ಅಂತೂ ಸಿಧು ಕಾಂಗ್ರೆಸ್ಗೆ, ಅಮೃತಸರದಿಂದ ಸ್ಪರ್ಧೆ
Team Udayavani, Jan 16, 2017, 3:45 AM IST
ಹೊಸದಿಲ್ಲಿ: ಅಸಮಾಧಾನಗಳ ಹಿನ್ನೆಲೆಯಲ್ಲಿ ಬಿಜೆಪಿ ತೊರೆದಿದ್ದ ಖ್ಯಾತ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಈಗ ತನ್ನ ರಾಜಕೀಯ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ಅನಂತರ ಅವರು ರವಿವಾರ ಕಾಂಗ್ರೆಸ್ ಸೇರಿದ್ದಾರೆ.
ಈ ಮೂಲಕ ಅವರು ನವೆಂಬರ್ನಲ್ಲಿ ಕಾಂಗ್ರೆಸ್ ಸೇರಿದ್ದ ಪತ್ನಿ ನವಜೋತ್ ಕೌರ್ ಹಾದಿ ತುಳಿದಂತಾ ಗಿದೆ. ಸಿಧು ಅಮೃತಸರದ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಅವರು ಅಲ್ಲಿಂದ ಆಯ್ಕೆಯಾಗುವ ವಿಶ್ವಾಸ ಇದೆ ಎಂದು ಪಂಜಾಬ್ನ ಅಗ್ರನಾಯಕ ಅಮರಿಂದರ್ ಸಿಂಗ್ ಹೇಳಿದ್ದಾರೆ.
2014ರ ಲೋಕಸಭಾ ಚುನಾ ವಣೆಯಲ್ಲಿ ಅಮೃತಸರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪರ ಸ್ಪರ್ಧಿಸಲು ಸಿಧು ಬಯಸಿದ್ದರು. ಆದರೆ ಪ್ರಸ್ತುತ ಕೇಂದ್ರ ಹಣ ಕಾಸು ಸಚಿವರಾಗಿರುವ ಅರುಣ್ ಜೇಟ್ಲಿಗೆ ಬಿಜೆಪಿ ಅವಕಾಶ ನೀಡದ ಪರಿಣಾಮ ಸಿಧು ನಿರಾಶರಾಗಿದ್ದರು. ಅದಾದ ಬಳಿಕ ಅವರು ಪಕ್ಷದಲ್ಲಿ ಮೂಲೆಗುಂಪಾಗಿದ್ದರು. ಅಂದಿನಿಂದಲೇ ಅವರು ಪಕ್ಷ ತೊರೆಯುವ ಲೆಕ್ಕಾಚಾರ ಶುರುವಾಗಿತ್ತು.