ಸ್ವಚ್ಛ ನಗರ ಕನಸಿಗೆ ಫೆಲಿಕ್ಸ್‌ರ ನಾನ್‌ ಸ್ಟಾಪ್‌ ನಡಿಗೆ!

ಸ್ವಂತ ಕಾರಿನಲ್ಲೇ ಓಡಾಡಿ ನಿತ್ಯ ಕಸ ಸಂಗ್ರಹ; ಮಾದರಿ ಸೇವೆ

Team Udayavani, Feb 25, 2021, 5:40 AM IST

ಸ್ವಚ್ಛ ನಗರ ಕನಸಿಗೆ ಫೆಲಿಕ್ಸ್‌ರ ನಾನ್‌ ಸ್ಟಾಪ್‌ ನಡಿಗೆ!

ಕಾರ್ಕಳ: ಪರಿಸರ ಸ್ವತ್ಛತೆ ಕುರಿತು ಸಾರ್ವಜನಿಕರಲ್ಲಿ ಎಷ್ಟೇ ಜಾಗ್ರತಿ ಮೂಡಿಸಿದರೂ ಕೆಲವರು ಕಸ ಎಸೆಯುವುದನ್ನು ರೂಢಿಯಾಗಿಸಿಕೊಂಡಿದ್ದಾರೆ. ಇದರಿಂದ ಬೇಸತ್ತ ಕಾರ್ಕಳದ ಹಿರಿಯ ನಾಗರಿಕರೊಬ್ಬರು ಪ್ರತಿ ನಿತ್ಯ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹೆಕ್ಕುವ ಮೂಲಕ ಮಾದರಿಯಾಗಿದ್ದಾರೆ.

ನಗರದ ಮಂಗಲಪಾದೆ ನಿವಾಸಿ 71ರ ಇಳಿವಯಸ್ಸಿನ ಫೆಲಿಕ್ಸ್‌ ವಾಜ್‌ ಪ್ರತಿನಿತ್ಯ ಕಸ ಹೆಕ್ಕುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಪರಿಸರದ ಮೇಲೆ ಅಪಾರ ಕಾಳಜಿ ಹೊಂದಿರುವ ಇವರು ಪ್ರತಿದಿನ ಬೆಳಗ್ಗೆ 2 ತಾಸು ಸಾರ್ವಜನಿಕ ಸ್ಥಳಗಳಲ್ಲಿ ಕಸಗಳನ್ನು ಹೆಕ್ಕಿ ಸ್ವತ್ಛಗೊಳಿಸುತ್ತಾರೆ. ಕಳೆದ 7 ವರ್ಷಗಳಿಂದ ಈ ಕಾರ್ಯ ಮಾಡುವ ಮೂಲಕ ಪರಿಸರ ಪ್ರೇಮದ ಕಾಳಜಿ ತೋರುತ್ತಿದ್ದಾರೆ. ಅವರ ಸೇವೆಗೆ ಎಲ್ಲೆಡೆಯಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ.

ಬದಲಾಗಿದೆ ಕಾಲ
ಆರಂಭದಲ್ಲಿ ಕಸ ಸಂಗ್ರಹಕ್ಕೆಂದು ತೆರಳಿದಾಗೆಲ್ಲ ಜನ ಒಂದು ತರಹ ಭಿನ್ನವಾಗಿ ಕಾಣುತ್ತಿದ್ದರು. ಮುಜುಗರ ಪಡುವ ಹಾಗೆ ವರ್ತಿಸುತ್ತಿದ್ದರು. ಅನಂತರದಲ್ಲಿ ಸ್ವತ್ಛತೆಯ ಕುರಿತು ಎಲ್ಲೆಡೆ ಅರಿವು ಮೂಡಿ ಎಲ್ಲರು ಇದರಲ್ಲಿ ತೊಡಗಿಸಿಕೊಳ್ಳಲು ಆರಂಭಿಸಿದರು. ಜಾಗೃತಿ ಎಲ್ಲೆಡೆಗೂ ಪಸರಿಸಿತು ಎನ್ನುತ್ತಾರೆ ಅವರು.

ಸಂಡೇ ಬ್ರಿಗೇಡ್‌ ಜತೆ
ಕಾರ್ಕಳ ಸ್ವಚ್ಚ ಬ್ರಿಗೇಡ್‌ ತಂಡ ಪ್ರತಿ ರವಿವಾರ ಸ್ವಚ್ಚತೆ ಆಂದೋಲನ ನಡೆಸುತ್ತಿದ್ದಾರೆ. ರವಿವಾರದ ಒಂದು ದಿನ ಫೆಲಿಕ್ಸ್‌ ರವರು ಆ ತಂಡದ ಜತೆಗೆ ಜತೆಗೆ ಸ್ವಚ್ಚತೆ ಸೇವೆಯಲ್ಲಿ ತೊಡಗಿಸಿಕೊಂಡು ಶ್ರಮ ಸೇವೆ ನೀಡುತ್ತಾರೆ.

