ಕಾಫಿ ತೋಟದಲ್ಲಿ ಈಗ ಹೂ ನಗೆ

ಅಕಾಲಿಕ ಮಳೆಯಿಂದ ಅವಧಿಗೂ ಮೊದಲೇ ಅರಳಿದ ಹೂ ,ಬೆಳೆಗಾರರಲ್ಲಿ ಸಂತಸ

Team Udayavani, Mar 2, 2021, 4:22 PM IST

ಕಾಫಿ ತೋಟದಲ್ಲಿ ಈಗ ಹೂ ನಗೆ

ಸಕಲೇಶಪುರ: ತಾಲೂಕಿನ ಕಳೆದ ವಾರ ಸುರಿದ ಅಕಾಲಿಕ ಮಳೆಯಿಂದಾಗಿ ಕಾಫಿ ಗಿಡದಲ್ಲಿ ಸಮೃದ್ಧವಾಗಿ ಹೂವು ಬಿಟ್ಟಿದ್ದು, ತೋಟವು ಘಮ ಘಮಿಸುತ್ತಿದೆ. ಹಸಿರು ಎಲೆಯ ಮೇಲೆ ಮೊಸರು ಚೆಲ್ಲಿದಂತೆ ಹೂ ಅರಳಿ ನಿಂತಿದ್ದು,ನೋಡುಗರ ಕಣ್ಮನ ಸೆಳೆಯುತ್ತಿದೆ. ಹಿಂದಿಗಿಂತಬಹುಬೇಗನೆ ಹೂ ಅರಳಿರುವುದು ಈಗಾಗಲೇಕೊಯ್ಲು ಮಾಡಿದ ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದರೆ, ಇನ್ನೂ ಕೊಯ್ಲು ಬಾಕಿ ಇರುವವರಿಗೆ ತೊಂದರೆ ಆಗಿದೆ.

ಸಾಮಾನ್ಯವಾಗಿ ಡಿಸೆಂಬರ್‌ ಕೊನೆವಾರದಿಂದ ಫೆಬ್ರುವರಿ ಅಂತ್ಯದವರೆಗೂ ಕಾಫಿ ಫ‌ಸಲನ್ನು ಕೊಯ್ಲು ಮಾಡುವುದು ವಾಡಿಕೆ. ಆದರೆ, ಈ ಬಾರಿ ಜನವರಿ ಮೊದಲ ವಾರಾಂತ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕಾಫಿಗೆ ವ್ಯಾಪಕ ಹಾನಿಯುಂಟಾಗಿತ್ತು. ಸುಮಾರು ಒಂದು ವಾರ ಮೋಡ ಮುಸುಕಿದ ವಾತಾವರಣ ಇತ್ತು. ಈ ಕಾರಣದಿಂದ ಕಾಫಿ ಕೊಯ್ಲು ಮಾಡಿದವರು ಒಣಗಿಸಲು ಪರದಾಡಿದರೆ, ಕಾಫಿ ಕೊಯ್ಲು ಮಾಡದವರು ಬೆಲೆ ನಷ್ಟದ ಆತಂಕ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಎಲ್ಲಾ ಆತಂಕದಿಂದ ಚೇತರಿಸಿಕೊಂಡ ಬೆಳೆಗಾರರು, ಕಾಫಿ ಕೊಯ್ಲು ನಡೆಸಿದ್ದರು.ಆದರೆ, ಕಳೆದ ವಾರ ಅಕಾಲಿಕ ಮಳೆಯಿಂದಇದೀಗ ಕಾಫಿ ಗಿಡಗಳಲ್ಲಿ ಹೂವು ಬಿಟ್ಟಿದ್ದು, ತೋಟಗಳಲ್ಲಿ ಯಾವುದೇ ಚಟುವಟಿಕೆ ಕೈಗೊಳ್ಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಖರ್ಚು ಉಳಿತಾಯ: ಕಾಫಿ ಕೊಯ್ಲು ನಡೆಸಿದವರಿಗೆ ಕಳೆದ ವಾರ ಸುರಿದ ಅಕಾಲಿಕ ಮಳೆ ಸಂತೋಷ ತಂದಿದೆ. ಒಂದು ಇಂಚಿಗೂ ಹೆಚ್ಚು ಮಳೆ ತಾಲೂಕಿನ ಹಲವೆಡೆ ಸುರಿದಿತ್ತು. ಇದರಿಂದಾಗಿ ಬೆಳೆಗಾರರು ಕಾಫಿ ಗಿಡಗಳಿಗೆ ಕೃತಕವಾಗಿ ನೀರು ಸಿಂಪಡಿಸುವುದು ತಪ್ಪಿದೆ. ಹನಿ ನೀರಾವರಿ ಅಥವಾ ಸ್ಪಿಂಕ್ಲರ್‌ ಮೂಲಕ,ಇಲ್ಲದೆ, ಕೃತಕವಾಗಿ ಆಯಿಲ್‌ ಎಂಜಿನ್‌ ಇಟ್ಟು, ಕೋಟ್ಯಂತರ ರೂ. ಡೀಸೆಲ್‌ ಖರ್ಚು ಮಾಡಿ ಗಿಡಗಳಿಗೆ ನೀರು ಉಣಿಸಬೇಕಿತ್ತು. ಇದೀಗ ಆ ಖರ್ಚು ಸಮಯ ಉಳಿಕೆ ಆಗಿದೆ. ಜೊತೆಗೆ ಕಾರ್ಮಿಕರಿಗೆ ಕೊಡಬೇಕಾಗಿದ್ದ ಕೂಲಿ ಸಹಉಳಿದಿದೆ.

