7ನೇ ವೇತನ ಆಯೋಗ: ನೌಕರರಿಗೆ ಜಾರಿ ನಿರೀಕ್ಷೆ
Team Udayavani, Oct 21, 2017, 7:25 AM IST
ನವದೆಹಲಿ: ಸಾವಿರಾರು ಸರ್ಕಾರಿ ನೌಕರರಿಗೆ ಇದು ವಿಶೇಷ ದೀಪಾವಳಿ ಆಗಲಿದೆಯೇ?
ಹೌದು, ವಿಶೇಷ ದೀಪಾವಳಿಯೇ ಆಗಲಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಯಾಕೆ ಅಂತೀರಾ? ವಿಷಯ ಇಷ್ಟೆ, 7ನೇ ವೇತನ ಆಯೋಗದ ಶಿಫಾರಸಿನಂತೆ ಪರಿಷ್ಕೃತ ವೇತನ ಜಾರಿ ಶೀಘ್ರದಲ್ಲಿ ಆಗಲಿದ್ದು, ಇದಕ್ಕೆ ರಾಜ್ಯ ಸರ್ಕಾರಗಳು ಮುಂದಾಗಿವೆ. ಪರಿಣಾಮ ವೇತನದಲ್ಲಿ ಗಣನೀಯ ಏರಿಕೆ ಸಾಧ್ಯವಾಗಲಿದೆ.
ಇತ್ತೀಚೆಗಷ್ಟೇ ರಾಜಸ್ಥಾನದ 12 ಲಕ್ಷಕ್ಕೂ ಹೆಚ್ಚು ನೌಕರರು ಹಾಗೂ ಪಿಂಚಣಿದಾರರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ವಸುಂಧರಾ ರಾಜೇ ನೇತೃತ್ವದ ರಾಜಸ್ಥಾನ ಸರ್ಕಾರ 7ನೇ ವೇತನ ಆಯೋಗದ ಶಿಫಾರಸಿನಂತೆ ಮನೆ ಬಾಡಿಗೆ ಭತ್ಯೆ ಸೇರಿ ಹೆಚ್ಚಿನ ಭತ್ಯೆ ನೀಡುತ್ತಿದೆ. ಆದರೆ ಆರ್ಥಿಕ ತಜ್ಞರ ಪ್ರಕಾರ ಈ ಬೆಳವಣಿಗೆಯಿಂದ ಗ್ರಾಹಕರ ಬೇಡಿಕೆ ಹೆಚ್ಚಲಿದೆಯಾದರೂ, ಸಾರ್ವ ಜನಿಕರ ಆರ್ಥಿಕ ಸ್ಥಿತಿ ಕುಸಿಯಲಿದೆ.
ಅದೇನೇ ಇದ್ದರೂ, ಭಾರತೀಯ ವಿವಿಗಳ ಮತ್ತು ಕಾಲೇಜುಗಳ ಅಂದಾಜು 7.58 ಲಕ್ಷ ಪ್ರಾಧ್ಯಾಪಕರಿಗೆ ಇದು ವಿಶೇಷ ದೀಪಾವಳಿಯಾಗಲಿದೆ ಎಂದು ಕೇಂದ್ರ ಎಚ್ಆರ್ಡಿ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಪರಿಷ್ಕೃತ ವೇತನದ ಸ್ಕೇಲ್ನಂತೆ ಕಾಲೇಜು ಮತ್ತು ವಿವಿ ಪ್ರಾಧ್ಯಾಪಕರು 10,400ರಿಂದ 49,800 ರೂ.ನಷ್ಟು ಹೆಚ್ಚುವರಿ ವೇತನ ಜೇಬಿಗಿಳಿಸಲಿದ್ದಾರೆ. ಸರಾಸರಿ 22-28%ರಷ್ಟು ವೇತನದಲ್ಲಿ ಜಾಸ್ತಿಯಾಗಲಿದೆ. ಬಹು ನಿರೀಕ್ಷೆಯ ಲ್ಲಿರುವ ಸಿಬ್ಬಂದಿ 2016, ಜ.1ರಿಂದ ಪರಿಷ್ಕೃತ ವೇತನ ಪಡೆದುಕೊಳ್ಳಲಿದ್ದಾರೆ.
ಈಗಾಗಗಲೇ ತಮಿಳುನಾಡು ಸರ್ಕಾರವೂ, 7ನೇ ವೇತನ ಆಯೋಗದ ನಿಯಮದಂತೆ ಕನಿಷ್ಠ ಮತ್ತು ಗರಿಷ್ಠ ವೇತನವನ್ನು ನಿಗದಿಗೊಳಿಸಿದೆ. ಅಲ್ಲದೇ 12 ಲಕ್ಷ ಶಿಕ್ಷಕರು ಇದರ ಲಾಭ ಪಡೆದುಕೊಳ್ಳಲಿದ್ದಾರೆ ಎಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಕೆ. ಪಳನಿಸ್ವಾಮಿ, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಬರೋ ಬ್ಬರಿ 14,719 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
MUST WATCH
ಹೊಸ ಸೇರ್ಪಡೆ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