ಲಾಕ್ಡೌನ್ ಪರಿಣಾಮದಿಂದ 30% ಜನರಲ್ಲಿ ಹೆಚ್ಚಾದ ದೇಹದ ತೂಕ..! ಮೂತ್ರಪಿಂಡಕ್ಕೂ ಎಫೆಕ್ಟ್..!


Team Udayavani, Mar 10, 2021, 6:28 PM IST

30% increase in weight-gain since lockdown, its linked to kidney ailments

ಹೈದರಾಬಾದ್ : ನಮ್ಮ ಜಡ ಅಭ್ಯಸಗಳ ಕಾರಣದಿಂದಾಗಿ ನಮ್ಮ ತೂಕ ಹೆಚ್ಚಾಗುವುದು ಸಾಮಾನ್ಯ. ತೂಕ ಹೆಚ್ಚಾಗುವ ಕಾರಣದಿಂದಾಗಿ ನಮ್ಮ ದೇಹದಲ್ಲಿ ಅನೇಕ ಕಾಯಿತೆಗಳಿಗೆ ದಾರಿ ಮಾಡಿ ಕೊಡುತ್ತದೆ.

ಕೋವಿಡ್ 19 ಲಾಕ್ಡೌನ್ ನಲ್ಲಿ ತೂಕ ಹೆಚ್ಚಿಸಿಕೊಂಡವರಲ್ಲಿ ಶೇಕಡಾ 30 ರಷ್ಟು ಜನರಲ್ಲಿ ಕಿಡ್ನಿಗೆ ಸಂಬಂಧಿಸಿದ ಕಾಯಿಲೆ ಕಾಣಿಸಿಕೊಂಡಿದೆ ಎಂದು ಗ್ಲೆನೆಗಲ್ ಗ್ಲೋಬಲ್ ಆಸ್ಪತ್ರೆಯ ವೈದಾಧಿಕಾರಿ ತಿಳಿಸಿದ್ದಾರೆ.

ನಮ್ಮಲ್ಲಿನ ಜಡತ್ವವೇ ಇದಕ್ಕೆ ಕಾರಣ ಎಂದು ಕೂಡ ಅವರು ತಿಳಿಸಿದ್ದಾರೆ. ಶೇಕಡಾ 30 ರಷ್ಟು ಮಂದಿ ಲಾಕ್ಡೌನ್ ಸಂದರ್ಭದಲ್ಲಿ ತೂಕ ಹೆಚ್ಚಿಸಿಕೊಂಡ ಕಾರಣದಿಂದಾಗಿ ತೀವ್ರ ಮಟ್ಟದ ಕಿಡ್ನಿ ಕಾಯಿಲೆಗಳು ಕಾಣಿಸಿಕೊಂಡಿವೆ ಎಂದು ಗ್ಲೆನೆಗಲ್ ಗ್ಲೋಬಲ್ ಆಸ್ಪತ್ರೆಯ ವೈದ್ಯಾಧಿಕಾರಿ, ನೆಫ್ರಾಲಜಿಸ್ಟ್ ಗಂಧೆ ಶ್ರೀಧರ್ ತಿಳಿಸಿದ್ದಾರೆ.

ಓದಿ :  ಈ ಗ್ರಾಮದಲ್ಲಿ ಜೀನ್ಸ್-ಶಾರ್ಟ್ಸ್ ನಿಷೇಧ: ನಿರ್ಬಂಧ ಉಲ್ಲಂಘಿಸಿದ್ರೆ ಬಹಿಷ್ಕಾರದ ಶಿಕ್ಷೆ!

ಕೋವಿಡ್ ಲಾಕ್ಡೌನ್ ಕಾರಣದಿಂದಾಗಿ ನಮ್ಮ ಬದುಕಿನಲ್ಲಿ ಅನೇಕ ರೀತಿಯ ಒತ್ತಡಗಳು ಉಂಟಾಗಿದ್ದು, ಇದು ಹಲವರ ದೇಹ ತೂಕ ಹೆಚ್ಚಾಗುವಲ್ಲಿಯೂ ಪ್ರಮುಖ ಕಾರಣವಾಗಿದೆ. ಲಾಕ್ಡೌನ್ ಸಮಯದಲ್ಲಿ ಹಾಗೂ ಲಾಕ್ಡೌನ್ ತೆರವುಗೊಳಿಸಿದ ನಂತರ ಫಾಸ್ಟ್ ಫುಡ್ ಹಾಗೂ ಆಲ್ಕೋ ಹಾಲ್ ಗಳ ಬಳಕೆ ಜಾಸ್ತಿಯಾಗಿದೆ. ಇದು ಕೂಡ ದೇಹದ ತೂಕ ಹೆಚ್ಚಾಗುವುದಕ್ಕೆ ಕಾರಣವಾಗಿದ್ದು, ಮತ್ತು ಅದು ಮೂತ್ರ ಪಿಂಡದ ಸಮಸ್ಯೆಗೂ ನೇರವಾಗಿ ಕಾರಣವಾಗಿದೆ ಎಂದು ಶ್ರೀಧರ್ ಹೇಳಿದ್ದಾರೆ.

