟಿನ ಬಯಲಾಟ ಮೇಳಗಳ ಪ್ರತಿಭಾ ಸಂಪನ್ನ ಕಲಾವಿದರು ಪ್ರದರ್ಶಿಸಿದ ಶಶಿಪ್ರಭಾ ಪರಿಣಯ, ವೃಷಸೇನ ಕಾಳಗ ಮತ್ತು ರುಕ್ಮಾವತಿ ಕಲ್ಯಾಣ ಆಖ್ಯಾನಗಳು ಬಯಲಾಟದ ವಾತಾವರಣವನ್ನು ಸೃಷ್ಟಿ ಮಾಡಿತು.

ಶಶಿಪ್ರಭಾ ಪರಿಣಯದಲ್ಲಿ ಹಿರಿಯ ಅನುಭವಿ ಭಾಗವತ ಹೆರಂಜಾಲು ಗೋಪಾಲ ಗಾಣಿಗರು ಭಾಗವತರಾಗಿ, ದಿಗ್ಗಜ ಚಂಡೆ ವಾದಕ ಮಂದಾರ್ತಿ ರಾಮಕೃಷ್ಣ ಅವರು ಅತ್ಯುತ್ತಮ ಸಾಥ್ ನೀಡಿದರು. ಮುಮ್ಮೇಳದಲ್ಲಿ ಪದ್ಮಾಖ್ಯ ಪುರದರಸು ಪದ್ಮ ಶೇಖರನಾಗಿ ಹಿರಿಯ ಕಲಾವಿದ ಕೊಡಿ ವಿಶ್ವನಾಥ ಗಾಣಿಗ ಅವರು ಸಣ್ಣ ಪಾತ್ರಕ್ಕೂ ಜೀವ ತುಂಬಿದರು. ಮಾರ್ತಾಂಡ ತೇಜನಾಗಿ ಹಿರಿಯ ಅನುಭವಿ ಕಲಾವಿದ ಉಪ್ಪುಂದ ನಾಗೇಂದ್ರ ಅವರು ಕಟ್ಟು ಮೀಸೆ ಮತ್ತು ನಡು ಬಡಗು ತಿಟ್ಟಿನ ಕ್ರಮದಲ್ಲಿ ಪಾತ್ರಕ್ಕೆ ಮೆರುಗು ತಂದರೆ, ಕಮಲಧ್ವಜನಾಗಿ ಆಜ್ರಿ ಅರುಣ್ ಶೆಟ್ಟಿ ಅವರು ಸಮದಂಡಿಯಾಗಿ ಜೀವ ತುಂಬಿದರು. ಕಿರಾತನಾಗಿ ಶ್ಯಾಮ್ ನಾಯ್ಕ್ ಪೇತ್ರಿ, ದೂತಿಯಾಗಿ ಶೇಖರ್ ಶೆಟ್ಟಿ ಏಳಬೇರು ಅವರು ಹಿತಮಿತವಾದ ಹಾಸ್ಯದ ಮೂಲಕ ರಂಜಿಸಿದರು. ಶಶಿಪ್ರಭೆಯಾಗಿ ಹಿರಿಯ ಸ್ತ್ರೀಪಾತ್ರಧಾರಿ ಹೊಸಂಗಡಿ ರಾಜೀವ್ ಶೆಟ್ಟಿ, ಭ್ರಮರಕುಂತಳೆಯಾಗಿ ವಿಷ್ಣುಮೂರ್ತಿ ಬಾಸ್ರಿ ಗಮನ ಸೆಳೆದರು.

ವೃಷಸೇನ ಕಾಳಗ ಪ್ರಸಂಗದಲ್ಲಿ ಯುವಕಲಾವಿದ ಪ್ರಶಾಂತ್ ಗಾಣಿಗ ನೈಲಾಡಿ ಅರ್ಜುನನಾಗಿ ನಡು ಬಡಗುತಿಟ್ಟಿನ ಪರಂಪರೆಯ ಆಹಾರ್ಯದಲ್ಲಿ ಭರವಸೆ ಮೂಡಿಸಿದರು. ವೃಷಸೇನ ನಾಗಿ ಯುವ ಪುಂಡು ವೇಷಧಾರಿ ಪ್ರಸನ್ನ ದೇವಂಗಿ ರಂಗದ ಬಿಸಿಯೇರಿಸಿದರು. ಆಕರ್ಷಕ ರಂಗ ಸಂಚಾರದ ಮೂಲಕ ಕೃಷ್ಣನಾಗಿ ಮಾಧವ ನಾಗೂರು ಅವರು ಪಾತ್ರೋಚಿತ ನ್ಯಾಯ ಒದಗಿಸಿದರು.

