“ಗ್ರೇಟ್‌ ಬ್ಯಾರಿಯರ್‌ ರೀಫ್’; ಅಚ್ಚರಿಯ ಜಗತ್ತು ಇದು…

ಸಾವಿರಾರು ಕಿ.ಮೀ ಉದ್ದದ ಈ ರಚನೆಯನ್ನು ಸೂಕ್ಷ್ಮ ಜೀವಿಗಳು ನಿರ್ಮಿಸಿದ್ದು ಎನ್ನುವುದು ಅಚ್ಚರಿಯೇ ಸರಿ

Team Udayavani, Dec 28, 2020, 5:25 PM IST

“ಗ್ರೇಟ್‌ ಬ್ಯಾರಿಯರ್‌ ರೀಫ್’; ಅಚ್ಚರಿಯ ಜಗತ್ತು ಇದು…

ಹವಳದ ದಿಬ್ಬಗಳು
“ಗ್ರೇಟ್‌ ಬ್ಯಾರಿಯರ್‌ ರೀಫ್’ ವಿಶ್ವದಲ್ಲೇ ಅತಿ ದೊಡ್ಡ ಹವಳದ ದಂಡೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದು 2,600 ಕಿ.ಮೀ. ಉದ್ದವಿದೆ. ಇದನ್ನು ಸಂರಕ್ಷಿಸುವ ಸಲುವಾಗಿ ಆ ಪ್ರದೇಶದಲ್ಲಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ನಿಷೇಧಿಸಲಾಗಿದೆ. ಈ ಭಾಗದಲ್ಲಿ 1,500ಕ್ಕೂ ಹೆಚ್ಚು ಮೀನಿನ ಪ್ರಭೇದಗಳಿದ್ದು, 215 ಜಾತಿಯ ಪಕ್ಷಿಗಳು ವಾಸವಾಗಿವೆ. ಈ ಎಲ್ಲ ಕಾರಣದಿಂದಲೂ ಜಗತ್ತಿನ ಏಳು ನೈಸರ್ಗಿಕ ಅದ್ಭುತಗಳಲ್ಲಿ ಬ್ಯಾರಿಯರ್‌ ರೀಫ್ಗೂ ಸ್ಥಾನ ಸಿಕ್ಕಿದೆ. ಅಲ್ಲಿನ ವೈವಿಧ್ಯಮಯ ಜೀವ ಸಂಕುಲವನ್ನು ಮನಗಂಡು 1981ರಲ್ಲಿ ಅದನ್ನು ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. “ಗ್ರೇಟ್‌ ಬ್ಯಾರಿಯರ್‌ ರೀಫ‌ನ್ನು’ ಬಾಹ್ಯಾಕಾಶದಿಂದಲೂ ಕಾಣಬಹುದು. ಸಾವಿರಾರು ಕಿ.ಮೀ ಉದ್ದದ ಈ ರಚನೆಯನ್ನು ಸೂಕ್ಷ್ಮ ಜೀವಿಗಳು ನಿರ್ಮಿಸಿದ್ದು ಎನ್ನುವುದು ಅಚ್ಚರಿಯೇ ಸರಿ. ಕೆಲ ನೈಸರ್ಗಿಕ ಕಾರಣಗಳು ಮತ್ತು ಮಾನವರ ದುರಾಸೆಯಿಂದಾಗಿ ಈ ಹವಳದ ದಿಬ್ಬಗಳಿಗೆ ಆಪತ್ತು ಒದಗಿದೆ.

ಗೋಡೆ ಏರುವ ಆಡು
ಸಣ್ಣಪುಟ್ಟ ಕೀಟಗಳು ಅಥವಾ ಹಾವುಗಳಂಥ ಸರೀಸೃಪಗಳು ಜಾರುವ ಅಥವಾ ಉದ್ದವಾದ ಗೋಡೆಯನ್ನು ಏರುವುದನ್ನು ನಾವೆಲ್ಲಾ ನೋಡಿರುತ್ತೇವೆ. ಅದೇ ರೀತಿ ಕೆಲವು ಪ್ರಾಣಿಗಳು ಮರಗಳನ್ನು ಸಲೀಸಾಗಿ ಏರುತ್ತವೆ. ಆದರೆ ಯಾವತ್ತಾದರೂ ಆಡು ಗೋಡೆ ಹತ್ತುವುದನ್ನು ನೋಡಿದ್ದೀರಾ? ಇಟಲಿಯ ಉತ್ತರ ಭಾಗದಲ್ಲಿರುವ ಕೆಲವು ಅಣೆಕಟ್ಟುಗಳ ಬಳಿ ಆಲ್ಪೆ„ನ್‌ ಐಬೆಕ್ಸ್ ಎಂಬ ಪ್ರಭೇದಕ್ಕೆ ಸೇರಿದ ಆಡುಗಳಿವೆ. ಅವು ಸುಮಾರು 160 ಮೀ ಎತ್ತರಕ್ಕಿರುವ ತಡೆಗೋಡೆಯನ್ನು ಯಾವುದೇ ಸಹಾಯವಿಲ್ಲದೆ ಏರಬಲ್ಲವು. ಆಣೆಕಟ್ಟನ್ನು ಕಟ್ಟಿರುವ ಕಲ್ಲುಗಳಲ್ಲಿ ಸಂದುಗಳಲ್ಲಿ ಖನಿಜಯುಕ್ತ ಉಪ್ಪು, ಹುಲ್ಲುಗಳಿರುತ್ತವೆ. ಅದನ್ನು ತಿನ್ನಲು ಅವು ಆ ರೀತಿ ಹತ್ತುತ್ತವೆ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ. ಈ ಖನಿಜಯುಕ್ತ ಉಪ್ಪು ಅವುಗಳ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶವಾಗಿರುವುದರಿಂದ ಅವುಗಳನ್ನು ಅರಸಿ ಹೊರಡುವ ಆಡುಗಳ ಗುಂಪು ಅದೆಷ್ಟೇ ದೊಡ್ಡ ಗೋಡೆಯಿದ್ದರೂ ಅದನ್ನು ಸುಲಭವಾಗಿ ಏರುತ್ತದೆ. ಅವುಗಳ ಕಾಲಿನ ಗೊರಸುಗಳಲ್ಲಿರುವ ರಬ್ಬರಿನಂತಹ ಅಂಶವು ಆಡುಗಳು ಕೆಳಕ್ಕೆ ಬೀಳದಂತೆ ತಡೆಯುತ್ತವೆ.