ದೇಹದಲ್ಲಿನ ಬೊಜ್ಜು ನಮ್ಮ ಮೂತ್ರ ಪಿಂಡದ ಕಾಯಿಲೆ ತೀವ್ರ ಮಟ್ಟಕ್ಕೆ ತಿರುಗಲು ಪ್ರಮುಖ ಅಂಶವಾಗಿದೆ. ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಕೊನೆಯ ಹಂತದ ಮೂತ್ರ ಪಿಂಡ ಕಾಯಿಲೆಯ ಮೇಲೂ ಕೂಡ ನೇರ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ಅಧಿಕ ತೂಕವು ಮೂತ್ರಪಿಂಡಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ, ಮತ್ತು ಹೆಚ್ಚುವರಿ ತೂಕವು ಮೂತ್ರಪಿಂಡಗಳು ಗಟ್ಟಿಯಾಗಿ ಕೆಲಸ ಮಾಡಲು ಮತ್ತು ತ್ಯಾಜ್ಯಗಳನ್ನು ಸಾಮಾನ್ಯ ಮಟ್ಟಕ್ಕಿಂತ ಫಿಲ್ಟರ್ ಮಾಡಲು ಒತ್ತಾಯಿಸುತ್ತದೆ. ಬೊಜ್ಜು ಮೂತ್ರಪಿಂಡದ ಕೊಳವೆಯಾಕಾರದ ಸೋಡಿಯಂ ಮರುಹೀರಿಕೆ ಹೆಚ್ಚಿಸುವ ಮೂಲಕ, ಒತ್ತಡದ ನ್ಯಾಟ್ರಿಯುರೆಸಿಸ್ ಅನ್ನು ದುರ್ಬಲಗೊಳಿಸುವ ಮೂಲಕ ಮತ್ತು ನರಮಂಡಲ ಮತ್ತು ರೆನಿನ್-ಆಂಜಿಯೋಟೆನ್ಸಿನ್ ವ್ಯವಸ್ಥೆಯನ್ನು ಸಕ್ರಿಯಗೊಳಿಸುವುದರಿಂದ ಮತ್ತು ಮೂತ್ರಪಿಂಡಗಳ ದೈಹಿಕ ಸಂಕೋಚನದಿಂದ ಪರಿಮಾಣ ವಿಸ್ತರಣೆಗೆ ಕಾರಣವಾಗುತ್ತದೆ.

ಲಾಕ್ಡೌನ್ ಸಂದರ್ಭದಲ್ಲಿ ನಿರುದ್ಯೋಗದ ಸಮಸ್ಯೆ ಒತ್ತಡದ ಮಟ್ಟವನ್ನು ಹೆಚ್ಚಿಸಿತು. ಕೋವಿಡ್ -19 ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಉದ್ಯೋಗ ನಷ್ಟಗಳು ಅಧಿಕ ರಕ್ತದೊತ್ತಡ ಮತ್ತು ಜನರಲ್ಲಿ ಮೆಟಾಬಾಲಿಕ್ ಸಿಂಡ್ರೋಮ್ ಹೆಚ್ಚಳಕ್ಕೆ ಕಾರಣವಾಯಿತು, ಇದು ಮೂತ್ರಪಿಂಡಗಳಿಗೆ ಅಪಾಯಕಾರಿ ಏಕೆಂದರೆ ಇದು ಗ್ಲೋಮೆರುಲಿಯ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ”  ಎಂದು  ಕಾಂಟಿನೆಂಟಲ್ ಆಸ್ಪತ್ರೆಯ ನೆಪ್ರೊಲೊಜಿಸ್ಟ್ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಫಿಸಿಶನ್, ಧನಂಜಯ ಕಪ್ಪಾಡಿ ಲಿಂಗಪ್ಪರೆಡ್ಡಿ ಹೇಳಿದ್ದಾರೆ.

ಗ್ಲೋಮೆರುಲಿ ರಕ್ತವನ್ನು ಸ್ವಚ್ಛಗೊಳಿಸುವ ಮೂತ್ರಪಿಂಡಗಳಲ್ಲಿನ ಸಣ್ಣ ರಕ್ತನಾಳಗಳು,ಮತ್ತು ಕಾಲಾನಂತರದಲ್ಲಿ, ಹೆಚ್ಚಿದ ಒತ್ತಡವು ಈ ನಾಳಗಳನ್ನು ಹಾನಿಗೊಳಿಸುತ್ತದೆ ಮತ್ತು ಮೂತ್ರಪಿಂಡದ ಕಾರ್ಯವು ಕ್ಷೀಣಿಸಲು ಪ್ರಾರಂಭಿಸುತ್ತದೆ. ಈ ಎಲ್ಲಾ ಸನ್ನಿವೇಶಗಳನ್ನು ಗಮನಿಸಿದರೆ, ಜನರು ದೈನಂದಿನ ದೈಹಿಕವಾಗಿ ಸಕ್ರಿಯ ಜೀವನವನ್ನು ನಡೆಸುವುದು ಉತ್ತಮ ಎಂದು ಡಾ. ಧನಂಜಯ ತಿಳಿಸಿದ್ದಾರೆ.

ಓದಿ :  ಭ್ರೂಣ ಹತ್ಯೆ ಸಂಭವಿಸದಂತೆ ಜಾಗೃತರಾಗಿ; ರಾಮಚಂದ್ರನ್

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.