ನಾಗೇಶ್ ಕುಲಾಲ್ ನಾಗರಕೋಡಿಗೆ, ಹೊಸಾಳ ಉದಯ್ ಕುಮಾರ್ ಅವರು ಏರು ಶ್ರುತಿಯ ಭಾಗವತಿಕೆ ಪ್ರಸಂಗದ ಕೊನೆಯವರೆಗೂ ಕರ್ಣಾನಂದಕರವಾಗಿತ್ತು. ಬಯಲಾಟದ ಬಹುಬೇಡಿಕೆಯ ಪ್ರಸಂಗ ರುಕ್ಮಾವತಿ ಕಲ್ಯಾಣ ಪ್ರಸಂಗದಲ್ಲಿ ಪ್ರಸಿದ್ಧ ಕಲಾವಿದ ಆಜ್ರಿ ಗೋಪಾಲ ಗಾಣಿಗರು ರುಕ್ಮನ ಪಾತ್ರದಲ್ಲಿ ತನ್ನತನ, ಗತ್ತು ಗೈರತ್ತು ತೋರಿದರು. ರುಕ್ಮಿಣಿಯ ಪಾತ್ರದಲ್ಲಿ ಹಾರಾಡಿ ರಮೇಶ್ ಗಾಣಿಗ, ಕೃಷ್ಣನಾಗಿ ಪ್ರಸಿದ್ಧ ಸ್ತ್ರೀ ವೇಷಧಾರಿ ಉಪ್ಪುಂದ ಶ್ರೀಧರ ಗಾಣಿಗ ಹಿರಿತನವನ್ನು ತೋರಿದರು. ಹಾಸ್ಯ ಪಾತ್ರಗಳಲ್ಲಿ ಹಿರಿಯ ಕಲಾವಿದ ಮಾಹಾಬಲ ದೇವಾಡಿಗರು ಯಕ್ಷಗಾನೀಯ ಚೌಕಟ್ಟಿನ ಹಾಸ್ಯವೆಷ್ಟು ಎನ್ನುವುದನ್ನು ತೋರಿಸಿ ಮಾದರಿಯಾದರು. ಯುವ ಕಲಾವಿದರಾದ ಪ್ರಭಾಕರ್ ಶೆಟ್ಟಿ ಬೇಳಂಜೆ, ಮುಂದಾದಿ ಕೃಷ್ಣ ನಾಯ್ಕ್, ಪ್ರವೀಣ್ ಆಚಾರ್ ಸೇರಿ ಮೈಂದ-ದ್ವಿವಿದ, ಗರುಡ , ಮನ್ಮಥ, ರುಕ್ಮಾವತಿ ಪಾತ್ರಗಳಿಗೆ ಜೀವ ತುಂಬಿದರು.

ಸದಾನಂದ್ ಪಾಟೀಲ್ ಸರ್ಪು ಮತ್ತು ಎಸ್. ವಿ.ಉದಯ್ ಕುಮಾರ್ ಶೆಟ್ಟಿ ಅವರು ಸಂಯೋಜಿಸಿದ ಪ್ರಸಂಗಗಳಿಗೆ ಜೀವ ತುಂಬಲು ಹಿರಿಯ ಮತ್ತು ಕಿರಿಯ ಕಲಾವಿದರೆಲ್ಲರೂ ಶಕ್ತಿ ಮೀರಿ ಪ್ರಯತ್ನಿಸಿ ಮೆಚ್ಚುಗೆಗೆ ಭಾಜನರಾದರು.

ಬೆಳಗಿನ ಜಾವದವರೆಗೂ ಪ್ರೇಕ್ಷಕರ ಕೊರತೆ ಇದ್ದರೂ ಹಿರಿಯ ಮತ್ತು ಯುವ ಕಲಾವಿದರೆಲ್ಲರೂ ಉತ್ಸಾಹ ಕಳೆದುಕೊಳ್ಳದೆ ವೇದಿಕೆಗೆ ಪರಿಪೂರ್ಣ ನ್ಯಾಯ ಒದಗಿಸಿಕೊಡುವಲ್ಲಿ ಶ್ರಮಿಸಿದರು. ನೇರ ಪ್ರಸಾರದಲ್ಲಿ ಸಾವಿರಾರು ಮಂದಿ ವೀಕ್ಷಿಸಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಕ್ಷಗಾನ ಸಮ್ಮೇಳನದಲ್ಲಿ ಪ್ರದರ್ಶನಗೊಂಡ ತೆಂಕು ಮತ್ತು ಬಡಗಿನ ಎಲ್ಲಾ ಪ್ರಸಂಗಗಳು ದೊಡ್ಡ ವೇದಿಕೆಯಲ್ಲಿ ಪ್ರೇಕ್ಷಕರಿಗೆ ಮೆಚ್ಚುಗೆಯಾದವು. ಸಮ್ಮೇಳನಕ್ಕೆ ಕಳೆ ನೀಡಿದವು ಎನ್ನುವುದು ಯಕ್ಷಾಭಿಮಾನಿಗಳು ಮತ್ತು ವಿಮರ್ಶಕರ ಅಭಿಪ್ರಾಯವಾಗಿತ್ತು.

ಟಾಪ್ ನ್ಯೂಸ್

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.