World Cup final;ಭಾರತ ತಂಡದಲ್ಲಿ ಬದಲಾವಣೆಯ ಅಗತ್ಯವಿಲ್ಲ:ರವಿ ಶಾಸ್ತ್ರಿ
ನಮ್ಮ ತಂಡ ಒಬ್ಬರು ಅಥವಾ ಇಬ್ಬರು ಆಟಗಾರರನ್ನು ಅವಲಂಬಿಸಿಲ್ಲ...
Team Udayavani, Nov 17, 2023, 3:38 PM IST
ಅಹಮದಾಬಾದ್ : ಆಸ್ಟ್ರೇಲಿಯ ವಿರುದ್ಧದ ಭಾನುವಾರ ನಡೆಯಲಿರುವ ವಿಶ್ವಕಪ್ ಫೈನಲ್ನಲ್ಲಿ ಆತಿಥೇಯ ಭಾರತ ತಂಡ ಕಾರ್ಯ ಕಾರ್ಯ ಯೋಜನೆಗಳಿಗೆ ಅಂಟಿಕೊಳ್ಳಬೇಕು ಮತ್ತು ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಅಗತ್ಯವಿಲ್ಲ” ಎಂದು ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಶುಕ್ರವಾರ ಹೇಳಿಕೆ ನೀಡಿದ್ದಾರೆ.
”ಭಾರತ ತಂಡದ ಬಗ್ಗೆ ಮಾತನಾಡುತ್ತಾ, ಬೇರೆ ಏನೂ ಬದಲಾವಣೆ ಮಾಡುವ ಅಗತ್ಯವಿಲ್ಲ. ಆಟಗಾರರು ವಿಶ್ರಾಂತಿ ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ. ತವರಿನಲ್ಲಿ ಆಡುತ್ತಿದ್ದಾರೆ, ಮತ್ತು ಇದು ತುಂಬಾ ಅನುಭವಿ ತಂಡವಾಗಿದೆ. ಮತ್ತು ಅವರು ವಿಭಿನ್ನವಾದದ್ದು ಏನನ್ನೂ ಮಾಡಬೇಕಾಗಿಲ್ಲ” ಎಂದರು.
“ಭಾರತ ವಿಶ್ವಕಪ್ ಗೆಲ್ಲುತ್ತದೆ. ಫೈನಲ್ನಲ್ಲಿ ಫೇವರಿಟ್ಗಳಾಗಿ ಆರಂಭಿಸುತ್ತಾರೆ. ಇದುವರೆಗೆ ಅತ್ಯುತ್ತಮವಾಗಿ ಆಡಿದ್ದಾರೆ,ಅದು ಕೊನೆಯ ಪಂದ್ಯದಲ್ಲಿಯೂ ಮುಂದುವರಿಯುತ್ತದೆ. ಆದಷ್ಟು ಬೇಗನೆ ಕಪ್ ಹಿಡಿಯಬೇಕು” ಎಂದರು.
”ತಂಡದ ಆಟಗಾರರಿಗೆ ತಮ್ಮ ಪಾತ್ರಗಳೇನು ಎಂದು ತಿಳಿದಿದೆ, ಮತ್ತು ಒಳ್ಳೆಯ ವಿಷಯವೆಂದರೆ ಈ ತಂಡವು ಒಬ್ಬರು ಅಥವಾ ಇಬ್ಬರು ಆಟಗಾರರನ್ನು ಅವಲಂಬಿಸಿಲ್ಲ. ಎಂಟು ಅಥವಾ ಒಂಬತ್ತು ಆಟಗಾರರು ಆಟದ ನಂತರ ಆಟವನ್ನು ಪ್ರದರ್ಶಿಸುತ್ತಾರೆ, ಆದ್ದರಿಂದ ಇದು ಅದ್ಭುತ ಸಂಕೇತವಾಗಿದೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ
ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ರಜಿನಿಕಾಂತ್ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