ಕೃಷ್ಣಮೃಗಗಳಿಗೂ ತಟ್ಟಿದ ಬರಗಾಲದ ಬಿಸಿ


Team Udayavani, Mar 6, 2017, 3:45 AM IST

Ranebennur-Blackbuck-Deer-S.jpg

ಹಾವೇರಿ: ಸಮರ್ಪಕ ಮಳೆಯಿಲ್ಲದೇ ಉಂಟಾಗಿರುವ ಬರಗಾಲದ ಬಿಸಿ ರಾಜ್ಯದ ಪ್ರಮುಖ ವನ್ಯಜೀವಿ ಧಾಮಗಳಲ್ಲೊಂದಾದ ರಾಣಿಬೆನ್ನೂರಿನ ಕೃಷ್ಣಮೃಗಧಾಮಕ್ಕೂ ತಟ್ಟಿದ್ದು, ಕೃಷ್ಣಮೃಗಗಳೂ ಕುಡಿವ ನೀರು, ಮೇವಿಗಾಗಿ ಪರಿತಪಿಸುವಂತಾಗಿದೆ.

ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಕುಡಿವ ನೀರಿನ ಸಮಸ್ಯೆ ಎಲ್ಲ ಜೀವಸಂಕುಲಗಳಿಗೂ ಎದುರಾಗುತ್ತಿದೆ. ಕೃಷ್ಣಮೃಗಧಾಮದ ಕೆರೆ, ಹೊಂಡಗಳೆಲ್ಲ ಒಣಗಿ ಹೋಗಿವೆ.

ಸುಮಾರು 8,000ಕ್ಕೂ ಹೆಚ್ಚು ಕೃಷ್ಣಮೃಗಗಳು ಇಲ್ಲಿದ್ದು, ಈ ಧಾಮವು 11,900 ಹೆಕ್ಟೇರ್‌ ಪ್ರದೇಶದಲ್ಲಿದೆ. ಪ್ರಾಣಿಗಳ ನೀರಿನ ದಾಹ ತೀರಿಸಲು ಸಾಕಷ್ಟು ಕೆರೆ, ಹೊಂಡಗಳಿವೆ. ಆದರೆ ಈ ವರ್ಷ ಅವುಗಳೆಲ್ಲ ಬತ್ತಿರುವುದರಿಂದ ಸಮಸ್ಯೆ ಎದುರಾಗಿದೆ. ಇನ್ನೊಂದೆಡೆ, ಪ್ರಾಣಿಗಳಿಗೆ ಬೇಕಾದ ಹಸಿರು ಮೇವು ನೀಡುವ ಮರಗಳ ಸಂಖ್ಯೆಯೂ ವಿರಳವಾಗಿದೆ. ಇಲ್ಲಿ ಶೇ. 60ರಷ್ಟು ಅಕೇಶಿಯಾ, ನೀಲಗಿರಿ ಮರಗಳೇ ಇವೆ. ಹೀಗಾಗಿ ಒಣಗಿದ ಹುಲ್ಲು, ಸೊಪ್ಪು ತಿಂದೇ ಬದುಕಬೇಕಾದ ಅನಿವಾರ್ಯತೆ ಇಲ್ಲಿದೆ.

ಧಾಮ ಬಿಟ್ಟರೆ ಬೇಟೆಗೆ ಗುರಿ
ಧಾಮದಲ್ಲಿ ಸಾಕಷ್ಟು ನೀರು, ಆಹಾರವಿಲ್ಲದೆ ಬಹುತೇಕ ಕೃಷ್ಣಮೃಗಗಳು ಪಕ್ಕದ ಹೊಲಗಳಿಗೆ ಹೋಗುವುದು ಸಾಮಾನ್ಯ. ರೈತರ ಕಣ್ಣು ತಪ್ಪಿಸಿ ಒಂದಿಷ್ಟು ಮೇವು ತಿಂದು, ನೀರು ಕುಡಿಯುತ್ತಿದ್ದವುಗಳನ್ನು ಈ ಬಾರಿ ಒಣಗಿದ ಜಮೀನುಗಳು ಸ್ವಾಗತಿಸುತ್ತಿವೆ. ಅಲ್ಲದೆ, ಬೇಟೆಗಾರರ ಗುರಿಗೂ ಬಲಿಯಾಗುವ ಸಾಧ್ಯತೆಯೇ ಹೆಚ್ಚಾಗಿದೆ.

