ಕಾಡ್ಗಿಚ್ಚು ನಂದಿಸಲು ಹೋದ ಫಾರೆಸ್ಟ್ ಗಾರ್ಡ್ ಸಜೀವ ದಹನ
Team Udayavani, Feb 18, 2017, 6:10 PM IST
ಮೈಸೂರು:ಕಾಡ್ಗಿಚ್ಚು ನಂದಿಸಲು ಹೋದ ಫಾರೆಸ್ಟ್ ಗಾರ್ಡ್ ಜೀವಂತವಾಗಿ ದಹನವಾದ ದಾರುಣ ಘಟನೆ ನಾಗರಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಶನಿವಾರ ನಡೆದಿದೆ.
ನಾಗರಹೊಳೆ ಅಭಯಾರಣ್ಯದ ಕಲ್ಕೆರೆವಲಯದಲ್ಲಿ ಸಂಭವಿಸಿದ್ದ ಕಾಡ್ಗಿಚ್ಚನ್ನು ನಂದಿಸಲು ಹೋದ ವಿಜಯಪುರ ಮೂಲದ ಫಾರೆಸ್ಟ್ ಗಾರ್ಡ್ ಮುರಿಗೆಪ್ಪ ಸಜೀವ ದಹನವಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.