ಚಾರ್ಧಾಮಕ್ಕೆ ಬೇಕು ಐಡಿ ಕಾರ್ಡ್
Team Udayavani, Mar 29, 2017, 3:45 AM IST
ಡೆಹ್ರಾಡೂನ್: ಪ್ರಸಿದ್ಧ ಚಾರ್ಧಾಮ್ ಯಾತ್ರೆಗೆ ಇನ್ನು ಸಾದಾ ಸೀದ ಹೋಗುವಂತಿಲ್ಲ. ಯಾತ್ರಾರ್ಥಿಗಳು ಫೋಟೋ ಇರುವ ಗುರುತಿನ ಚೀಟಿಯನ್ನು ಒಯ್ಯುವುದು ಕಡ್ಡಾಯ.
ಭದ್ರತೆ ಮತ್ತು ನೂಕುನುಗ್ಗಲು ಇತ್ಯಾದಿಗಳ ಸಂದರ್ಭ ಗುರುತು ಹಿಡಿಯಲು ಸುಲಭವಾ ಗುವ ನಿಟ್ಟಿನಲ್ಲಿ ಗುರುತು ಚೀಟಿ ಕಡ್ಡಾಯಗೊಳಿ ಸಲು ಉತ್ತರಾಖಂಡ ಸರ್ಕಾರ ಚಿಂತಿಸಿದೆ. ಇದ ರೊಂದಿಗೆ ಯಾತ್ರಾರ್ಥಿಗಳಿಗೆ ಮದ್ಯ ಸೇವನೆ ಪರೀಕ್ಷೆಯನ್ನೂ ನಡೆಸಲು ಉದ್ದೇಶಿಸಿದೆ.
ಗಂಗೋತ್ರಿ, ಯಮುನೋತ್ರಿ, ಕೇದಾರ, ಬದರಿನಾಥ ದರ್ಶನದ ಚಾರ್ಧಾಮ್ ಯಾತ್ರೆ ಈ ಬಾರಿ ಏ.28ರಿಂದ ಆರಂಭವಾಗಲಿದ್ದು, ವಿವಿಧೆಡೆ ಯಾತ್ರಾರ್ಥಿಗಳ ಗುರುತು ಚೀಟಿ, ಜೊತೆಗೆ ಮದ್ಯ ಸೇವಿಸಿದ್ದಾರೆಯೇ ಎಂದು ತಪಾಸಣೆ ಮಾಡಲಾಗುತ್ತದೆ. ಕಾಲ್ನಡಿಗೆ ಪ್ರದೇಶಗಳಲ್ಲಿ ಹಲವು ಯಾತ್ರಿಗಳು ಮದ್ಯ ಸೇವಿಸಿ ಆಗಮಿಸುತ್ತಾರೆ. ಇದು ಯಾತ್ರೆಯ ಉದ್ದೇಶಕ್ಕೇ ಧಕ್ಕೆ ತಂದಂತೆ. ಜೊತೆಗೆ ಮದ್ಯ ಸೇವನೆಯಿಂದ ಅಹಿತಕರ ಘಟನೆಗಳನ್ನು ತಡೆಯಲು ಸಾಧ್ಯ ಎಂದು ಉತ್ತರಾಖಂಡ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ಹೇಳಿದ್ದಾರೆ. ಮದ್ಯ ಸೇವಿಸಿ ಯಾತ್ರೆಗೆ ಹೋಗುವುದನ್ನು ನಿಷೇಧಿಸಲಾಗುವುದು. ಯಾತ್ರೆ ಮಾರ್ಗದಲ್ಲಿ ಮಾತ್ರ ನಿಷೇಧ ಇದ್ದು, ಯಾತ್ರಾರ್ಥಿಗಳ ವಾಸಗಳಲ್ಲಿ ಮದ್ಯ ಸೇವನೆಗೆ ಅಡ್ಡಿ ಇಲ್ಲ ಎಂದಿದ್ದಾರೆ. ಇದೇ ವೇಳೆ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ದೇಗುಲಗಳಲ್ಲಿ ಮದ್ಯಸೇವಿಸಿದವರಿಗೆ ಅವಕಾಶ ಇಲ್ಲ ಎನ್ನುವುದು ಸರಿ. ಆದರೆ ದಾರಿಮಧ್ಯೆ ಸೇವಿಸು ವಂತಿಲ್ಲ ಎನ್ನುವುದು ಹಕ್ಕು ಕಸಿದಂತೆ. ಜೊತೆಗೆ ದಾರಿ ಮಧ್ಯ ಇರುವ ಮದ್ಯದಂಗಡಿಗಳ ಕಥೆ ಏನಾಗುತ್ತದೆ ಎಂದು ಪ್ರಶ್ನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