ಕಾಯಿ ಕಟ್ಟಲು ಸಹಕಾರಿ: ಒಂದು ವೇಳೆ ಮಳೆ ಒಂದು ಇಂಚಿಗೂ ಕಡಿಮೆ ಆಗಿದ್ದರೆ, ಕೃತಕವಾಗಿ ನೀರು ಸಿಂಪಡಿಸಬೇಕಾಗಿತ್ತು. ಆದರೆ, ಮಳೆಪೂರ್ಣ ಪ್ರಮಾಣದಲ್ಲಿ ಬಿದ್ದಿರುವುದರಿಂದ ಇನ್ನು 20 ದಿನಗಳ ಕಾಲ ಕೃತಕವಾಗಿ ನೀರುಸಿಂಪಡಿಸುವ ಅಗತ್ಯವಿಲ್ಲ. ಮಳೆಯಿಂದಾಗಿಹೂವು ಬಂದಿದ್ದು, ಮುಂದಿನ ಹಂಗಾಮಿಗೆಕಾಯಿ ಕಟ್ಟಲು ಸಹಾಯಕಾರಿಯಾಗಿದೆ.ಇದೇ ವೇಳೆ ಕೂಲಿ ಕಾರ್ಮಿಕರ ಕೊರತೆಯಿಂದ ಶೇ.25ಕ್ಕೂ ಹೆಚ್ಚು ಕಾಫಿ ಕೊಯ್ಲು ಮಾಡುವುದು ಹಲವು ತೋಟಗಳಲ್ಲಿಬಾಕಿ ಇದ್ದು, ಇಂತಹ ತೋಟಗಳಲ್ಲಿ ಒಂದೆಡೆ ಹೂವು ಬಿಟ್ಟಿರುವುದು, ಮತ್ತೂಂದೆಡೆ ಹಣ್ಣುಗಿಡಗಳಲ್ಲಿ ಇರುವುದು ಬೆಳೆಗಾರರ ತಲೆ ಬಿಸಿಮಾಡಿದೆ. ಫೆಬ್ರವರಿ ಮೂರನೇ ವಾರಾಂತ್ಯದಲ್ಲಿಸುರಿದ ಮಳೆ ಮಾರ್ಚ್‌ ಮೊದಲ ವಾರದಲ್ಲಿ ಸುರಿದಿದ್ದಲ್ಲಿ ಎಲ್ಲರಿಗೂ ಅನುಕೂಲವಾಗುತ್ತಿತ್ತು.ಒಟ್ಟಾರೆಯಾಗಿ ಅಕಾಲಿಕ ಮಳೆ ಕೆಲವರಿಗೆಸಂತೋಷ ತಂದರೆ, ಮತ್ತೆ ಕೆಲವರಿಗೆ ದುಃಖ ಉಂಟು ಮಾಡಿದೆ.

ಕಳೆದ ವಾರ ಬಿದ್ದ ಅಕಾಲಿಕಮಳೆಯಿಂದಾಗಿ ಗಿಡಗಳಲ್ಲಿ ಹೂವು ಮೂಡಿದೆ. ಈಗಾಗಲೆ ಕಾಫಿ ಕೊಯ್ಲು ಮಾಡಿರುವುದರಿಂದ ಗಿಡಗಳಲ್ಲಿ ಹೂವು ಕಟ್ಟಿರುವುದು ಸಂತೋಷ ತಂದಿದೆ. ಭೋಜೇಗೌಡ, ಕಾಫಿ ಬೆಳೆಗಾರ, ಕುಡುಗರಹಳ್ಳಿ.

ಕೆಲವೊಂದು ತೋಟಗಳಲ್ಲಿ ಕಾಫಿ ಕೊಯ್ಲು ಮಾಡಲು ಗುತ್ತಿಗೆ ಪಡೆದಿದ್ದೆ. ಸುರಿದ ಅಕಾಲಿಕಮಳೆಯಿಂದಾಗಿ ಕೊಯ್ಲು ಸಂಪೂರ್ಣವಾಗಿ ಮುಗಿಸಲು ಆಗಲಿಲ್ಲ. ಇದೀಗ ಗಿಡಗಳಲ್ಲಿ ಹೂವು ಮೂಡಿದೆ. ಹೀಗಾಗಿ ಹಣ್ಣುಕೊಯ್ಲು ಮಾಡಲು ತೀವ್ರ ತೊಂದರೆ ಆಗಿದೆ. ಎಸ್‌.ಎಸ್‌.ಅಸ್ಲಾಂ, ಕಾಫಿ ಹಾಗೂ ಮೆಣಸು ವರ್ತಕ.

 

ಸುಧೀರ್‌ ಎಸ್‌.ಎಲ್‌

ಟಾಪ್ ನ್ಯೂಸ್

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.