“ಸಿದ್ದು ಮತ್ತೆ ಸಿಎಂ,ನಾನು ಹಣಕಾಸು ಸಚಿವ’
Team Udayavani, Oct 15, 2017, 10:25 AM IST
ಯಲಬುರ್ಗಾ: “ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅ ಧಿಕಾರಕ್ಕೆ ಬರುತ್ತದೆ. ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗುತ್ತಾರೆ. ನಾನು ಹಣಕಾಸು ಸಚಿವನಾಗುವುದು ಖಚಿತ’ ಎಂದು ಉನ್ನತ ಶಿಕ್ಷಣ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಲಬುರ್ಗಾದ ಕೆಂಪುಕೆರೆಗೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಬಸವತತ್ವ ಪಾಲಕ. ನನಗೆ ಬಾಗಿನ ಅರ್ಪಣೆ ಇಷ್ಟವಾಗಲ್ಲ. ಆದರೂ ಪಪಂ ಆಡಳಿತಕ್ಕೆ ಮಣಿದು ಬಾಗಿನ ಸಲ್ಲಿಸಿದ್ದೇನೆ’ ಎಂದರು.