ಆತಂಕ ಸೃಷ್ಟಿಸಿದ ಲಘು ವಿಮಾನ ಹಾರಾಟ
Team Udayavani, Mar 24, 2017, 3:45 AM IST
ವಿಜಯಪುರ/ಆಲಮಟ್ಟಿ: ರಾಜ್ಯದ ಪ್ರಮುಖ ಜಲಾಶಯ ಆಲಮಟ್ಟಿಯ ಲಾಲ ಬಹದ್ದೂರ ಶಾಸ್ತ್ರೀ ಜಲಾಶಯದ ಮೇಲೆ ತೀರಾ ಕೆಳ ಹಂತದಲ್ಲಿ ಲಘು ವಿಮಾನವೊಂದು ಹಾರಾಟ ನಡೆಸಿ ಜಲಾಶಯದ ಅಧಿಕಾರಿಗಳು ಹಾಗೂ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಗುರುವಾರ ಬೆಳಗ್ಗೆ 9.45ರ ಸುಮಾರಿಗೆ ಕಲಬುರಗಿ ಕಡೆಯಿಂದ ಬಂದ ವಿಮಾನ ಜಲಾಶಯದಿಂದ ಕೇವಲ 100 ಮೀಟರ್ ಎತ್ತರದಲ್ಲಿ ಹಿನ್ನೀರಿನ ಮಾರ್ಗವಾಗಿ ಸಾಗಿ, ಅಲ್ಲಿ ತಿರುವು ಪಡೆದು ಮರಳಿದೆ. ಆಲಮಟ್ಟಿ ಶಾಸ್ತ್ರೀಜಿ ಜಲಾಶಯದ ಮೇಲೆ ಹಾರಾಡುವ ಮುನ್ನ ನಾರಾಯಣಪುರ ಬಳಿ ಬಸವಸಾಗರ ಜಲಾಶಯದ ಮೇಲೂ ಈ ವಿಮಾನ ಹಾರಾಟ ಮಾಡಿದೆ ಎನ್ನಲಾಗಿದೆ. ಈ ವಿಷಯ ತಿಳಿಯುತ್ತಲೇ ಆಲಮಟ್ಟಿ ಶಾಸ್ತ್ರೀಜಿ ಸ್ಥಳೀಯ ಜಲಾಶಯದ ಭದ್ರತೆಗೆ ಪ್ರತ್ಯೇಕವಾಗಿ ನಿಯೋಜಿಸಿರುವ ಪೊಲೀಸ್ ತಂಡ ಹಾಗೂ ಕರ್ನಾಟಕ ರಾಜ್ಯ ಕೈಗಾರಿಕೆ ಭದ್ರತಾ ಪಡೆ ಅಧಿಧಿಕಾರಿಗಳು ಆತಂಕಕ್ಕೀಡಾಗಿದ್ದಾರೆ.
ನಾಲ್ಕು ದಿನದ ಹಿಂದೆಯೂ ವಿಮಾನ ಹಾರಾಟ ನಡೆಸಿದ್ದು , ಅಧಿಕಾರಿಗಳು ಲಘು ವಿಮಾನ ಹಾರಾಟ ನಡೆಸುವ ಬೆಳಗಾವಿಯ ಸಾಂಬ್ರಾ, ಹುಬ್ಬಳ್ಳಿ, ಚೆನ್ನೈ ವಿಮಾನ ನಿಲ್ದಾಣದ ಕಂಟ್ರೋಲ್ ರೂಂ ಸಂಪರ್ಕಿಸಿದರೂ ತಮ್ಮ ವ್ಯಾಪ್ತಿಯಿಂದ ಯಾವುದೇ ವಿಮಾನ ಹಾರಾಟ ನಡೆಸಿಲ್ಲವೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದರಿಂದ ಕಂಗಾಲಾದ ಅಧಿಕಾರಿಗಳು ಲಘು ವಿಮಾನ ಹಾರಾಟದ ಮಾಹಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಧಿಕಾರಿಗಳಿಗೆ ನೀಡಿದ್ದಾರೆ.
ಆತಂಕ ಬೇಡ:
ಎಸ್ಪಿ ಸಿದ್ಧರಾಮಪ್ಪ ಬೀದರ ನಗರದಲ್ಲಿರುವ ಸೈನಿಕ ವಿಮಾನ ತರಬೇತಿ ಕೇಂದ್ರದ ಅಧಿಧಿಕಾರಿಗಳನ್ನು ಸಂಪರ್ಕಿಸಿದ್ದು, ತಮ್ಮ ಕೇಂದ್ರದಲ್ಲಿರುವ ತರಬೇತಿ ಲಘು ವಿಮಾನ ಕೃಷ್ಣಾ ತೀರದ ಮಾರ್ಗದಲ್ಲಿ ಹಾರಾಟ ಮಾಡಿದ್ದಾಗಿ ಅಧಿಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಜಿಲ್ಲಾಧಿಧಿಕಾರಿ ಶಿವಕುಮಾರ ಉದಯವಾಣಿಗೆ ಮಾತನಾಡಿ, ಲಘು ವಿಮಾನ ಬೀದರ ಸೈನಿಕ ವಿಮಾನ ಹಾರಾಟ ತರಬೇತಿ ಕೇಂದ್ರಕ್ಕೆ ಸೇರಿದ್ದು ಎಂದು ಎಸ್ಪಿ ಅವರು ಮಾಹಿತಿ ಸಂಗ್ರಹಿಸಿದ್ದಾರೆ. ಈ ಕುರಿತು ಬೀದರ ಸೇನಾ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಸ್ಥಳೀಯರು ಈ ವಿಮಾನ ಹಾರಾಟದ ಕುರಿತು ಆತಂಕ ಪಡುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು
IPL;ಮುಂಬೈ ಇಂಡಿಯನ್ಸ್ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