ಟ್ಯಾಂಕರ್‌ ನೀರು:
ಅರಣ್ಯ ಇಲಾಖೆ ಟ್ಯಾಂಕರ್‌ಗಳಿಂದ ನೀರು ತಂದು ಕೃಷ್ಣಮೃಗಗಳ ದಾಹ ತೀರಿಸುವ ಕೆಲಸ ಮಾಡುತ್ತಿದೆ. ಕೃಷ್ಣಮೃಗಗಳಿಗೆ ನೀರು ಕುಡಿಸುವ ವ್ಯವಸ್ಥೆ ಮಾಡುವುದಕ್ಕಾಗಿಯೇ ಇಲಾಖೆ ಧಾಮದಲ್ಲಿ ಅಲ್ಲಲ್ಲಿ ಸಿಮೆಂಟ್‌ ತೊಟ್ಟಿಗಳನ್ನು ನಿರ್ಮಿಸಿದ್ದು, ಟ್ಯಾಂಕರ್‌ನಿಂದ ನೀರು ತಂದು ತುಂಬಿಸುವ ಕೆಲಸ ಮಾಡುತ್ತಿದೆ. ಆದರೆ ಸಾವಿರಾರು ಸಂಖ್ಯೆಯಲ್ಲಿರುವ ಕೃಷ್ಣಮೃಗಗಳಿಗೆ ಇಲಾಖೆ ಪೂರೈಸುವ ನೀರು ಸಾಕಾಗದು. ಸರ್ಕಾರ ಕೃಷ್ಣಮೃಗಧಾಮ ಹಾಗೂ ರಾಜ್ಯದ ಇತರ ವನ್ಯಜೀವಿಧಾಮಗಳಲ್ಲಿ ಪ್ರಾಣಿಗಳಿಗೆ ಸಾಕಷ್ಟು ನೀರು, ಆಹಾರ ಲಭ್ಯವಾಗುವಂತೆ ಮಾಡಲು ಹೆಚ್ಚಿನ ಅನುದಾನ ನೀಡಬೇಕಿದೆ.

ಬೇಸಿಗೆಯಲ್ಲಿ ಕೃಷ್ಣಮೃಗ ಧಾಮದಲ್ಲಿ ಪ್ರಾಣಿಗಳಿಗೆ ನೀರು, ಆಹಾರ ಸರಿಯಾಗಿ ಸಿಗುತ್ತಿಲ್ಲ. ಹೊರಗಡೆ ಇರುವ ಜಮೀನುಗಳಲ್ಲೂ ಸಹ ನೀರಿಲ್ಲದೆ ಯಾವ ಬೆಳೆಯೂ ಇಲ್ಲ. ಎಲ್ಲವೂ ಒಣಗಿದೆ. ಧಾಮದಿಂದ ಹೊರ ಹೋಗುವ ಕೃಷ್ಣಮೃಗಗಳಿಗೆ ಬೇಟೆಗಾರರ ಕಣ್ತಪ್ಪಿಸಿ ಧಾಮಕ್ಕೆ ಮರಳುವುದೇ ದೊಡ್ಡ ಸಾಹಸದ ಕೆಲಸ. ಇಲಾಖೆ ಧಾಮದಲ್ಲಿಯೇ ಪ್ರಾಣಿಗಳಿಗೆ ಯಥೇತ್ಛ ನೀರು, ಆಹಾರ ಸಿಗುವ ವ್ಯವಸ್ಥೆ ಮಾಡಬೇಕು.
– ಮಂಜುನಾಥ ಮಠದ, ಪ್ರಾಣಿ ಪ್ರಿಯ

ವನ್ಯಧಾಮದಲ್ಲಿರುವ ನೀರಿನ ಮೂಲಗಳೆಲ್ಲ ಒಣಗಿದ್ದರಿಂದ ಕೃಷ್ಣಮೃಗಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಧಾಮದಲ್ಲಿ ತೊಟ್ಟಿಗಳನ್ನು ನಿರ್ಮಿಸಿ ಟ್ಯಾಂಕರ್‌ನಿಂದ ನೀರು ತಂದು ತೊಟ್ಟಿಗಳನ್ನು ತುಂಬಿಸಲಾಗುತ್ತಿದೆ. ದಿನಕ್ಕೆರಡು ಬಾರಿ ತುಂಬಿಸುತ್ತಿದ್ದೇವೆ. ಹಸಿರು ಹುಲ್ಲು ಬೆಳೆಸಲಾಗುತ್ತಿದ್ದು, ಕೃಷ್ಣಮೃಗಗಳಿಗೆ ನೀರು, ಮೇವು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ.
-ಎ.ಬಿ. ಕಲ್ಲೂರ,
ಡಿಎಫ್‌ಒ, ವನ್ಯಜೀವಿ ವಿಭಾಗ, ರಾಣಿಬೆನ್ನೂರು

– ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.