ಬೆಳೆಯುವ ಕಲ್ಲುಗಳು
ರಷ್ಯಾ, ರೊಮೆನಿಯಾ ಹಾಗೂ ಜೆಕ್‌ ಗಣರಾಜ್ಯಗಳಲ್ಲಿ ಕಾಣಸಿಗುವ “ಟ್ರೋವಂಟ್ಸ್‌’ ಎಂಬ ಕಲ್ಲುಗಳು ವಿಸ್ಮಯಕಾರಿಯಾಗಿವೆ. ಈ ಕಲ್ಲುಗಳ ವಿಚಿತ್ರ ಸಂಗತಿ ಏನೆಂದರೆ ಮಳೆ ಬಂದ ಕೆಲ ದಿನಗಳ ನಂತರ ಆ ನೀರನ್ನು ಹೀರಿಕೊಂಡು ಕಲ್ಲುಗಳು ಬೆಳೆಯುತ್ತಾ ಹೋಗುತ್ತವೆ ಮತ್ತು ಇನ್ನೊಂದು ಕಲ್ಲನ್ನು ಸೃಷ್ಟಿಸುತ್ತವೆ. ಇದಕ್ಕೆ ಕಾರಣವೂ ಇಲ್ಲದಿಲ್ಲ ಮಳೆಯ ನಂತರ ಮಣ್ಣಿನೊಳಗೆ ನಡೆಯುವ ರಾಸಾಯನಿಕ ಕ್ರಿಯೆಗಳಿಂದಾಗಿ ಈ ಕಲ್ಲುಗಳು ಹೀಗೆ ಬೆಳೆಯುತ್ತವೆ ಎಂಬುದು ವಿಜ್ಞಾನಿಗಳ ಅಂಬೋಣ. ಈ ಕಲ್ಲುಗಳು ಸುಮಾರು 6 ಮಿಲಿಯನ್‌ ವರ್ಷಗಳ ಹಿಂದೆ ಉಂಟಾದ ಭೂಕಂಪದ ಪರಿಣಾಮವಾಗಿ ಹುಟ್ಟಿಕೊಂಡವು ಎನ್ನಲಾಗಿದೆ. ಇವು ಒಂದು ನಿರ್ದಿಷ್ಟ ಆಕಾರದಲ್ಲಿ ಬೆಳೆಯದೆ ಉದ್ದ, ಲಂಬ, ಓರೆ, ಸಿಲಿಂಡರ್‌ ಆಕೃತಿ, ಚೌಕಾಕೃತಿ, ಒಂದರ ಮೇಲೆ ಒಂದು ಕಲ್ಲುಗಳನ್ನು ಇಟ್ಟಂತೆ ಬೆಳೆಯುವುದು- ಇವೆಲ್ಲಾ ಮತ್ತೂಂದು ವಿಶೇಷ. ಈ ಕಲ್ಲುಗಳು ಕನಿಷ್ಟ 5 ಮೀ ನಿಂದ ಗರಿಷ್ಟ 10 ಮೀ.ವರೆಗೂ ಬೆಳೆಯುತ್ತವಂತೆ. ಸದ್ಯ ಈ ಕಲ್ಲುಗಳನ್ನು ವಿಶ್ವ ಪಾರಂಪರಿಕಾ ತಾಣವಾಗಿ ಯುನೆಸ್ಕೊ ಘೋಷಿಸಿದ್ದು ಈ ವಿಸ್ಮಯ ತಾಣಕ್ಕೆ ಪ್ರವಾಸಿಗರು ಹೇರಳವಾಗಿ ಬರುತ್ತಾರೆ.

– ಪುರುಷೋತ್ತಮ್‌ ವೆಂಕಿ

ಟಾಪ್ ನ್ಯೂಸ್

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

1-wwwqe

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-uv-fusion

Harekala Hajabba: ಕೋಟಿ ಒಡೆಯನಲ್ಲ, ಆದರೂ ಈತ ಕೋಟಿಗೊಬ್ಬ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.