ಕೃಷ್ಣ ಪದ್ಯಗಳು


Team Udayavani, Aug 13, 2017, 6:55 AM IST

12-SUPLY-9.jpg

ಬಗೆಯೇ ಹರಿ
ಬಗೆ ಬಗೆಯಲಿ ಹೇಳಿಕೊಂಡೆ
ಬಗೆ ಹರಿಯಲಿ ಎಂದು
 
ಬಗೆ ಬಗೆಯಲಿ ತೋರಿಕೊಂಡೆ
ತೋಡಿಕೊಂಡೆ ಬಗೆಬಗೆಯಲಿ
ಬಗೆ ಹರಿಯಲಿ ಎಂದು

ಬಗೆ ಬಗೆಯಲಿ ಹಾಡಿ ಕಳೆದೆ
ಬಗೆಯ ರಾಗ ಆಯ್ದು ಹೆಕ್ಕಿ
ಬಗೆಯೇ ಕಳೆ ಎಂಬ ಮನವಿ
ವಿವಿಧ ಬಗೆಯ ಬರೆದೆ

ಬಗೆಯ ಬಗೆಯ ಚಿತ್ರ ಬಿಡಿಸಿ
ಬಗೆ ಬಗೆಯಲಿ ಬಣ್ಣ ಬಳಸಿ
ಅಮೂರ್ತಗಳ ಹಂಗು ಕಳಚಿ
ಮೂರ್ತಗೊಳಿಸಿದೆ
ಸೂಚ್ಯಾರ್ಥದ ಬೀಗ ಒಡೆದು 
ವಾಚ್ಯಗೊಳಿಸಿದೆ
ಹರಿಯಲಿ ಬಗೆ ಬೇಗ ಎಂದು 
ಪ್ರಾರ್ಥನೆ ಕುಳಿತೆ

ಹರಿಯದ ಬಗೆ ಹರಿವ ಕಂಡು
ಮೂರ್ಛೆ ಹೋದೆ

ಬಗೆ ಕಾಣದೆ ಎದೆ ಬಗೆದು ನಿಂತು 
ಬಗೆಯೆಹರಿ 
ಬಗೆಯೇಹರಿ 
ಬಗೆಯೇ ಹರಿ! ಎಂದೆ ! 

ಗೊಣಗಾಟ

ನಾ
ಈಶ್ವರನೆಂದೆಣಿಸಿ ಕರೆದೆ
ನೋಡಿದರಾತ ಕೃಷ್ಣ
ಜಗದ ನಾರಿಯರೆಲ್ಲ
ತನ್ನ
ಮಡದಿಯರೆಂದ
ಭಂಡ!

ಮಂಗಳಾರತಿ ಮಾಡಬೇಕಿತ್ತು
ಮನಸು ಕೇಳುವುದಿಲ್ಲ
ನಂಬುವುದಿಲ್ಲ ಬಹುಶಃ
ಹರಿಮಾಯಕದಿಂದ
ಕೊಟ್ಟು ಲಂಚದ ಮುತ್ತು
ಒಳಗು ಮಾಡಿಕೊಂಡ.

ಏನು ಮಾಡಲಿ ನಾನು?
ಕೃಷ್ಣ ಕಿಂಡಿಯಲಿ ಗೋಪಿ
ಚಂದನದ ಗೊಂಬೆಗೆ
ಬೈಗಳ ತೂರಿಸಿ
ತೀರ್ಥ ಕುಡಿದು ದಣಿವಾರಿಸಿ
ಒರೆಸಿಕೊಳ್ಳುವೆನು
ತೃಪ್ತಿಯ ಗಂಧ

ಎಂದು ಹಾಡುತ್ತ ಕಡೆಗೋಲು ಮೂಲೆಯಲಿ
ಗೊಣಗಿದಳು ಗೋಪಬಾಲೆ    

ಕನಕನ ತಂಗಿ ಮತ್ತು ದೇವರು

ಏಳು ಮಲೆಯೊಡೆಯನ್ನ
ನೋಡ ಹೋದಳು ಹುಡುಗಿ
ಮುಂದೆ ದಬ್ಬಿದರು- ಹಿಂದಿ
ನಿಂದಲೂ ಇದ್ದವರು

ಭಲೇ ಹಿಂದಿನವರೇ !
ಕಂಡನೇ ವೆಂಕಟಾಚಲವಾಸ
ನಿಮಗೆ?

