ಕೊಂಚೂರ-ವಾಡಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ
Team Udayavani, Feb 18, 2017, 3:38 PM IST
ವಾಡಿ: ವಿಪರೀತ ಹದಗೆಟ್ಟು ಸಂಕಟದ ಸಂಚಾರಕ್ಕೆ ಕಾರಣವಾಗಿದ್ದ ಕೊಂಚೂರ-ವಾಡಿ ಮಧ್ಯದ ರಸ್ತೆಯ ಅಭಿವೃದ್ಧಿಗೆ ಕೊನೆಗೂ ಚಾಲನೆ ದೊರೆತಿದ್ದು, ಪ್ರಯಾಣಿಕರು ಹಾಗೂ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ನನೆಗುದಿಗೆ ಬಿದ್ದಿದ್ದ ಪಟ್ಟಣದಿಂದ ಕೊಂಚೂರ ಮತ್ತು ಬಳವಡಗಿ ಗ್ರಾಮಕ್ಕೆ ಕೂಡುವ ಆರು ಕಿ.ಮೀ. ರಸ್ತೆ ಈ ಭಾಗದ ಜನರ ಗೋಳಾಟಕ್ಕೆ ಕಾರಣವಾಗಿತ್ತು.
ರಸ್ತೆಯುದ್ದಕ್ಕೂ ಜಲ್ಲಿಕಲ್ಲುಗಳ ರಾಶಿ ಹರಡಿಕೊಂಡು ರಸ್ತೆ ಅಧೋಗತಿಗೆ ತಲುಪಿತ್ತು. ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾಗಿತ್ತು. ಜೋಲಿ ಹೊಡೆಯುತ್ತಾ ಸಾಗಿಬರುತ್ತಿದ್ದ ಅನೇಕರು ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡ ಘಟನೆಗಳಿಗೂ ರಸ್ತೆ ಸಾಕ್ಷಿಯಾಗಿತ್ತು. ಸಂಬಂಧಿಸಿದ ಇಲಾಖೆಗಳ ಅಧಿಧಿಕಾರಿಗಳ ಬೇಜವಾಬ್ದಾರಿ, ಚುನಾಯಿತ ಜನಪ್ರತಿನಿಧಿಧಿಗಳ ನಿರ್ಲಕ್ಷéಕ್ಕೆ ಜನರು ಶಾಪ ಹಾಕುವಂತಾಗಿತ್ತು.
ಕೊಂಚೂರಿನಲ್ಲಿರುವ ಸುಪ್ರಸಿದ್ಧ ಶ್ರೀ ಹನುಮಾನ ದೇವಸ್ಥಾನ, ಪಕ್ಕದ ಬಳವಡಗಿ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀ ಏಲಾಂಬಿಕ ದೇವಸ್ಥಾನಕ್ಕೆ ಭೇಟಿ ನೀಡಲು ನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಜಿಲ್ಲೆಯ ವಿವಿಧೆಡೆಯ ಭಕ್ತರು, ಪಡಬಾರದ ಕಷ್ಟ ಪಡು ವಂತಾ ಗಿತ್ತು. ಹಾರಿ ಬರುತ್ತಿದ್ದ ದಟ್ಟವಾದ ಧೂಳು, ಜೀವ ಹಿಂಡುತ್ತಿದ್ದ ಜಲ್ಲಿಕಲ್ಲುಗಳ ಹಾಸಿಗೆ, ಯಮ ಲೋಕಕ್ಕೆ ಮಾರ್ಗ ತೋರುವಂತಿದ್ದ ತಗ್ಗುಗಳು ಆಡಳಿತಕ್ಕೆ ಕನ್ನಡಿ ಹಿಡಿದ್ದವು.
ಕೊನೆಗೂ ಎಚ್ಚೆತ್ತುಕೊಂಡಿರುವ ಲ್ಯಾಂಡ್ ಆರ್ಮಿ ಅಧಿಕಾರಿಗಳು, ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿದ್ದಾರೆ. 2.58 ಕೋಟಿ ರೂ. ವೆಚ್ಚದಡಿ 4 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಜಲ್ಲಿಕಲ್ಲಿನ ರಸ್ತೆಯೀಗ ಡಾಂಬರ್ ರಸ್ತೆಯಾಗಿ ಬದಲಾಗುತ್ತಿದ್ದು, ಜನರಲ್ಲಿ ಹರ್ಷ ಮೂಡಿಸಿದೆ. ಈ ರಸ್ತೆಯ ದುಸ್ಥಿತಿ ಕುರಿತು ಡಿ.19 ರಂದು “ಊರು ಮುಟ್ಟೋತನ ಬೆನ್ನಟ್ಟೋ ಧೂಳು’ ಶಿರ್ಷಿಕೆಯಡಿ “ಉದಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.
* ಮಡಿವಾಳಪ್ಪ ಹೇರೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