ನಿತ್ಯ 2 ಗಂಟೆ
ಕಳೆದ 7 ವರ್ಷಗಳಿಂದ ಇವರು ಪ್ರತಿನಿತ್ಯ ಬೆಳಗ್ಗೆ 6ರಿಂದ 8 ಗಂಟೆ ತನಕ ಸ್ವತ್ಛತೆ ಸೇವೆ ಮಾಡುತ್ತಿದ್ದಾರೆ, ಮಂಗಲಪಾದೆ, ಸ್ವರಾಜ್‌ ಮೈದಾನ, ಅನಂತಶಯನ ದೇವಸ್ಥಾನ ಮುಂತಾದ ಕಡೆ ತೆರಳಿ ಕಸ ಹೆಕ್ಕುತ್ತಾರೆ. ಕಸ ಸಂಗ್ರಹಕ್ಕೆ ಕಾರನ್ನು ಬಳಸಿಕೊಳ್ಳುತ್ತಿದ್ದಾರೆ. ಪೆಟ್ರೋಲ್‌ ದರ ಏರಿಕೆಯಾದರೂ ಕಾರಲ್ಲೇ ಕಸ ಸಂಗ್ರಹಿಸಿ ನಷ್ಟವಾದರೂ ಪರವಾಗಿಲ್ಲ, ಪರಿಸರ ಸ್ವಚ್ಚವಾಗಿರಬೇಕು ಎನ್ನುವುದು ಇವರ ದೃಢ ಉದ್ದೇಶ.

ಪರಿಸರ ಪ್ರೇಮ
ವಿದೇಶದಲ್ಲಿ 35 ವರ್ಷ ಉದ್ಯೋಗದಲ್ಲಿದ್ದರು. ಅನಂತರದಲ್ಲಿ ಕೆಲಸ ತೊರೆದು ಊರಿಗೆ ಬಂದು ನೆಲೆಸಿದ್ದಾರೆ. ಸ್ವದೇಶಕ್ಕೆ ಮರಳಿ 11 ವರ್ಷವಾಗಿದೆ. ಮೊದಲಿನಿಂದಲೂ ಪರಿಸರದ ಬಗ್ಗೆ ಅಪಾರ ಪ್ರೀತಿ ಇರಿಸಿಕೊಂಡಿದ್ದರು.

ಊರಿಗೆ ಮರಳಿದಾಗ ಎಲ್ಲೆಂದರಲ್ಲಿ ಕಸ ಹರಡಿ ಬಿದ್ದಿರುವುದನ್ನು ಕಣ್ಣಾರೆ ಕಂಡು ಬೇಸತ್ತಿದ್ದರು. ಪರಿಸರ ಸ್ವತ್ಛವಿಲ್ಲದೆ ಕೊಳಚೆಯಿಂದ ಇರುವುದಕ್ಕೆ ಅಸಹನೆಗೊಂಡರು. ಅನಂತರದಲ್ಲಿ ಸ್ವತಃ ಶುಚಿತ್ವದ ಪಣತೊಟ್ಟರು. ಕಸ ಹೆಕ್ಕುವುದನ್ನು ನಿತ್ಯದ ಪರಿಪಾಠವನ್ನಾಗಿಸಿದರು.

ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಬಿಸಾಕುವುದನ್ನು ತಡೆಯಲು ಸ್ವರಾಜ್‌ ಮೈದಾನ ಬಳಿ ತ್ಯಾಜ್ಯ ಸಂಗ್ರಹ ಚೀಲಗಳನ್ನು ನೇತು ಹಾಕಿ ಇಟ್ಟಿದ್ದಾರೆ. ನಿತ್ಯ ಸಂಗ್ರಹಿಸಿದ ಕಸವನೆಲ್ಲ ಒಂದೆಡೆ ಇರಿಸಿದ ಬಳಿಕ ಪುರಸಭೆ ಕಾರ್ಮಿಕರು ವಿಲೇವಾರಿ ಮಾಡುತ್ತಾರೆ.

– 20 ಕೆ.ಜಿ.ದಿನವೊಂದಕ್ಕೆ ಕಸ ಸಂಗ್ರಹ
– 2 ತಾಸು ಪ್ರತಿನಿತ್ಯ ಸ್ವತ್ಛತೆ ಸೇವೆ
– 4 ಕಿ.ಮೀ ನಿತ್ಯ ಕಾರಲ್ಲಿ ಪ್ರಯಾಣಿಸಿ ಸಂಗ್ರಹ
– 7 ವರ್ಷದಿಂದ ಕಾಯಕ

ಸ್ವತಃ ತ್ಯಾಜ್ಯ ಸಂಗ್ರಹಕ್ಕೆ ಮಾದರಿ
ವಿದೇಶದಿಂದ ಹಿಂತಿರುಗಿ ಊರಲ್ಲಿ ನೆಲೆಸಿದಾಗ ಸುತ್ತಮುತ್ತಲ ಪರಿಸರದಲ್ಲಿ ಕಸ ತುಂಬಿರುತ್ತಿರುವುದನ್ನು ಕಂಡಿದ್ದೆ. ಅದರಿಂದ ಮನಸ್ಸಿಗೆ ದುಃಖವಾಗುತ್ತಿತ್ತು. ಅಂದಿನಿಂದ ಸ್ವತಃತ್ಯಾಜ್ಯ ಸಂಗ್ರಹಕ್ಕೆ ಆರಂಭಿಸಿದೆ.
-ಫೆಲಿಕ್ಸ್‌ ವಾಜ್‌

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.