ಇತ್ತೇ ನನ್ನ ದೂಡಲು ಅವನ
ಪ್ರೇರಣೆ?
ಪ್ರಶ್ನೆಯ ಮೇಲೆ ಪ್ರಶ್ನೆ
ಕೇಳುವ ಹುಡುಗಿ,
ಕನಕನ ತಂಗಿ!
ಇತ್ತು ಅಲ್ಲಿಯೂ ಒಂದು
ಚೌಕಳಿ ಕಂಡಿ !

ಕಂಡಿರಾ? ತಿರುಪತಿಯ ದೇವರೇ
ತಿರುಗಿ
ಕಂಡಿಯಲ್ಲಿಣಿಕಿ
ಶಂಖ ಚಕ್ರವ ಬಿಸುಟು
ಕೊಳಲನೂದಿ ಕರೆದ
ರೀತಿ!
ಕಣ್ಣೀರು ಚೆಲ್ಲಿ ನೆನೆದಳು ಹುಡುಗಿ
ಹೇ ಕೃಷ್ಣ
ಹೇ ಯಾದವ
ಹೇ ಸಖೇತಿ!

ಗೋಪಿರ್ಕಿತನ 

ಕರೆವ ಕೊಳಲಿಗೆ ಮನ
ಉರಿವ ಒಲೆ ಕಡೆ ಗಮನ
ಹೊರಟು ಒಳ ನಿಂತಿರುವ
ಆಪ್ಯಾಯಮಾನ ಗೋಪಿರ್ಕಿತನ 
ಗೊತ್ತೆ?

ಆಕೆಯನೆ ಕೇಳಿ
ಯಮುನಾ ತೀರದಲಿ 
ಅಲೆವವನೇ ಶುಭಮಸ್ತು
ಎನ್ನುತ್ತ ಒಗ್ಗರಣೆ ಮೆಣಸು 
ರುಂಂಂಯn ಚಿವುಟಿದಳು

ಪ್ರಾಣಸಖ ಕ್ಷಮಿಸೆಂದಳು.

ರಂಗಪೂಜೆ

ಗೋಪಿ ಗುಡಿಸಲಿನಲಿ ಅಂದು
ವಿಶೇಷ ಪೂಜೆ
ವಾಚಾಲಿಯನ್ನು ಮೂಗಿಯಾಗಿಸಿದ 
ಕೃಷ್ಣಾಯ ತುಭ್ಯಂ ನಮಃ ಮಂತ್ರ
ಮಧುರಾಷ್ಟಕ ಜೊತೆಗೆ ಮಂದಾರ ತುಲಸಿ
ರತ್ನಗಂಧಿ ಧೂಪ ದೀಪ ನೈವೇದ್ಯ
ಏಕಾ ಅನೇಕಾರತಿ

ನಡೆಯುತಿದೆ, ಅಹೊಅಹೋ
ಎಲ್ಲಿಂದಲೋ ಮುರಲಿ
ಮೋಹನರಾಗ ಬರುತಿದೆ ತೇಲಿ  

ತಕ್ಷಣವೆ ಆವರಿಸಿ ಪರವಶತೆ ಅಕಟಾ
ಬಾಷ್ಪವಾರಿಯ ಚಿಮುಚಿಮುಕಿಸಿ
ತೊಳೆಯಬಹುದೇ ವಿರಹ 
ಕೃಷ್ಣಾರ್ಪಣವೆನುತ ಕೈಯ
ಮುಗಿಯ ಬಹುದೇ ಆ
ಮಂತ್ರ-ಮುಗ್ಧ ಮರುಳಿ?

ವೈದೇಹಿ
 

ಟಾಪ್ ನ್ಯೂಸ್

Money Laundering Case; Kejriwal’s stay in jail continues

Money Laundering Case; ಕೇಜ್ರಿವಾಲ್ ಜೈಲು ವಾಸ ಮುಂದುವರಿಕೆ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

4-manjeshwara-1

Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Money Laundering Case; Kejriwal’s stay in jail continues

Money Laundering Case; ಕೇಜ್ರಿವಾಲ್ ಜೈಲು ವಾಸ ಮುಂದುವರಿಕೆ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.