ಮೂಡಬಿದಿರೆ ಭಗವಾನ್‌ ಬಾಹುಬಲಿಗೆ ಮಸ್ತಕಾಭಿಷೇಕ


Team Udayavani, Mar 26, 2017, 12:37 PM IST

bahubali.jpg

ಮೂಡಬಿದಿರೆ: ಭಗವಾನ್‌ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ನೋಡಿದಾಗ ಆಗುವ ಅನುಭವವನ್ನೇ ನೀಡುವ “ಮಸ್ತಕಾಭಿಷೇಕ ‘ ಶುಕ್ರವಾರ ರಾತ್ರಿ ಮೂಡಬಿದಿರೆಯ ಸಾವಿರ ಕಂಬದ ಬಸದಿಯ ಆವರಣದಲ್ಲಿ 61 ವರ್ಷಗಳ ಬಳಿಕ ನಡೆಯಿತು.

ಶ್ರೀ ಜೈನಮಠದ ಆಡಳಿತಕ್ಕೊಳಪಟ್ಟಿರುವ ಸಾವಿರ ಕಂಬದ ಬಸದಿಯ ಮುಖ್ಯ ಆರಾಧನಾ ಮೂರ್ತಿ ಚಂದ್ರನಾಥ ಸ್ವಾಮಿಯ ಸನ್ನಿಧಿಯಲ್ಲೇ ಇರುವ, ಮೂರು ಅಡಿ ಎತ್ತರದ ಸುಮಾರು 300 ಕೆ.ಜಿ. ತೂಕದ “ಹಾಲು ಬೆಳ್ಳಿ’ಯಲ್ಲಿ ನಿರ್ಮಿತ, ಭಗವಾನ್‌ ಬಾಹುಬಲಿ ಸ್ವಾಮಿಯ ಮೂರ್ತಿಯನ್ನು ಬಹಳ ಜಾಗರೂಕತೆಯಿಂದ ಹೊರತಂದು, ಒಳಾಂಗಣದಲ್ಲಿ ನಿರ್ಮಿಸಿದ ಸುಂದರವಾದ ಅಟ್ಟಳಿಗೆಯಲ್ಲಿರಿಸಿ, ಶ್ರೀ ಜೈನ ಮಠಾಧೀಶ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅವರ ಮಾರ್ಗದರ್ಶನ ಹಾಗೂ ಉಪಸ್ಥಿತಿಯಲ್ಲಿ ನಡೆದ ಈ ಮಸ್ತಕಾಭಿಷೇಕದಲ್ಲಿ ಮಹಾಮಸ್ತ¤ಕಾಭಿಷೇಕದಲ್ಲಿ ಬಳಸಲಾಗುವ ದ್ರವ್ಯಗಳನ್ನೇ ಬಳಸಲಾಗಿದ್ದು ನೋಟಕರಿಗೆ ದಿವ್ಯಾನುಭವ ನೀಡಿತು.

ಮೊದಲಿಗೆ 54 ಕಲಶಗಳಲ್ಲಿ ನೀರಿನ ಅಭಿಷೇಕ ನಡೆದ ಬಳಿಕ ಎಳನೀರು, ಇಕ್ಷುರಸ (ಕಬ್ಬಿನ ಹಾಲು), ಹಾಲು, ನವ ಧಾನ್ಯ, ಹಸುವಿನ ತುಪ್ಪ, ಕಷಾಯ, ಕಲ್ಕಚೂರ್ಣ (ಅಕ್ಕಿ ಹಿಟ್ಟು), ಅರಶಿನ, ಕೇಸರಿ ಹಿಟ್ಟು, ಕೇಸರಿ ದ್ರವ ಮತ್ತು ಚತುಷೊRàನ ಕಲಶಾಭಿಷೇಕ, ಭತ್ತದ ಅರಳು, ಶ್ರೀಗಂಧ, ಚಂದನ ಇಂಥ ದ್ರವ್ಯಗಳಿಂದ ಭಗವಾನ್‌ ಬಾಹುಬಲಿಸ್ವಾಮಿಗೆ ಅಭಿಷೇಕ ಮಾಡಿದಾಗ ಈ ಬಿಂಬವು ಶ‌ುದ್ಧ ರಜತ ಕಾಂತಿಯುತವಾಗಿ, ಹಲವು ತಿಳಿವರ್ಣಗಳನ್ನು, ಒಂದೊಮ್ಮೆ ಶುದ್ಧ ಶ್ವೇತ ವರ್ಣವನ್ನೇ ಹೊದ್ದುಕೊಂಡ ಮೂರ್ತಿಯಾಗಿ, ಚಿನ್ನದಂಥ ಮೈಕಾಂತಿಯನ್ನು ಸೂಸುತ್ತ, ಶ್ರೀಗಂಧವನ್ನು ಲೇಪಿಸಿಕೊಂಡು ಪರಿಮಳಿಸಿ, ಕೊನೆಗೆ ಅಷ್ಟಗಂಧ ಅಭಿಷೇಕವಾದಾಗ ಕೆಂಬಣ್ಣದಲ್ಲಿ ಕಂಗೊಳಿಸಿತು ಬಿಂಬ.

ಲೋಕದ ಕಂಟಕಗಳು ಚಿಂದಿ ಚಿಂದಿಯಾಗಿ ಕ್ಷೇಮ ಉಂಟಾಗಲಿ ಎಂಬ ಪ್ರಾರ್ಥನೆ (ಮಹಾಶಾಂತಿದಾರ)ಯಾಗಿ, ಕನಕ ಸಹಿತ ಪುಷ್ಪವೃಷ್ಟಿಯಾಗಿ ಅಘÂì ನೀಡಿ ಮಹಾಮಂಗಳಾರತಿ, ಗುರುಗಳ ಪಾದಪೂಜೆಯೊಂದಿಗೆ ಅಭಿಷೇಕದ ವಿಧಿವಿಧಾನಗಳು ಸಂಪನ್ನಗೊಂಡವು.

ಸೇವಾದಾರರಾದ ದಿವಂಗತ ಆರೋಹ ಆದಿರಾಜರ ಪುತ್ರರಾದ ನಾಗೇಂದ್ರ ಕುಮಾರ್‌, ಶೈಲೇಂದ್ರ ಕುಮಾರ್‌, ಪುತ್ರಿಯರು, ಕುಟುಂಬಸ್ಥರು ಹಾಗೂ ಪರಿವಾರದವರು ಮಸ್ತಕಾಭಿಷೇಕದ ವಿಧಿ ವಿಧಾನಗಳಲ್ಲಿ ಪಾಲ್ಗೊಂಡಿದ್ದರು. ಭಟ್ಟಾರಕ ಸ್ವಾಮೀಜಿ ಸರ್ವ ವಿಧಿವಿಧಾನಗಳ ಮಾರ್ಗದರ್ಶಕರಾಗಿ, ಸೂಕ್ತ ವಿವರಣೆಗಳನ್ನೂ ನೀಡಿದರು. ಜೈನ ಯುವಜನರು ಸ್ವಯಂಸೇವಕರಾಗಿ ವಿಶೇಷ ಸಹಕಾರ ನೀಡಿದ್ದರು.

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.